Home / ಕವನ / ಕವಿತೆ / ಅಂಧೇರಿ ನಗರಿ

ಅಂಧೇರಿ ನಗರಿ

ಎಡೆಬಿಡದೇ ಸುರಿದ ಮಳೆಗೆ
ತತ್ತರಿಸಿದ ಮುಂಬೈ ನಗರಿ
ಚೇತರಿಸಿ ಉಸಿರಾಡುತ್ತಿದ್ದಂತೆಯೇ
ಒಂದರ ಹಿಂದೊಂದರಂತೆ
ಸರಣಿ ಬಾಂಬುಗಳ ಸ್ಪೋಟ
ದುರಂತಗಳ ಮಧ್ಯದಲ್ಲಿಯೇ
ಎದ್ದು ನಿಲ್ಲುತ್ತದೆ ಮುಂಬೈನಗರಿ
ಪಿನಿಕ್ಸ್ ಹಕ್ಕಿಯ ಸಾವಿನಂತೆ
ಮತ್ತೆ ಮತ್ತೆ ಸತ್ತು ಬದುಕುತ್ತದೆ
ಮಾಯಾ ನಗರಿ.

ಹಲವಾರು ಜನಾಂಗಗಳು, ಭಾಷೆಗಳು
ಸೌಹಾರ್ದತೆಯಿಂದ ಬದುಕಿವೆಯಿಲ್ಲಿ
ಕಂಡಿವೆ ಬಿನ್ನತೆಗಳ ಮಧ್ಯೆ ಏಕತೆ
ವಾಣಿಜ್ಯ ನಗರಿಯ ಗರ್ಭದಲ್ಲಿಯೇ
ದುರಂತಗಳ ಅಂಧೇರಿ ನಗರಿ
ಕತ್ತಲೆಯಲ್ಲೂ ಝಾಗಝಾಗಿಸುತ್ತದೆ
ಈ ಮಾಯಾ ನಗರಿ ಮಲಗುವುದೇ ಇಲ್ಲ
ಒತ್ತಡಗಳಲ್ಲಿಯೇ ಬದುಕುತ್ತದೆ.

ಥಳುಕು ಬಳುಕಿನ ಬಾಲಿವುಡ್
ತಾರೆಗಳ ಲೋಕ ಇಲ್ಲಿಯೇ ಇದೆ:
ಭೂಗತ ಜಗತ್ತು ಹೆಣೆದ
ಸಾವಿನ ಸುಳಿಗಳೂ ಇಲ್ಲಿಯೇ ಇವೆ.
ದುರಂತ, ತಲ್ಲಣಗಳ ಮರುಕ್ಷಣವೇ
ಬದುಕು ಚಿಗಿಯುತ್ತದೆ ಇಲ್ಲಿ
ವಿಚಲಿತವಾಗದೆಂದೂ ಸ್ಪೋಟಗಳಿಗೆ
ಎದೆ ನಡುಗಿಸುವ ಶಬ್ದಕ್ಕೂ ಹೆದರದೇ
ಜನಜಂಗುಳಿಯ ಹೊತ್ತು ಮುನ್ನಡೆವ
ಲೋಕಲ್ ಟ್ರೇನುಗಳು ಸಾಲು ಸಾಲು
ಒಂದು ಕ್ಷಣ ಗಕ್ಕನೆ ನಿಂತರೆ ಟ್ರೇನು
ಬದುಕು ಸ್ಥಬ್ಧವಾಗುವುದು ಇಲ್ಲಿ.
ಸಾವಿನ ಕರಿನೆರಳುಗಳ ದಾಟಿದರೆ
ಸ್ಫೋಟದ ಶಬ್ದಕ್ಕೆ ಹರಿದ ಕಿವಿಪಟಲ
ಸಾವು ನೋವಿನ ಆರ್ತನಾದ.
ಭೂಗತ ಉಗ್ರರ ಅಟ್ಟಹಾಸ
ಸರಣಿ ಬಾಂಬುಗಳ ಸ್ಫೋಟ
ಯಾವ ಸಾಧನೆಗಾಗಿ?
ಕೂಡಿ ಬಾಳಿದ ಮುಂಬೈಗೆ
ಅನಾದಿಕಾಲದ ಇತಿಹಾಸವಿದೆ.
ಮಾನವೀಯತೆಯ ಉನ್ನತ ಗುಣವಿದೆ.
ಹಂತಕನಿಗೆ ದೇವರಿಲ್ಲ, ಧರ್ಮಗಳಿಲ್ಲ
ಹಿಂಸೆಯ ಆಯುಷ್ಯವೂ ಅತ್ಯಲ್ಪ.
ಕೊಲ್ಲುವ ಹಂತಕನಿಗೂ ಸಾವು ನಿಶ್ಚಿತ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...