Home / ಲೇಖನ / ಇತರೆ / ನಗಿಸಲು ಹುಟ್ಟಿದವರು

ನಗಿಸಲು ಹುಟ್ಟಿದವರು

ಈ ನಮ್ಮ ಗಂಗಾವತಿಯ ಪ್ರಾಣೇಶ್, ಮೈಸೂರಿನ ಕೃಷ್ಣಗೌಡರು. ರಿಚರ್ಡ ಲೂಯಿಸ್, ನರಸಿಂಹ ಜೋಯಿಸ್, ಸುಧಾ ಬರಗೂರು ಮುಂತಾದವರೆಲ್ಲ ಜನರನ್ನು ನಗಿಸಲೆಂದೇ ಹುಟ್ಟಿದವರು.

ಇವರೆಲ್ಲ ನಿತ್ಯ ನಗೆಯ ಟಾನಿಕ್ ಕೈಯಲ್ಲಿ ಹಿಡಿದು ಕುಡಿಯುತ್ತಾ ಜನರಿಗೆ ಕುಡಿಸುತ್ತಾ ಸಂಭ್ರಮಿಸುವ ಸಜ್ಜನರು.

ಈವತ್ತು ಕಾಲ ಯಾವ ಮಟ್ಟಕ್ಕೆ ಹೋಗಿದೆಯೆಂದರೆ… ‘ನಗರಿ ನಗಿಸಿರಿ ಬಾಳಿ ಬದುಕಿ ಕನ್ನಡ ಕಲಿಯಿರಿ ಕಲಿಸಿರಿ…’ ಎಂದು ಜನರ ಮುಂದೆ ಬೊಬ್ಬೆ ಹೊಡೆಯೋ ಕಾಲ ಬಂದು ಬಿಟ್ಟಿದೆ.

ಅವರ ನಗೆಯ ಹಬ್ಬದಲ್ಲಿ ಪಾಲ್ಗೊಂಡು “ನಾನು ನಗಲಿಲ್ಲ. ನನ್ನ ನಗಿಸಲು ಅವರ ಕೈಲಿ ಆಗಲಿಲ್ಲ” ಎಂದು ಯಾರಾದರು ಹೇಳಿದರೆ ಅವರಿಗೆ ನಗದು ರೂಪದಲ್ಲಿ ಬಹುಮಾನ ಸನ್ಮಾನ ಮಾಡುವುದಾಗಿ ಇವರೆಲ್ಲ ಸಾರಿಕೊಂಡಂತೇ ನಗಿಸುವಲ್ಲಿ ನೂರಕ್ಕೆ ನೂರರಷ್ಟು ಫಲಪ್ರದವಾಗಿದ್ದಾರೆ.

ಒಮ್ಮೆ ನಕ್ಕರೆ ಹಾಲು ಸಕ್ಕರೆ ದಿನವೂ ನಕ್ಕರೆ ಆಯುಷ್ಯ ಹೆಚ್ಚುರೀ. ವರ್ಷದೂದ್ದಕ್ಕೂ ನಕ್ಕರೆ ಡಾಕ್ಟರ್ ದೂರಾರೀ… ಜೀವನದಲ್ಲಿ ಇದಕ್ಕಿನ್ನಾ ಇನ್ನೇನು ಬೇಕೂರೀ… ?!

ಮುಖ ಗಂಟಿಟ್ಟುಕೊಂಡು ಇರುವುದರಿಂದ ದೇಹದಲ್ಲಿರುವ ರಸದೂತಗಳು ಹಾರ್ಮೋನುಗಳು ಸುಪ್ತವಾಗಿರುತ್ತವೆ. ಸೋಂಕು ಪ್ರತಿರೋಧಕ ಕೋಶಗಳ ಸಂಖ್ಯೆಯನ್ನು ಕುಗ್ಗಿಸುತ್ತಾ ಹೋಗುವುದು. ಎಂಡಾರ್ಫಿನ್ ರಾಸಾಯನಿಕಗಳು ಬಿಡುಗಡೆಯಾಗುವುದಿಲ್ಲ.

ಒಂದೇ ಒಂದು ನಗು ಮನಸ್ಸು ಬಿಚ್ಚಿ ನಕ್ಕು ಬಿಟ್ಟರೆ ಇವೆಲ್ಲ ಸುಗಮವಾಗಿ ಕೆಲಸ ಮಾಡಲು ಶುರುವಾಗುತ್ತವೆ.

ರಕ್ತ ಸಂಚಾರ ಹೆಚ್ಚಿ ಹೃದಯದ ಆರೋಗ್ಯ ಹೆಚ್ಚಿ ಮೆದುಳು ಚುರುಕಾಗಿ ಬುದ್ಧಿಯ ವೇಗ ಹೆಚ್ಚುವುದು.

ನಗುವೊಂದು ಆಭರಣ. ಮನಸ್ಸನ್ನು ಲಕಲಕ ಹೊಳೆಯುವಂತೆ ಮಾಡುವುದು. ನಾನು ಆರೋಗ್ಯವಾಗಿದ್ದೇನೆ. ಚೆನ್ನಾಗಿ ಕಾಣುತ್ತಿದ್ದೇನೆ. ನನ್ನಲ್ಲಿಯೂ ಶಕ್ತಿಯಿದೆ. ಸಾಧಿಸಿ ತೋರಿಸುವೆ ಎಂಬ ಹುಮ್ಮಸ್ಸು ಒಂದು ನಗು ನೀಡುವುದು. ಏನೆಲ್ಲ ನಿವಾರಿಸುವ ಶಕ್ತಿಯುಕ್ತಿ ಹುರುಪು ಉತ್ಸಾಹ ನಗುವಿಗಿದೆ.

ಒಂದು ನಗು ಸಾಧಿಸಿದ್ದನ್ನು ನೂರು ಹಗೆ ಸಾಧಿಸಿಲ್ಲ! ಎಂಬುದನ್ನು ನಾವೆಲ್ಲ ನೆನೆಯುತ್ತಾ ನಗುನಗುತ್ತಾ ನೂರಾರು ವರ್ಷ ಬಾಳಿದರೆ ಚೆನ್ನಲ್ಲವೇ? ನಿಜವಾದ ಚಿನ್ನ, ರನ್ನ, ಮುತ್ತು, ಹವಳವಲ್ಲವೇ?

ಇವರೆಲ್ಲ ನಗೆಯ ಆಭರಣಗಳನ್ನು ಬಳ್ಳದಿಂದ ಊರಿಂದ ಊರಿಗೆ ಅಳೆದು ಮಾರುತ್ತಿರುವರು ಕೊಳ್ಳಿರಿ ನಗೆಯ ಸಿರಿಯ ಹರಿಯ ತೊರೆಯ…
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...