Home / ಕವನ / ಕವಿತೆ / ಸಮನ್ವಯ ಸಂತ

ಸಮನ್ವಯ ಸಂತ

ಮುರಿದ ಮೀನಾರುಗಳು, ಕಡಿದ ಮಂದಿರಗಳು
ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು
ಗತ ಮರೆತ ಇತಿಹಾಸದ ಪುಟಗಳು
ಸರಸ ಜನನ, ವಿರಸಮರಣವೆಂದೆ
ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ!

ಲವಲವಿಕೆಯ ನಗುವಿನ ಒಡೆಯ ನೀನು
ಸುನೀಲಾಳ ಬದುಕಿಗೆ ಪ್ರೀತಿ ಸುರಿದಾತ
ಸಮನ್ವಯ ಸಂತನದು ಪ್ರೇಮ ಮಂತ್ರ
ಬದುಕೇ ಬಾನುಲಿ-ಬಾನುಲಿಯೇ ಬದುಕು
ಪ್ರೀತಿಸಿದವಳ ಕೈಬಿಡದ ನಂಟು
ನಿಷ್ಕಲ್ಮಶ ತರಂಗಗಳೆಬ್ಬಿಸಿದ ನಿನ್ನಾ ನಗು
ಜುಳು ಜುಳು ಹರಿವ ನದಿಯ ನೀರು!

ಮಂದಿರ ಮಸೀದಿಗಳೆಂದೂ ನಿನಗೆ ಕಾಡಲಿಲ್ಲ.
ನಿನಗೆ ಕಾಡದಿರುವುದೇ ಅವರ ಸಮಸ್ಯೆಯಾಗಿದೆ ನೋಡು.
ನೀನು ಮಸೀದಿ, ಅವಳು ಮಂದಿರ, ಮುಂದೆ
ನಿನ್ನಂಗಳದಲ್ಲಿ ಮೂರು ಹೂ ಅರಳಿ ನಿಂತವು ನೋಡು.
ಹೂಗಳ ಗಂಧ, ಸುಗಂಧ ಬೀಸೋ ಗಾಳಿಯಲಿ ಸೇರಿ
ಅದಕೆ ಯಾವ ಜಾತಿಯೆಂದು ಕರೆಯಲಿ ಹೇಳು?
ಗಾಳಿಗೆ, ಸುಗಂಧಕೆ ಜಾತಿಯುಂಟೆ ಗೆಳೆಯಾ!

ರಾಮ-ರಹೀಮರ ಸಾಮರಸ್ಯದ ಕುಡಿಯಾದೆ
ಎದೆ ತುಂಬಾ ಬೆಳಕು ಚೆಲ್ಲಿದೆ ನೋಡು
ಅಲ್ಲಾ-ಅಲ್ಲಮರ ಸ್ನೇಹಕ್ಕೆ ಸೇತುವೆಯಾದೆ.
ಸೌಹಾರ್‍ದ ಬದುಕಿಗೊಂದು ಮಾದರಿಯಾದೆ.
ಸಮನ್ವಯದ ಹಾಡಿಗೆ ಮುನ್ನುಡಿ ಬರೆದೆ
ಹೇಳು ಗೆಳೆಯಾ ಸುಗಂಧಕೆ, ಗಾಳಿಗೆ?
ಯಾವ ಜಾತಿ ಹಿಡಿದು ಕರೆಯಲಿ ಹೇಳು ಗೆಳೆಯಾ!
*****
(ಜಿ.ಎಂ.ಶಿರಹಟ್ಟಿಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...