Home / ಲೇಖನ / ಇತರೆ / ನಗಿಸಲು ಹುಟ್ಟಿದವರು

ನಗಿಸಲು ಹುಟ್ಟಿದವರು

ಈ ನಮ್ಮ ಗಂಗಾವತಿಯ ಪ್ರಾಣೇಶ್, ಮೈಸೂರಿನ ಕೃಷ್ಣಗೌಡರು. ರಿಚರ್ಡ ಲೂಯಿಸ್, ನರಸಿಂಹ ಜೋಯಿಸ್, ಸುಧಾ ಬರಗೂರು ಮುಂತಾದವರೆಲ್ಲ ಜನರನ್ನು ನಗಿಸಲೆಂದೇ ಹುಟ್ಟಿದವರು.

ಇವರೆಲ್ಲ ನಿತ್ಯ ನಗೆಯ ಟಾನಿಕ್ ಕೈಯಲ್ಲಿ ಹಿಡಿದು ಕುಡಿಯುತ್ತಾ ಜನರಿಗೆ ಕುಡಿಸುತ್ತಾ ಸಂಭ್ರಮಿಸುವ ಸಜ್ಜನರು.

ಈವತ್ತು ಕಾಲ ಯಾವ ಮಟ್ಟಕ್ಕೆ ಹೋಗಿದೆಯೆಂದರೆ… ‘ನಗರಿ ನಗಿಸಿರಿ ಬಾಳಿ ಬದುಕಿ ಕನ್ನಡ ಕಲಿಯಿರಿ ಕಲಿಸಿರಿ…’ ಎಂದು ಜನರ ಮುಂದೆ ಬೊಬ್ಬೆ ಹೊಡೆಯೋ ಕಾಲ ಬಂದು ಬಿಟ್ಟಿದೆ.

ಅವರ ನಗೆಯ ಹಬ್ಬದಲ್ಲಿ ಪಾಲ್ಗೊಂಡು “ನಾನು ನಗಲಿಲ್ಲ. ನನ್ನ ನಗಿಸಲು ಅವರ ಕೈಲಿ ಆಗಲಿಲ್ಲ” ಎಂದು ಯಾರಾದರು ಹೇಳಿದರೆ ಅವರಿಗೆ ನಗದು ರೂಪದಲ್ಲಿ ಬಹುಮಾನ ಸನ್ಮಾನ ಮಾಡುವುದಾಗಿ ಇವರೆಲ್ಲ ಸಾರಿಕೊಂಡಂತೇ ನಗಿಸುವಲ್ಲಿ ನೂರಕ್ಕೆ ನೂರರಷ್ಟು ಫಲಪ್ರದವಾಗಿದ್ದಾರೆ.

ಒಮ್ಮೆ ನಕ್ಕರೆ ಹಾಲು ಸಕ್ಕರೆ ದಿನವೂ ನಕ್ಕರೆ ಆಯುಷ್ಯ ಹೆಚ್ಚುರೀ. ವರ್ಷದೂದ್ದಕ್ಕೂ ನಕ್ಕರೆ ಡಾಕ್ಟರ್ ದೂರಾರೀ… ಜೀವನದಲ್ಲಿ ಇದಕ್ಕಿನ್ನಾ ಇನ್ನೇನು ಬೇಕೂರೀ… ?!

ಮುಖ ಗಂಟಿಟ್ಟುಕೊಂಡು ಇರುವುದರಿಂದ ದೇಹದಲ್ಲಿರುವ ರಸದೂತಗಳು ಹಾರ್ಮೋನುಗಳು ಸುಪ್ತವಾಗಿರುತ್ತವೆ. ಸೋಂಕು ಪ್ರತಿರೋಧಕ ಕೋಶಗಳ ಸಂಖ್ಯೆಯನ್ನು ಕುಗ್ಗಿಸುತ್ತಾ ಹೋಗುವುದು. ಎಂಡಾರ್ಫಿನ್ ರಾಸಾಯನಿಕಗಳು ಬಿಡುಗಡೆಯಾಗುವುದಿಲ್ಲ.

ಒಂದೇ ಒಂದು ನಗು ಮನಸ್ಸು ಬಿಚ್ಚಿ ನಕ್ಕು ಬಿಟ್ಟರೆ ಇವೆಲ್ಲ ಸುಗಮವಾಗಿ ಕೆಲಸ ಮಾಡಲು ಶುರುವಾಗುತ್ತವೆ.

ರಕ್ತ ಸಂಚಾರ ಹೆಚ್ಚಿ ಹೃದಯದ ಆರೋಗ್ಯ ಹೆಚ್ಚಿ ಮೆದುಳು ಚುರುಕಾಗಿ ಬುದ್ಧಿಯ ವೇಗ ಹೆಚ್ಚುವುದು.

ನಗುವೊಂದು ಆಭರಣ. ಮನಸ್ಸನ್ನು ಲಕಲಕ ಹೊಳೆಯುವಂತೆ ಮಾಡುವುದು. ನಾನು ಆರೋಗ್ಯವಾಗಿದ್ದೇನೆ. ಚೆನ್ನಾಗಿ ಕಾಣುತ್ತಿದ್ದೇನೆ. ನನ್ನಲ್ಲಿಯೂ ಶಕ್ತಿಯಿದೆ. ಸಾಧಿಸಿ ತೋರಿಸುವೆ ಎಂಬ ಹುಮ್ಮಸ್ಸು ಒಂದು ನಗು ನೀಡುವುದು. ಏನೆಲ್ಲ ನಿವಾರಿಸುವ ಶಕ್ತಿಯುಕ್ತಿ ಹುರುಪು ಉತ್ಸಾಹ ನಗುವಿಗಿದೆ.

ಒಂದು ನಗು ಸಾಧಿಸಿದ್ದನ್ನು ನೂರು ಹಗೆ ಸಾಧಿಸಿಲ್ಲ! ಎಂಬುದನ್ನು ನಾವೆಲ್ಲ ನೆನೆಯುತ್ತಾ ನಗುನಗುತ್ತಾ ನೂರಾರು ವರ್ಷ ಬಾಳಿದರೆ ಚೆನ್ನಲ್ಲವೇ? ನಿಜವಾದ ಚಿನ್ನ, ರನ್ನ, ಮುತ್ತು, ಹವಳವಲ್ಲವೇ?

ಇವರೆಲ್ಲ ನಗೆಯ ಆಭರಣಗಳನ್ನು ಬಳ್ಳದಿಂದ ಊರಿಂದ ಊರಿಗೆ ಅಳೆದು ಮಾರುತ್ತಿರುವರು ಕೊಳ್ಳಿರಿ ನಗೆಯ ಸಿರಿಯ ಹರಿಯ ತೊರೆಯ…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...