Home / ಕವನ / ಕವಿತೆ / ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ಸರ್‍ಕಸ್ ಸಿಮ್ಮ

ನಾಡಿನ್ ಬಡವ ! ಸರ್‍ಕಸ್ ಸಿಮ್ಮ !
ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ!
ಔನ್ಗೆ ಯೆದರಿ ಬಾಲಾ ಮುದರಿ
ಮೂಲ್ಯಾಗ್ ಮುದರ್‍ಕೊಬೇಕ ?
ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ?
ಔನ್ಗೆ ಯೆದರ್‍ಕೊಬೇಕ ! ೧

ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ!
ಯೋಳಾಕ್ ಬಂದ್ರೆ ಸಿರ್ರಂತ್ ರೇಗ್ತಿ!
ಕೂಕ್ಕೊಂಡ್ ಕಚ್ಚೊಕ್ ಮೇಲ್ ಆರ್‍ಬರ್‍ತಿ !
ಯೋನ್ ಯೋಳಾನೆ ಸಿಮ್ಮ !
ಮಕ್ಕಳ್ ಇಡಿದಂಗ್ ಇಡಿದೈತ್ ನಿನ್ನ
ಕಮ್ಚಿ ಯಿಡಿಯೋ ಗುಮ್ಮ! ೨

ದುಡಿಯೋನ್ ನೀನು ! ಪಡೆಯೋನ್ ಔನು !
ಬೋನ್ ನಿನಗಾದ್ರೆ ಔನ್ಗೆ ಗೌನು !
ದುಡ್ದೀ ದುಡ್ಡೀ ದುಡ್ಡಿನ್ ಬೆಟ್ಟ
ನೀ ಮಾಡಾಕು ! ಪೇರ್‍ಸು !
ನಿನ್ ದುಡ್ನಲ್ಲೆ ತಕ್ಕೋಂತ್ ಒಂದ್ ಕಾಸ್
ನಿಂಗ್ ಔನ್ ಎಸದ್ರೆ ಸೈರ್‍ಸು! ೩

ಮೈ ನಿಂಗ್ ಐತೆ ! ಮನಸ್ ನಿಂಗ್ ಇಲ್ಲ ?
ಮನಸೂ ಐತೊ ! ನೀನ್ ನೋಡಾಲ್ಲ !
ಸಕ್ತಿ ಅದೆ ! ಉಕ್ತಾ ಅದೆ !
ನಿಂಗೆ ಎಲ್ಲಾ ಅದೆ !
ಸರಪ್ಣಿ ಬಿಕ್ಕೊಂಡ್ ಸುಂಕ್ ಯಾಕ್ ಇರಬೇಕ್?
ಯೆತ್ ಅದನ್ ಆಚೇಗ್ ಒದೆ ! ೪

ಬೂಮೀಲ್ ಮನ್ಸ ನೀರಲ್ ಮೀನು
ಮೇಲ್ ನಕ್ಸತ್ರ-ಎಲ್ಕು ನೀನು-
ಪರಪಂಚ್ಜೆಲ್ಲ ವೊಡೆಯ ನೀನು!
ಯೇನ್ ಯೋಳಾನೆ ನಿನ್ಗೆ !
ಗುಡಿಸೋ ಪೊರಕೆ ಆಗೋದ್ನಲ್ಲ
ಯೆಜಮಾನ್ನೇನೆ ಮನ್ಗೆ ! ೫

ಕಮ್ಚೀಗಾ ನೀನ್ ಎದರ್‍ಕೊಬೇಕು ?
‘ಹ್ಙೂ’ ಅಂತ್ ಒದರಿ ಗರ್‍ಜಿಸ್ ಸಾಕು !
ಮೈನಾಗ್ ಕೂದ್ಲು ಶಠಂ ಅಂತ್ ಇರ್‍ಲಿ !
ಬಾಲದ್ ಬಾವ್ತ ಯೇರ್‍ಲಿ !
ಕಮ್ಚಿ ಯಿಡಕೊಂಡ್ ಯಾವೋನ್ ಬತ್ತಾನ್
ನೋಡ್ಙೌ ಬರೋನ್ ಬರ್‍ಲಿ! ೬
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...