Home / ಕವನ / ಕವಿತೆ / ಸಮನ್ವಯ ಸಂತ

ಸಮನ್ವಯ ಸಂತ

ಮುರಿದ ಮೀನಾರುಗಳು, ಕಡಿದ ಮಂದಿರಗಳು
ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು
ಗತ ಮರೆತ ಇತಿಹಾಸದ ಪುಟಗಳು
ಸರಸ ಜನನ, ವಿರಸಮರಣವೆಂದೆ
ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ!

ಲವಲವಿಕೆಯ ನಗುವಿನ ಒಡೆಯ ನೀನು
ಸುನೀಲಾಳ ಬದುಕಿಗೆ ಪ್ರೀತಿ ಸುರಿದಾತ
ಸಮನ್ವಯ ಸಂತನದು ಪ್ರೇಮ ಮಂತ್ರ
ಬದುಕೇ ಬಾನುಲಿ-ಬಾನುಲಿಯೇ ಬದುಕು
ಪ್ರೀತಿಸಿದವಳ ಕೈಬಿಡದ ನಂಟು
ನಿಷ್ಕಲ್ಮಶ ತರಂಗಗಳೆಬ್ಬಿಸಿದ ನಿನ್ನಾ ನಗು
ಜುಳು ಜುಳು ಹರಿವ ನದಿಯ ನೀರು!

ಮಂದಿರ ಮಸೀದಿಗಳೆಂದೂ ನಿನಗೆ ಕಾಡಲಿಲ್ಲ.
ನಿನಗೆ ಕಾಡದಿರುವುದೇ ಅವರ ಸಮಸ್ಯೆಯಾಗಿದೆ ನೋಡು.
ನೀನು ಮಸೀದಿ, ಅವಳು ಮಂದಿರ, ಮುಂದೆ
ನಿನ್ನಂಗಳದಲ್ಲಿ ಮೂರು ಹೂ ಅರಳಿ ನಿಂತವು ನೋಡು.
ಹೂಗಳ ಗಂಧ, ಸುಗಂಧ ಬೀಸೋ ಗಾಳಿಯಲಿ ಸೇರಿ
ಅದಕೆ ಯಾವ ಜಾತಿಯೆಂದು ಕರೆಯಲಿ ಹೇಳು?
ಗಾಳಿಗೆ, ಸುಗಂಧಕೆ ಜಾತಿಯುಂಟೆ ಗೆಳೆಯಾ!

ರಾಮ-ರಹೀಮರ ಸಾಮರಸ್ಯದ ಕುಡಿಯಾದೆ
ಎದೆ ತುಂಬಾ ಬೆಳಕು ಚೆಲ್ಲಿದೆ ನೋಡು
ಅಲ್ಲಾ-ಅಲ್ಲಮರ ಸ್ನೇಹಕ್ಕೆ ಸೇತುವೆಯಾದೆ.
ಸೌಹಾರ್‍ದ ಬದುಕಿಗೊಂದು ಮಾದರಿಯಾದೆ.
ಸಮನ್ವಯದ ಹಾಡಿಗೆ ಮುನ್ನುಡಿ ಬರೆದೆ
ಹೇಳು ಗೆಳೆಯಾ ಸುಗಂಧಕೆ, ಗಾಳಿಗೆ?
ಯಾವ ಜಾತಿ ಹಿಡಿದು ಕರೆಯಲಿ ಹೇಳು ಗೆಳೆಯಾ!
*****
(ಜಿ.ಎಂ.ಶಿರಹಟ್ಟಿಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...