Home / ಕಥೆ / ಕಾದಂಬರಿ / ಮಲ್ಲಿ – ೪೯

ಮಲ್ಲಿ – ೪೯

ಬರೆದವರು: Thomas Hardy / Tess of the d’Urbervilles

ನಾಯಕನು ಮಹಾರಾಜರನ್ನು ನೋಡುವುದಕ್ಕೆಂದು ಮೈಸೂರಿಗೆ ಹೋಗಿದ್ದಾನೆ. ಮಜ್ಜಿಗೆ ಹಳ್ಳಿಯ ಅರಮನೆಯಲ್ಲಿ ಗದ್ದಲವೋ ಗದ್ದಲ, ಆ ರಾತ್ರಿ ಮಲ್ಲಿಯು ಮಂಚದ ಮೇಲೆ ಮಲಗಬೇಕು ಎಂದು ರಾಣಿಯ ಆಸೆ. ಬುದ್ದಿಯವರಿಲ್ಲದೆ ತಾನು ಮಂಚದ ಮೇಲೆ ಮಲಗು ವುದಿಲ್ಲವೆಂದು ಅವಳ ಹಟ.

“ಹಾಗಾದರೆ ಎಲ್ಲಿ ಮಲಗುತ್ತೀಯೇ?”

“ಇಲ್ಲೇ ಒಂದು ಚಾಪೆಯ ಮೇಲೆ!”

“ಕೂಡದು. ನಾನೂ ನಿನ್ನ ಜೊತೆಗೇ ಬರುತ್ತೇನೆ.”

ಉಂಟಾ ಬುದ್ಧಿ, ತಮ್ಮ ಮೈ ಒತ್ತುತ್ತದೆ. ಕೂಡದು.”

“ನಿನಗೆ ಒತ್ತೋಕಿಲ್ಲವಾ?”

“ಬಾಳೇಹಣ್ಣಿನ ಗುಡಾಣದಲ್ಲಿ ಬೆಳೆದದ್ದು ಅಲ್ವಾ!”

“ಅಲ್ಲಾ, ಮಲ್ಲಮ್ಮಣ್ಕಿ ನೀನು ಹಿಂಗನ್ನೋದು ನ್ಯಾಯವಾ? ಜೊತೆ ಜೊತೆ ಎತ್ತುಗಳ ಹಂಗಲ್ಲವಾ ನಾವು. ನಿನಗೆ ಬೇಡವಾದ್ದು ನನಗೆ ಬೇಕಾದೀತಾ? ಬುಡು.?

“ಬುದ್ಧಿ, ತಾವು ಹಂಗನ್ನಬಾರದು. ತಾವು ಮಹಾಲಕ್ಷ್ಮಿ ಹಂಗೆ ದೊಡ್ಡ ಮನೆಯಲ್ಲಿ ಹುಟ್ಟಿ ಅರಮನೆ ಸೇರಿದವರು. ತಮ್ಮ ಮನಸ್ಸಿಗೆ ನೋವಾಗೋ ಹಂಗಿದ್ದರೆ, ಆಗಲಿ. ತಮ್ಮ ಪಾದದಲ್ಲಿ ಉರುಟು ಕೋತೀನಿ. ಆದರೂ ಬುದ್ದಿ, ಅಭ್ಯಾಸ ಆಗಲಿ, ಬಿಡಬಾರದಾ?”

ಅವಳ ಪ್ರಾರ್ಥನೆಯಲ್ಲಿ ಏನೋ ಗುರುತಿಸುವುದಕ್ಕೂ ಕಷ್ಟವಾದ ಭಾವವಿತ್ತು. ರಾಣಿಯು ಅದನ್ನು ಸಹಿಸಲಾರದೆ ಅವಳನ್ನು ಬಿಟ್ಟು ಎರಡು ಹೆಜ್ಜೆ ಹೋಗಿದ್ದವಳು ಒಂದಿರುಗಿ ಬಂದು ಮಾತೇ ಆಡದೆ ಅವಳ ನಡುವಿಗೆ ಕೈಹಾಕಿ ಕೆರೆದುಕೊಂಡು ಹೋಗಿ ಹಾಸುಗೆಯ ಮೇಲೆ ಮಲಗಿಸಿ ಕೊಂಡಳು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...