Home / ಕಥೆ / ಕಾದಂಬರಿ / ಮಲ್ಲಿ – ೪೯

ಮಲ್ಲಿ – ೪೯

ಬರೆದವರು: Thomas Hardy / Tess of the d’Urbervilles

ನಾಯಕನು ಮಹಾರಾಜರನ್ನು ನೋಡುವುದಕ್ಕೆಂದು ಮೈಸೂರಿಗೆ ಹೋಗಿದ್ದಾನೆ. ಮಜ್ಜಿಗೆ ಹಳ್ಳಿಯ ಅರಮನೆಯಲ್ಲಿ ಗದ್ದಲವೋ ಗದ್ದಲ, ಆ ರಾತ್ರಿ ಮಲ್ಲಿಯು ಮಂಚದ ಮೇಲೆ ಮಲಗಬೇಕು ಎಂದು ರಾಣಿಯ ಆಸೆ. ಬುದ್ದಿಯವರಿಲ್ಲದೆ ತಾನು ಮಂಚದ ಮೇಲೆ ಮಲಗು ವುದಿಲ್ಲವೆಂದು ಅವಳ ಹಟ.

“ಹಾಗಾದರೆ ಎಲ್ಲಿ ಮಲಗುತ್ತೀಯೇ?”

“ಇಲ್ಲೇ ಒಂದು ಚಾಪೆಯ ಮೇಲೆ!”

“ಕೂಡದು. ನಾನೂ ನಿನ್ನ ಜೊತೆಗೇ ಬರುತ್ತೇನೆ.”

ಉಂಟಾ ಬುದ್ಧಿ, ತಮ್ಮ ಮೈ ಒತ್ತುತ್ತದೆ. ಕೂಡದು.”

“ನಿನಗೆ ಒತ್ತೋಕಿಲ್ಲವಾ?”

“ಬಾಳೇಹಣ್ಣಿನ ಗುಡಾಣದಲ್ಲಿ ಬೆಳೆದದ್ದು ಅಲ್ವಾ!”

“ಅಲ್ಲಾ, ಮಲ್ಲಮ್ಮಣ್ಕಿ ನೀನು ಹಿಂಗನ್ನೋದು ನ್ಯಾಯವಾ? ಜೊತೆ ಜೊತೆ ಎತ್ತುಗಳ ಹಂಗಲ್ಲವಾ ನಾವು. ನಿನಗೆ ಬೇಡವಾದ್ದು ನನಗೆ ಬೇಕಾದೀತಾ? ಬುಡು.?

“ಬುದ್ಧಿ, ತಾವು ಹಂಗನ್ನಬಾರದು. ತಾವು ಮಹಾಲಕ್ಷ್ಮಿ ಹಂಗೆ ದೊಡ್ಡ ಮನೆಯಲ್ಲಿ ಹುಟ್ಟಿ ಅರಮನೆ ಸೇರಿದವರು. ತಮ್ಮ ಮನಸ್ಸಿಗೆ ನೋವಾಗೋ ಹಂಗಿದ್ದರೆ, ಆಗಲಿ. ತಮ್ಮ ಪಾದದಲ್ಲಿ ಉರುಟು ಕೋತೀನಿ. ಆದರೂ ಬುದ್ದಿ, ಅಭ್ಯಾಸ ಆಗಲಿ, ಬಿಡಬಾರದಾ?”

ಅವಳ ಪ್ರಾರ್ಥನೆಯಲ್ಲಿ ಏನೋ ಗುರುತಿಸುವುದಕ್ಕೂ ಕಷ್ಟವಾದ ಭಾವವಿತ್ತು. ರಾಣಿಯು ಅದನ್ನು ಸಹಿಸಲಾರದೆ ಅವಳನ್ನು ಬಿಟ್ಟು ಎರಡು ಹೆಜ್ಜೆ ಹೋಗಿದ್ದವಳು ಒಂದಿರುಗಿ ಬಂದು ಮಾತೇ ಆಡದೆ ಅವಳ ನಡುವಿಗೆ ಕೈಹಾಕಿ ಕೆರೆದುಕೊಂಡು ಹೋಗಿ ಹಾಸುಗೆಯ ಮೇಲೆ ಮಲಗಿಸಿ ಕೊಂಡಳು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...