Home / ಕವನ / ಕೋಲಾಟ / ಕೋಲೆಂಬೂ ಗೀಜಗನೇ

ಕೋಲೆಂಬೂ ಗೀಜಗನೇ

ಶೆಟ್ಟೀ ಬೆಟ್ಟದ ಮೇನೇ
ಹುಟ್ಟಿದೊಂದು ಬಿದುರಾ
ಕೋಲೇ ಕೋಲೆಂಬೂ ಗೀಜಗನೇ || ೧ ||

ಹುಟ್ಟಿತೊಂದು ಬಿದ್ರ ಕೋಲು
ಜಾಡಕಾರ ಕತ್ಯೋ
ಜಾಡಕಾರ ಕತ್ತಿಗೇ
ಲಾಗಿತ್ತೊಂದು ಗೊಡ್ ಮೊರಾ ಕೋಲೂ || ೨ ||

ಆಗಿತ್ತೊಂದು ಗೂಡ್ ಮೊರಕೇ
ಖಂಡ್ಗ ಖಂಡ್ಗ ಬತ್ತ
ಚಿನ್ಮಾಯಂತಾ ಯೇಲಿಯೋ
ಚಿನ್ಮಯಂತಾ ಯೆಲಿ ಗೇ
ರಾವ್ ಗಣ್ ಬೆಕ್ಕೋ || ಕೋಲೂ || ೩ ||

ರಾವ್ ಗಣ್ ಬೆಕ್ಕಿಗೇ
ಜಾಲ್ ಮಾವ್ ಕುನ್ಯೋ
ಜಾಲ್ ಮಾವ್ ಕುನ್ನಿಗೇ
ಗೇರ್ ಕಾರ್‍ಯ ಪಟ್ಟಿ ಹುಲಿಯೋ
ಗೇರ್ ಕಾರ್‍ಯ ಪಟ್ಟಿ ಹುಲಿಗೇ
ಬೆಳ್ಳಿ ಕಟ್ನ ಕೋವ್ಯೋ ಕೋಲೂ || ೪ ||

ಬೆಳ್ಳಿ ಕಟ್ನ ಕೋವಿಗೆ
ಇಜ್ಜಾ ನಾಗರ ಮದ್ದೋ
ಇಜ್ಜಾ ನಾಗರ ಮದ್ದೀಗೇ
ಬಂಕಾಪೂರ್ ದ ಬೆಂಕ್ಯೋ || ಕೋಲೂ || ೫ ||

ಬಂಕಾಪೂರದ ಬೆಂಕಿಗೆ
ಹರ್‌ವಾ ಜಲದಿ ನೀರೋ || ಕೊಲೂ
ಹರ್‌ವಾ ಜಲದಿ ನೀರಿಗೇ
ವಕ್ರ ಕಾಲ್ ಯೆಮ್ಯೋ
ವಕ್ರ ಕಾಲ್ ಯೆಮ್ಮಿಗೇ || ಕೋಲೂ || ೬ ||

ಪಾವ್ ಶೇರ್ ಹಾಲೋ
ಪಾವ್ ಶೇರ್ ಹಾಲಿಗೇ
ಬೆಳ್ಗಲ್ಲಂತಾ ಬೆಣ್ಣ್ಯೋ
ಪಾವ್ ಶೇರ್ ಬೆಣ್ಣಿಗೇ
ತಾಗಿದೊಂದು ಹಣವೋ || ಕೋಲೂ || ೭ ||

ತಾಗಿದೊಂದು ಹಣವಕ್ಕೇ
ಇಪ್ಪತ ಮೊಳ್ನ ಸಾಲ್ಯೋ
ಇಪ್ಪತ ಮೊಳ್ನ ಸಾಲಿಗೇ
ಹದ್ನಾರೆ ವರ್‍ಸನ ಹುಡಗ್ಯೋ || ಕೋಲೂ || ೮ ||

ಹದ್ನಾರೆ ವರ್‍ಸನ ಹುಡ್ಗಿಗೇ
ಹದ್ನೆಂಟ್ ವರ್‍ಸನ ಹುಡ್ಗನೋ || ೯ ||
*****
ಹೇಳಿದವರು: ಶಿವಿ ಜೆಟ್ಟಿ ಮುಕ್ರಿ, ಹೊಲನಗದ್ದೆ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...