Home / ಕವನ / ಕವಿತೆ / ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ! ಸರ್‍ಕಸ್ ಸಿಮ್ಮ !
ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ!
ಔನ್ಗೆ ಯೆದರಿ ಬಾಲಾ ಮುದರಿ
ಮೂಲ್ಯಾಗ್ ಮುದರ್‍ಕೊಬೇಕ ?
ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ?
ಔನ್ಗೆ ಯೆದರ್‍ಕೊಬೇಕ ! ೧

ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ!
ಯೋಳಾಕ್ ಬಂದ್ರೆ ಸಿರ್ರಂತ್ ರೇಗ್ತಿ!
ಕೂಕ್ಕೊಂಡ್ ಕಚ್ಚೊಕ್ ಮೇಲ್ ಆರ್‍ಬರ್‍ತಿ !
ಯೋನ್ ಯೋಳಾನೆ ಸಿಮ್ಮ !
ಮಕ್ಕಳ್ ಇಡಿದಂಗ್ ಇಡಿದೈತ್ ನಿನ್ನ
ಕಮ್ಚಿ ಯಿಡಿಯೋ ಗುಮ್ಮ! ೨

ದುಡಿಯೋನ್ ನೀನು ! ಪಡೆಯೋನ್ ಔನು !
ಬೋನ್ ನಿನಗಾದ್ರೆ ಔನ್ಗೆ ಗೌನು !
ದುಡ್ದೀ ದುಡ್ಡೀ ದುಡ್ಡಿನ್ ಬೆಟ್ಟ
ನೀ ಮಾಡಾಕು ! ಪೇರ್‍ಸು !
ನಿನ್ ದುಡ್ನಲ್ಲೆ ತಕ್ಕೋಂತ್ ಒಂದ್ ಕಾಸ್
ನಿಂಗ್ ಔನ್ ಎಸದ್ರೆ ಸೈರ್‍ಸು! ೩

ಮೈ ನಿಂಗ್ ಐತೆ ! ಮನಸ್ ನಿಂಗ್ ಇಲ್ಲ ?
ಮನಸೂ ಐತೊ ! ನೀನ್ ನೋಡಾಲ್ಲ !
ಸಕ್ತಿ ಅದೆ ! ಉಕ್ತಾ ಅದೆ !
ನಿಂಗೆ ಎಲ್ಲಾ ಅದೆ !
ಸರಪ್ಣಿ ಬಿಕ್ಕೊಂಡ್ ಸುಂಕ್ ಯಾಕ್ ಇರಬೇಕ್?
ಯೆತ್ ಅದನ್ ಆಚೇಗ್ ಒದೆ ! ೪

ಬೂಮೀಲ್ ಮನ್ಸ ನೀರಲ್ ಮೀನು
ಮೇಲ್ ನಕ್ಸತ್ರ-ಎಲ್ಕು ನೀನು-
ಪರಪಂಚ್ಜೆಲ್ಲ ವೊಡೆಯ ನೀನು!
ಯೇನ್ ಯೋಳಾನೆ ನಿನ್ಗೆ !
ಗುಡಿಸೋ ಪೊರಕೆ ಆಗೋದ್ನಲ್ಲ
ಯೆಜಮಾನ್ನೇನೆ ಮನ್ಗೆ ! ೫

ಕಮ್ಚೀಗಾ ನೀನ್ ಎದರ್‍ಕೊಬೇಕು ?
‘ಹ್ಙೂ’ ಅಂತ್ ಒದರಿ ಗರ್‍ಜಿಸ್ ಸಾಕು !
ಮೈನಾಗ್ ಕೂದ್ಲು ಶಠಂ ಅಂತ್ ಇರ್‍ಲಿ !
ಬಾಲದ್ ಬಾವ್ತ ಯೇರ್‍ಲಿ !
ಕಮ್ಚಿ ಯಿಡಕೊಂಡ್ ಯಾವೋನ್ ಬತ್ತಾನ್
ನೋಡ್ಙೌ ಬರೋನ್ ಬರ್‍ಲಿ! ೬
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...