Home / ಕವನ / ಕವಿತೆ / ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ ಬಹಳ ಬೃಹತ್ತಾಗಿ
ಕೆಲವು ಮಾಲಿಯ ಹಾಗೆ ಸಂಕ್ಷಿಪ್ತ

ದೊಡ್ಡ ದೇಶದ ಜನ ಒಬ್ಬರಿಗೊಬ್ಬರು ಅಪರಿಚಿತ
ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ
ತಲುಪಲು ದಿನಗಳು ವಾರಗಳು ಮಾಸಗಳು ಬೇಕು

ಪ್ರತಿ ಯಾತ್ರೆಯೂ ಒಂದು ಮಹಾಯಾತ್ರೆ
ಅಥವಾ ಶಿಕ್ಷೆ
ಮೋಸ್ಕೋದಿಂದ ಸೈಬೀರಿಯಾಕ್ಕೆ
ಕವಿಗಳು ಹೋದರು ಕ್ರಾಂತಿಕಾರಿಗಳು ಹೋದರು

ಚಿಕ್ಕ ದೇಶಗಳಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು
ಸುದ್ದಿಯೆಂದರೆ ಅದು ಬಾವಿಕಟ್ಟೆಯಲಿ ನೆರೆಕರೆಯ ಪಿಸುಮಾತು

ಸಾಗುವುದಕ್ಕೆ ಆರಂಭ ಅಂತ್ಯವೆಂಬುದಿಲ್ಲ
ಅದು ಗದ್ದೆ ಸುತ್ತಿದ ಹಾಗೆ ನಮ್ಮ ಹಳ್ಳಿಯಲ್ಲಿ ದಿನಾ

ದೊಡ್ಡ ದೇಶಗಳಲ್ಲಿ ಏಕ ಕಾಲಕ್ಕೆ ಒಂದೆಡೆ ಬೀಳುವುದು ಹಿಮ
ಇನ್ನೊಂದೆಡೆ ಬಿಸಿಲ ಝಳ
ಬೆಟ್ಟದ ತಪ್ಪಲಲ್ಲಿ ಕುರಿಗಳ ಹಿಂಡು

ಕರಾವಳಿಯಲ್ಲಿ ಬೆಸ್ತರ ದಂಡು
ಅವರ ಭಾಷೆಗಳು ಬೇರೆ ಅರ್ಥವಾಗುವುದು ಸ್ವಲ್ಪ ಸ್ವಲ್ಪ

ಚಿಕ್ಕ ದೇಶಗಳಲ್ಲಿ ಹವೆಯೊಂದೇ ಭಾಷೆಯೊಂದೇ
ಉಡುತೊಡುವ ರೀತಿ ಒಂದೇ ಊಟ ಒಂದೇ

ಚರಿತ್ರೆ ಹಣ್ಣು ಕತ್ತರಿಸುವಂತೆ ಕತ್ತರಿಸಿ ಇಡಲಿಲ್ಲ
ಮಾನವ ಜನಾಂಗವನ್ನು ಒಂದೆ ತಾಟಿನಲ್ಲಿ ನೀಟಾಗಿ

ನದಿಯೂ ಹರಿಯಲಿಲ್ಲ ನೇರ ಗೆರೆಗಳಲ್ಲಿ ಪರ್ವತಗಳೂ
ಇದ್ದುವು ತಮ್ಮ ಖುಷಿಯಲ್ಲಿ

ಸರಿಪಡಿಸುವ ಎಲ್ಲ ಪ್ರಯತ್ನಗಳೂ ತತ್ತರಿಸಿ ಬೀಳುತ್ತಿವೆ
ಸರಿ ಯಾವುದು ತಪ್ಪು ಯಾವುದು ಎಂದು ಗೊತ್ತಿಲ್ಲದಿರುತ್ತ

ವಲಸೆ ಬಂದ ಹಕ್ಕಿಗಳೇ
ನೀವೇನು ಹೇಳುವಿರಿ ಎಷ್ಟು ದೇಶಗಳ ಕಂಡವರು
ಮಾತಾಡದೆ ಇರುವಿರಿ
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...