ಗೃಹಸ್ಥ

ಕನಸಿನಲ್ಲಿ ಕಂಡಿದ್ದೆನೊಮ್ಮೆ ಚಲುವತಿಯನ್ನು,
ಅವಳೊಂದು ಮೃದುಹಾಸ ನನ್ನ ಮನವನು ಸೇರಿ
ಅನುದಿನವು ಸಂಚರಿಸುತಿತ್ತು ಹೆಣ್ಣನು ಸಾರಿ
ಆ ನಗೆಯು ಅರಳುವುದ ನೋಡಬೇಕೆಂದೆನ್ನ
ಕಣ್ಣುಗಳು ಬಯಸಿದುವು. ಓರ್‍ವ ಬಾಲಕಿಯನ್ನ
ಆ ನಗೆಯಲಂಕರಿಸಿಹುದ ನೋಡಿ ಕಳೆಯೇರಿ
ನನ್ನ ತನು-ಮನ-ಧನವನಾಗಮಾಡುತ ಸೂರಿ-
ಮದುವೆಯಾದೆನು ಅಯ್ಯೋ ! ಮುಂದೆ ಕಂಡವು . ಹೊನ್ನ

ತೊಡಕುಗಳು, ಹೆಣ್ಣೆದೆಯ ಅಳುಕುಗಳು, ಹುಟ್ಟಿದಣು-
ಗರ ದೀರ್‍ಘರೋದನವು. ಎಲ್ಲಿ ಮರೆಯಾಯ್ತೇನೊ
ಆ ನಗೆಯು! ಈಗದರ ಸುಳಿವಿಲ್ಲ.! ಮೃಗಜಲವ
ಬೆನ್ನಟ್ಟಿ ಕಾಡುಮಿಗಗಳಿಗೆ ಉಣಿಸಾಯ್ತೊ ತನು?
ಈಗ ಬಿಸುಸುಯ್ಯುವೆನು. ಬಾಳಿಹುದೆ ಇಂತೇನೋ!
ತೊಗಟಿಯಲಿ ಜೇನು, ತಿರುಳಿನಲಿ ಹಾಲಾಹಲವೊ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯಶರಣರ ದಾರಿ ಕಂಡು ಕೊಂಡೆ
Next post ಸಾವಿರದ ಮೇಲೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…