Home / ಕವನ / ಕವಿತೆ / ನಾಡಕಾಳೆ

ನಾಡಕಾಳೆ

ನನ್ನ ನಾಡ ಚೆನ್ನ ನಾಡ
ಬನ್ನ ಬಡುತ ಪೊರೆಯುವ
ನನ್ನಿಯಿಂದ ತಾಯಿನಾಡ
ಹೊನ್ನ ಸಿರಿಯ ಬೆಳಗುವ
ನಾಡ ಬವರ ಬವಣೆಯಲ್ಲಿ
ಜೀವವನ್ನು ನೀಡುವ
ಹೇಡಿತನವ ಹೊಡೆದು ಹಾಕಿ
ರೂಢಿಯಲ್ಲಿ ಮರೆಯುವ
ನಾಡನುಡಿಯ ನಾಡನಡೆಯ
ನಾಡಿನಲ್ಲಿ ನಡಿಸುವ
ಕಾಡುತಿರುವ ಕಾಡು ಜನರ
ಕೋಡು ತಾನೆ ಉಡಿಯುವ
ನಾಡಮೇಲೆ ನೋಡಿಯೊಡಲು
ಪೊಡವಿಯೊಡೆಯನಡಿಯಲಿ
ಬೇಡಿಕೊಂಡು ಪೊಡವಿಗಿಳಿದು
ಬಡವಂಗೆ ಬಡಿಸಲಿ
ಚತುರತನದೆ ಜಾತಿಮತವ
ರೀತಿನೀತಿಗಿಳಿಸುವ
ಜಾತಿಮತಕೆ ಸೋತುಬಿದ್ದ
ಮಾತೆಯನ್ನು ಎತ್ತುವ
ಜಾತಿಬೆಳೆಸಿ ಆತುಕೊಂಡು
ಘಾತಿಸಿರ್ಪ ಜನರನು
ಭೀತಿ ಬಿಡಿಸಿ ಕೂತುಬಿಟ್ಟು,
ಸಾತಿಶಯದೆ ಮೆರೆಯುವ
ನನ್ನ ಮಾತು ನಿನ್ನ ಮಾತು
ಹೊನ್ನ ಮಾತದೆನ್ನದೆ
ಉನ್ನತಾಗ್ರಸಭೆಯಮಾತು
ಮನ್ನಿಸೆಲ್ಲ ನಡೆಯುವ
ಕಾವನನ್ನು ಕಾಂಬ ಬಗೆಯ
ಕಾಣೆ ಬೇರೆ ತೆರದಲಿ
ನಾಡ ಸೇವೆಗಾಗಿ ತನುವ
ನೀಡೆ ದೇವ ಕಾಂಬನು
ದೇವರಿಂದ ಬಂದ ನಾವು
ದೇವರಾಗಿ ಮೆರೆಯುವ
ಜೀವಕಂಜಿ ಹೆದರಿ ಹೆದರಿ
ಸಾವ ಜನರ ಕರೆಯುವ
೧೦
ನಾಡಧರ್ಮ ರೂಢಿಯಲ್ಲಿ
ನಾಡೆ ತಾನೆ ನಡಿಸುವ
ನಾಡದೇವಿ ಬೀಡಿನಲ್ಲಿ
ಕೂಡಿಯಾಡಿ ಮರೆಯುವ
*****
Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...