Home / ಕವನ / ಕವಿತೆ / ಅಂಧೇರಿ ನಗರಿ

ಅಂಧೇರಿ ನಗರಿ

ಎಡೆಬಿಡದೇ ಸುರಿದ ಮಳೆಗೆ
ತತ್ತರಿಸಿದ ಮುಂಬೈ ನಗರಿ
ಚೇತರಿಸಿ ಉಸಿರಾಡುತ್ತಿದ್ದಂತೆಯೇ
ಒಂದರ ಹಿಂದೊಂದರಂತೆ
ಸರಣಿ ಬಾಂಬುಗಳ ಸ್ಪೋಟ
ದುರಂತಗಳ ಮಧ್ಯದಲ್ಲಿಯೇ
ಎದ್ದು ನಿಲ್ಲುತ್ತದೆ ಮುಂಬೈನಗರಿ
ಪಿನಿಕ್ಸ್ ಹಕ್ಕಿಯ ಸಾವಿನಂತೆ
ಮತ್ತೆ ಮತ್ತೆ ಸತ್ತು ಬದುಕುತ್ತದೆ
ಮಾಯಾ ನಗರಿ.

ಹಲವಾರು ಜನಾಂಗಗಳು, ಭಾಷೆಗಳು
ಸೌಹಾರ್ದತೆಯಿಂದ ಬದುಕಿವೆಯಿಲ್ಲಿ
ಕಂಡಿವೆ ಬಿನ್ನತೆಗಳ ಮಧ್ಯೆ ಏಕತೆ
ವಾಣಿಜ್ಯ ನಗರಿಯ ಗರ್ಭದಲ್ಲಿಯೇ
ದುರಂತಗಳ ಅಂಧೇರಿ ನಗರಿ
ಕತ್ತಲೆಯಲ್ಲೂ ಝಾಗಝಾಗಿಸುತ್ತದೆ
ಈ ಮಾಯಾ ನಗರಿ ಮಲಗುವುದೇ ಇಲ್ಲ
ಒತ್ತಡಗಳಲ್ಲಿಯೇ ಬದುಕುತ್ತದೆ.

ಥಳುಕು ಬಳುಕಿನ ಬಾಲಿವುಡ್
ತಾರೆಗಳ ಲೋಕ ಇಲ್ಲಿಯೇ ಇದೆ:
ಭೂಗತ ಜಗತ್ತು ಹೆಣೆದ
ಸಾವಿನ ಸುಳಿಗಳೂ ಇಲ್ಲಿಯೇ ಇವೆ.
ದುರಂತ, ತಲ್ಲಣಗಳ ಮರುಕ್ಷಣವೇ
ಬದುಕು ಚಿಗಿಯುತ್ತದೆ ಇಲ್ಲಿ
ವಿಚಲಿತವಾಗದೆಂದೂ ಸ್ಪೋಟಗಳಿಗೆ
ಎದೆ ನಡುಗಿಸುವ ಶಬ್ದಕ್ಕೂ ಹೆದರದೇ
ಜನಜಂಗುಳಿಯ ಹೊತ್ತು ಮುನ್ನಡೆವ
ಲೋಕಲ್ ಟ್ರೇನುಗಳು ಸಾಲು ಸಾಲು
ಒಂದು ಕ್ಷಣ ಗಕ್ಕನೆ ನಿಂತರೆ ಟ್ರೇನು
ಬದುಕು ಸ್ಥಬ್ಧವಾಗುವುದು ಇಲ್ಲಿ.
ಸಾವಿನ ಕರಿನೆರಳುಗಳ ದಾಟಿದರೆ
ಸ್ಫೋಟದ ಶಬ್ದಕ್ಕೆ ಹರಿದ ಕಿವಿಪಟಲ
ಸಾವು ನೋವಿನ ಆರ್ತನಾದ.
ಭೂಗತ ಉಗ್ರರ ಅಟ್ಟಹಾಸ
ಸರಣಿ ಬಾಂಬುಗಳ ಸ್ಫೋಟ
ಯಾವ ಸಾಧನೆಗಾಗಿ?
ಕೂಡಿ ಬಾಳಿದ ಮುಂಬೈಗೆ
ಅನಾದಿಕಾಲದ ಇತಿಹಾಸವಿದೆ.
ಮಾನವೀಯತೆಯ ಉನ್ನತ ಗುಣವಿದೆ.
ಹಂತಕನಿಗೆ ದೇವರಿಲ್ಲ, ಧರ್ಮಗಳಿಲ್ಲ
ಹಿಂಸೆಯ ಆಯುಷ್ಯವೂ ಅತ್ಯಲ್ಪ.
ಕೊಲ್ಲುವ ಹಂತಕನಿಗೂ ಸಾವು ನಿಶ್ಚಿತ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...