Home / ಲೇಖನ / ಇತರೆ / ಉಳ್ಳಾಗಡ್ಡಿ ಕತೆ

ಉಳ್ಳಾಗಡ್ಡಿ ಕತೆ

ದಿನಾಂಕ ೩೧-೦೭-೨೦೧೫ ರಂದು ಉಳ್ಳಾಗಡ್ಡಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದುಗದ್ದಲ ಜೋರಾಗಿಯೇ ಮಾಡುತ್ತಿದೆ ! ದಿನದಿಂದ ದಿನಕ್ಕೆ ಉಳ್ಳಾಗಡ್ಡಿ ದರ ರಾಕೇಟ್ ವೇಗದಲ್ಲಿ ಆಕಾಶದತ್ತ ಹಾರುತ್ತಿದೆ. ಕೇಜಿ ಒಂದಕ್ಕೆ ೬೦ ರಿಂದ ೭೦ ಅಂದರೂ ಮಾರುಕಟ್ಟೆಯಲ್ಲಿ ದಾಸ್ತಾನು-ಸರಬರಾಜು ಇಲ್ಲವೇ ಇಲ್ಲ.

ಕೆಂಪು ಉಳ್ಳಾಗಡ್ಡಿ- ಔಷಧಿ ಉಳ್ಳಾಗಡ್ಡಿಯಿದು. ಇದಂತೂ ಮಾರುಕಟ್ಟೆಯಲ್ಲಿ ದುರ್ಬೀನ್ ಹಾಕಿ ಹುಡುಕಿದರೂ ದಾಸ್ತಾನು ಇಲ್ಲ ! ಒಂದು ನೂರು ರೂಪಾಯಿ ಎಂದರೂ ಉಳ್ಳಾಗಡ್ಡಿ ಲಭ್ಯವಿಲ್ಲ !

ಈ ಉಳ್ಳಾಗಡ್ಡಿಯಲ್ಲಿ ಅಲ್ಲಿಲ್ ಪ್ರೊಪೈಲ್ ಡಿಸ್‌ಅಲೈಡ್, ಅಲಿಸಿನ್ ಎಂಬ ಔಷಧಿಯುಕ್ತ ರಾಸಾಯನಿಕಗಳಿವೆ. ಇವು ಮಧುಮೇಹಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಅಜೀರ್ಣತೆಯನ್ನು ಹೊಗಲಾಡಿಸುವುದು.

ಉಳ್ಳಾಗಡ್ಡಿಯನ್ನು ನಿತ್ಯ ಮೂರು ಹೊತ್ತು ಊಟ-ತಿಂಡಿಯೊಂದಿಗೆ ನಿಯತವಾಗಿ ಸೇವಿಸುವುದರಿಂದ ತೂಕ ಕಡಿಮೆಯಾಗುವುದು. ಬೊಜ್ಜು ನಿವಾರಣೆಯಾಗುವುದು. ಬಾಯಾರಿಕೆ ನೀಗುವುದು.

ತುರಿಕೆ ಬಂದ ಕಡೆಗೆಲ್ಲ- ಚೇಳು ಇತರೆ ವಿಷಯುಕ್ತ ಕ್ರಿಮಿಕೀಟಗಳು ಕಡಿದಲ್ಲಿ ಕಡಿದ ಜಾಗೆಗೆ ಉಳ್ಳಾಗಡ್ಡಿ ರಸದಿಂದ ತಿಕ್ಕಿದರೆ ಉಪಶಮನವಾಗುವುದು.

ಉಳ್ಳಾಗಡ್ಡಿಯನ್ನು ಬೇಸಿಗೆ ಮಳೆಗಾಲದ ಬೆಳೆಯಾಗಿ ಬೆಳೆಯುವರು. ಉಳ್ಳಾಗಡ್ಡಿಯಿಲ್ಲದೆ ತಿಂಡಿತೀರ್ಥ ಊಟ ಕೂಡಾ ರುಚಿಸದು. ಇದನ್ನು ಮಸಾಲೆಯಂತೆ ಬಳಸುವರು. ಮನುಷ್ಯನ ಆರೋಗ್ಯಕ್ಕೆ ಇದು ಹೇಗೆ ಉಪಯುಕ್ತವೋ ಹಾಗೆ ಪ್ರಾಣಿಗಳ ಆರೋಗ್ಯಕ್ಕೆ ಬೇಕೆಬೇಕು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...