Home / ಕವನ / ಕವಿತೆ / ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ ಬಹಳ ಬೃಹತ್ತಾಗಿ
ಕೆಲವು ಮಾಲಿಯ ಹಾಗೆ ಸಂಕ್ಷಿಪ್ತ

ದೊಡ್ಡ ದೇಶದ ಜನ ಒಬ್ಬರಿಗೊಬ್ಬರು ಅಪರಿಚಿತ
ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ
ತಲುಪಲು ದಿನಗಳು ವಾರಗಳು ಮಾಸಗಳು ಬೇಕು

ಪ್ರತಿ ಯಾತ್ರೆಯೂ ಒಂದು ಮಹಾಯಾತ್ರೆ
ಅಥವಾ ಶಿಕ್ಷೆ
ಮೋಸ್ಕೋದಿಂದ ಸೈಬೀರಿಯಾಕ್ಕೆ
ಕವಿಗಳು ಹೋದರು ಕ್ರಾಂತಿಕಾರಿಗಳು ಹೋದರು

ಚಿಕ್ಕ ದೇಶಗಳಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು
ಸುದ್ದಿಯೆಂದರೆ ಅದು ಬಾವಿಕಟ್ಟೆಯಲಿ ನೆರೆಕರೆಯ ಪಿಸುಮಾತು

ಸಾಗುವುದಕ್ಕೆ ಆರಂಭ ಅಂತ್ಯವೆಂಬುದಿಲ್ಲ
ಅದು ಗದ್ದೆ ಸುತ್ತಿದ ಹಾಗೆ ನಮ್ಮ ಹಳ್ಳಿಯಲ್ಲಿ ದಿನಾ

ದೊಡ್ಡ ದೇಶಗಳಲ್ಲಿ ಏಕ ಕಾಲಕ್ಕೆ ಒಂದೆಡೆ ಬೀಳುವುದು ಹಿಮ
ಇನ್ನೊಂದೆಡೆ ಬಿಸಿಲ ಝಳ
ಬೆಟ್ಟದ ತಪ್ಪಲಲ್ಲಿ ಕುರಿಗಳ ಹಿಂಡು

ಕರಾವಳಿಯಲ್ಲಿ ಬೆಸ್ತರ ದಂಡು
ಅವರ ಭಾಷೆಗಳು ಬೇರೆ ಅರ್ಥವಾಗುವುದು ಸ್ವಲ್ಪ ಸ್ವಲ್ಪ

ಚಿಕ್ಕ ದೇಶಗಳಲ್ಲಿ ಹವೆಯೊಂದೇ ಭಾಷೆಯೊಂದೇ
ಉಡುತೊಡುವ ರೀತಿ ಒಂದೇ ಊಟ ಒಂದೇ

ಚರಿತ್ರೆ ಹಣ್ಣು ಕತ್ತರಿಸುವಂತೆ ಕತ್ತರಿಸಿ ಇಡಲಿಲ್ಲ
ಮಾನವ ಜನಾಂಗವನ್ನು ಒಂದೆ ತಾಟಿನಲ್ಲಿ ನೀಟಾಗಿ

ನದಿಯೂ ಹರಿಯಲಿಲ್ಲ ನೇರ ಗೆರೆಗಳಲ್ಲಿ ಪರ್ವತಗಳೂ
ಇದ್ದುವು ತಮ್ಮ ಖುಷಿಯಲ್ಲಿ

ಸರಿಪಡಿಸುವ ಎಲ್ಲ ಪ್ರಯತ್ನಗಳೂ ತತ್ತರಿಸಿ ಬೀಳುತ್ತಿವೆ
ಸರಿ ಯಾವುದು ತಪ್ಪು ಯಾವುದು ಎಂದು ಗೊತ್ತಿಲ್ಲದಿರುತ್ತ

ವಲಸೆ ಬಂದ ಹಕ್ಕಿಗಳೇ
ನೀವೇನು ಹೇಳುವಿರಿ ಎಷ್ಟು ದೇಶಗಳ ಕಂಡವರು
ಮಾತಾಡದೆ ಇರುವಿರಿ
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...