Home / ಕವನ / ಕವಿತೆ / ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ! ಸರ್‍ಕಸ್ ಸಿಮ್ಮ !
ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ!
ಔನ್ಗೆ ಯೆದರಿ ಬಾಲಾ ಮುದರಿ
ಮೂಲ್ಯಾಗ್ ಮುದರ್‍ಕೊಬೇಕ ?
ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ?
ಔನ್ಗೆ ಯೆದರ್‍ಕೊಬೇಕ ! ೧

ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ!
ಯೋಳಾಕ್ ಬಂದ್ರೆ ಸಿರ್ರಂತ್ ರೇಗ್ತಿ!
ಕೂಕ್ಕೊಂಡ್ ಕಚ್ಚೊಕ್ ಮೇಲ್ ಆರ್‍ಬರ್‍ತಿ !
ಯೋನ್ ಯೋಳಾನೆ ಸಿಮ್ಮ !
ಮಕ್ಕಳ್ ಇಡಿದಂಗ್ ಇಡಿದೈತ್ ನಿನ್ನ
ಕಮ್ಚಿ ಯಿಡಿಯೋ ಗುಮ್ಮ! ೨

ದುಡಿಯೋನ್ ನೀನು ! ಪಡೆಯೋನ್ ಔನು !
ಬೋನ್ ನಿನಗಾದ್ರೆ ಔನ್ಗೆ ಗೌನು !
ದುಡ್ದೀ ದುಡ್ಡೀ ದುಡ್ಡಿನ್ ಬೆಟ್ಟ
ನೀ ಮಾಡಾಕು ! ಪೇರ್‍ಸು !
ನಿನ್ ದುಡ್ನಲ್ಲೆ ತಕ್ಕೋಂತ್ ಒಂದ್ ಕಾಸ್
ನಿಂಗ್ ಔನ್ ಎಸದ್ರೆ ಸೈರ್‍ಸು! ೩

ಮೈ ನಿಂಗ್ ಐತೆ ! ಮನಸ್ ನಿಂಗ್ ಇಲ್ಲ ?
ಮನಸೂ ಐತೊ ! ನೀನ್ ನೋಡಾಲ್ಲ !
ಸಕ್ತಿ ಅದೆ ! ಉಕ್ತಾ ಅದೆ !
ನಿಂಗೆ ಎಲ್ಲಾ ಅದೆ !
ಸರಪ್ಣಿ ಬಿಕ್ಕೊಂಡ್ ಸುಂಕ್ ಯಾಕ್ ಇರಬೇಕ್?
ಯೆತ್ ಅದನ್ ಆಚೇಗ್ ಒದೆ ! ೪

ಬೂಮೀಲ್ ಮನ್ಸ ನೀರಲ್ ಮೀನು
ಮೇಲ್ ನಕ್ಸತ್ರ-ಎಲ್ಕು ನೀನು-
ಪರಪಂಚ್ಜೆಲ್ಲ ವೊಡೆಯ ನೀನು!
ಯೇನ್ ಯೋಳಾನೆ ನಿನ್ಗೆ !
ಗುಡಿಸೋ ಪೊರಕೆ ಆಗೋದ್ನಲ್ಲ
ಯೆಜಮಾನ್ನೇನೆ ಮನ್ಗೆ ! ೫

ಕಮ್ಚೀಗಾ ನೀನ್ ಎದರ್‍ಕೊಬೇಕು ?
‘ಹ್ಙೂ’ ಅಂತ್ ಒದರಿ ಗರ್‍ಜಿಸ್ ಸಾಕು !
ಮೈನಾಗ್ ಕೂದ್ಲು ಶಠಂ ಅಂತ್ ಇರ್‍ಲಿ !
ಬಾಲದ್ ಬಾವ್ತ ಯೇರ್‍ಲಿ !
ಕಮ್ಚಿ ಯಿಡಕೊಂಡ್ ಯಾವೋನ್ ಬತ್ತಾನ್
ನೋಡ್ಙೌ ಬರೋನ್ ಬರ್‍ಲಿ! ೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...