Home / ಕವನ / ಕವಿತೆ / ಭಾಷೆಯೂ ಅಸ್ತ್ರವಾಗಿದೆ ಇಲ್ಲಿ

ಭಾಷೆಯೂ ಅಸ್ತ್ರವಾಗಿದೆ ಇಲ್ಲಿ

ಆಡುವ ಭಾಷೆಯೂ ರಾಜಕೀಯ ವಿಷಯವಾಗಿದೆ
ಗೂಂಡಾಗಳ ಕೈಯಲ್ಲಿ ಕೂಡುಗತ್ತಿಯಾಗಿದೆ.
ಗಾಂಧಿ, ಅಬ್ದುಲ್ ಗಫಾರ್, ನೆಹರೂರವರನು
ಹಾದಿ ಬೀದಿಯಲ್ಲಿ ಅವಮಾನಿಸುತ್ತಿದ್ದಾರೆ
ಜೇಬುಗಳ್ಳರಿಗಿಲ್ಲಿ ತುಂಬು ಗೌರವದ ಧಿರಿಸು
ಒಳ್ಳೆಯವರಿಗಿಲ್ಲಿ ಕಾಲ ಎಲ್ಲಿದೆ ಹೇಳು?

ಗುಲಾಬಿ ಹೂವಿನ ತುಟಿಗಳ ಮೇಲೆಯೂ
ವಿಷದ ಛಾಯೆ, ದ್ವೇಷದ ಕಿಡಿಯಿದೆಯಲ್ಲ!
ಎಂತಹ ಮಂದಿರ, ಮಸೀದಿ, ಚರ್ಚು ಹೇಳು?
ಎಲ್ಲವೂ ರಾಜಕೀಯ ಧಂದೆಯಾಗಿದೆಯಲ್ಲ!
ದೇವರು, ಧರ್ಮ, ರಾಜಕೀಯ ದಾಳವಾಗಿ
ಹೆದರಿಸುವ ಅವರ ಪರಿ ನೋಡು!

ಮಾರಕಾಸ್ತ್ರಗಳ ಹಿಡಿದು ಅವನು
ಭೂಪಟದ ತುಂಬಾ ಬಾಂಬಿನ ಬೀಜ ಬಿತ್ತುತ್ತಿದ್ದಾನೆ
ಹೂವು ಅರಳುವುದಿಲ್ಲ ಅವನ ಹೊಕ್ಕಳ ನಾಭಿಯಲ್ಲಿ
ಜೀವರಸ ಉಕ್ಕಿ ಹರಿಯುವುದಿಲ್ಲ ಹೃದಯದಲ್ಲಿ
ಪ್ರೀತಿ ಪುಟಿಯುವುದಿಲ್ಲ ನಾಲಿಗೆಯ ಮಾತುಗಳಲ್ಲಿ
ಹಸಿ ತೇವವಿಲ್ಲ, ಹಸಿರು ಚಿಗಿಯುವುದಿಲ್ಲ,
ಬರೀ ಗೋರಿಗಳ ಬಿಕ್ಕಳಿಕೆ ತುಂಬಿದೆಯಲ್ಲ.
ಭಾಷೆಯೂ ರಾಜಕೀಯದ ಅಸ್ತ್ರವಾಗಿದೆಯಲ್ಲ!
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...