Home / ಕವನ / ಕವಿತೆ / ಗೊತ್ತಿರುವುದು ನನಗೆ

ಗೊತ್ತಿರುವುದು ನನಗೆ

ಗೊತ್ತಿರುವುದು ನನಗೆ
ಪಂಚೆಯ ಶ್ರೀರಾಮ
ಹುಟ್ಟಿರುವುದು ಈಗ
ಚೆಡ್ಡಿಯ ಶ್ರೀರಾಮ ||

ರಾಮ ಹುಟ್ಟಿದ ಅಂದು
ತಾಯಿಯ ಗರ್ಭದಲಿ
ಅವನೆ ಹುಟ್ಟಿದ ಇಂದು
ಮಸೀದಿ ಮೂಲೆಯಲಿ

ಅಂದು ರಾಮನ ಜನನ
ಹಗಲು ಹೊತ್ತಿನಲ್ಲಿ
ಇಂದು ಅವನ ಜನನ
ತೂತು ಕತ್ತಲಲ್ಲಿ

ಅಂದು ಬಿಲ್ಲು ಬಾಣ
ಅವನ ಹೆಗಲಿನಲ್ಲಿ
ಇಂದು ಬಿದಿರು ದಂಡ
ಅದೇ ಬಗಲಿನಲ್ಲಿ

ಅಂದು ರಾಮನ ಹಣೆಗೆ
ಎರಡೊ ಮೂರೊ ನಾಮ
ಇಂದು ನಮ್ಮ ಹಣೆಗೆ
ರಕ್ತದ ಒಂದೇ ನಾಮ

ಅಂದು ಹೊರಟ ರಾಮ
ವನವಾಸದ ಕಡೆಗೆ
ಇಂದು ನಮ್ಮ ರಾಮ
ನವದೆಹಲಿಯ ಕಡೆಗೆ

ಅಂದು ರಾಮನಿಗೆ ಸಾಕು
ಕಾಡಲಿ ಪರ್ಣ ಕುಟೀರ
ಇಂದು ಬೇಕೇ ಬೇಕು
ಕೋಟಿ ಇಟ್ಟಿಗೆ ಮಂದಿರ

ಅಂದು ರಾಮನಿಗೆ ಪ್ರಿಯವು
ಎಲ್ಲ ಜೀವ ಜಂತು
ಇಂದು ಯಾರೂ ಬೇಡ | ಇರಲಿ
ದಲಿತರಂತೂ ಇಂತು

ನಿನ್ನೆ ಶಂಭೂಕ ಮರ್ಡರ್
ತಪ್ಪಿತು ಕುವೆಂಪು ಇಂದ
ಇಂದು ನಾವುಗಳೆ ಮರ್ಡರ್
ತಪ್ಪುವುದು ಯಾರಿಂದ?

ಅಂದು ಹರಡಿದ ರಾಮ
ಹೆಚ್ಚೂ ಕಡಿಮೆ ಪ್ರೀತಿ
ಇಂದು ಹರಡುವನು ಯಾಕೆ
ಎಂದಿಲ್ಲದ ಭೀತಿ?

ಇರಲು ಎದುರಿನಲ್ಲಿ
ಭೀಮನ ಸಂವಿಧಾನ
ಮತ್ತೆ ಯಾಕೆ ಬೇಕು
ರಾಮನ ಸಂವಿಧಾನ?

ಇರಲಿ ರಾಮ ಅಲ್ಲಿ
ಜನರ ತಂಟೆ ಯಾಕೆ
ಇರಲಾರದೆ ಇರುವೆ
ಬಿಟ್ಟುಕೊಳುವುದ್ಯಾಕೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...