Home / ಕಥೆ / ಕಿರು ಕಥೆ / ಕಲ್ಲು-ಹುಲ್ಲು

ಕಲ್ಲು-ಹುಲ್ಲು

ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉಕ್ಕಿ ಒಮ್ಮೊಮ್ಮೆ ನರ್ತನವನ್ನು ಮಾಡಿ ಬಂಡೆಯ ಮನವೊಲಿಸಲು ತೊಡಗುತ್ತಿತ್ತು. ಇದನ್ನು ಗಮನಿಸಿದ ಕಲ್ಲು ಬಂಡೆಗೆ ಏನೂ ಅರ್ಥವಾಗಲಿಲ್ಲ. ಬರಡು ಬಂಡೆಯಲ್ಲಿ ಭಾವ ಸ್ಪಂದನವಿರಲಿಲ್ಲ. ಅದರ ಹೃದಯ ಹೆಪ್ಪುಗಟ್ಟಿ ಬಿಟ್ಟಿತ್ತು. ಆರ್ದ್ರತೆ ಎಂಬುದು ಬಂಡೆಗೆ ಗೊತ್ತಿರಲಿಲ್ಲ. ಹುಲ್ಲಿನ ಮೃದುಲತೆ ಕೂಡ ಎಂದೂ ಅನುಭವಿಸಿರಲಿಲ್ಲ. ಕಲ್ಲು ಬಂಡೆ ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ಘನೀಭೂತವಾಗಿ ಕೂತಿತ್ತು. ಆದರೆ ಹುಲ್ಲಿಗೆ ಮಾತ್ರ ಬಂಡೆಯ ಮೇಲಿನ ಪ್ರೀತಿ ಹೋಗಲಿಲ್ಲ. ಆಗಾಗ ಗಾಳಿಯಲ್ಲಿ ವಾಲಿ ಬಂಡೆಯನ್ನು ಅಪ್ಪಿ ಮುದ್ದಿಸುತ್ತಿತ್ತು. ತನ್ನ ಎದೆಯ ಮೇಲೆ ಇಬ್ಬನಿ ಬಿದ್ದಾಗ ಅದನ್ನು ಬಂಡೆಯ ಎದೆಯ ಮೇಲಿಟ್ಟು ತನ್ನ ಪ್ರೇಮದ ಕಾಣಿಕೆ ಕೊಡುತ್ತಿತ್ತು.

ಹುಲ್ಲಿನ ಈ ಪ್ರೇಮಾರಾಧನೆ ಬಂಡೆಗೆ ಏನೂ ಅರ್ಥವಾಗಲಿಲ್ಲ. ಇದೇನು ಈ ಹುಲ್ಲಿನ ವಿಚಿತ್ರ ವರ್ತನೆ ಎಂದು ಯೋಚಿಸಿ ಒಂದು ದಿನ ತುಟಿ ತೆರೆದು ಮಾತನಾಡಲಾರಂಭಿಸಿತು.

“ಎಲೆ ಹುಲ್ಲೆ! ನೀನು ಏಕೆ ನನ್ನ ಬಳಿಯೇ ಜೀವಿಸುತ್ತಿರುವೆ?”ಎಂದಿತು.
“ನನಗೆ ನಿನ್ನ ಕಂಡರೆ ಬಲು ಪ್ರೀತಿ”ಎಂದಿತು ಹುಲ್ಲು.
“ಪ್ರೀತಿ” ಹಾಗಂದರೆ ಏನು?” ಎಂದಿತು ಕಲ್ಲು.
“ಬೀಡು ಬಿಟ್ಟಿರುವ ನನ್ನ ಬೇರಿನ ಜೀವರಸವಾದ ಹಸಿರೇ ಪ್ರೀತಿ”
“ಅದು ಸರಿ, ನನ್ನನೇಕೆ ನೆಚ್ಚಿಕೊಂಡಿರುವೆ?” ಎಂದಿತು ಕಲ್ಲು.
“ಕಮಾನಿನಂತೆ ಬಾಗುವ ನನ್ನ ಹೃದಯ ಭಾವಗಳಿಗೆ ನೀನು ಆಧಾರ, ಆಶ್ರಯವಾಗಿರುವೆ. ಅದಕ್ಕೆ ನಿನ್ನ ಕಂಡರೆ ನನಗೆ ಬಲು ಪ್ರೀತಿ” ಎಂದಿತು.
“ನಾನು ಕಲ್ಲು ಬಂಡೆ, ಬಲು ಒರಟು, ಗಟ್ಟಿ, ನೀನು ಹುಲ್ಲು ನವಿರು, ಮತ್ತು ಮೃದು. ನಮ್ಮಿಬ್ಬರ ಸಮಾಗಮ ಸಾಧ್ಯವಿಲ್ಲ.” “ನನ್ನಿಂದ ನಿನ್ನ ಸಾವು ಕೂಡ ಸಾಧ್ಯ. ಆದ್ದರಿಂದ ನನ್ನಿಂದ ನೀನು ದೂರ ಹೋಗಿ ಬಿಡು” ಎಂದಿತು ಕಲ್ಲು ಬಂಡೆ.

“ಹಾಗೆ ಹೇಳಬೇಡ ಪ್ರಿಯಕರ ಕಲ್ಲು ಬಂಡೆ! ನಮ್ಮಲ್ಲಿ ಸಹ ಜೀವನ ಸಾಧ್ಯ. ನನ್ನ ಮೃದುಲತೆಗೆ ನಿನ್ನ ಕಠಿಣತೆಯ ಮೋಹವಿದೆ. ನಿನ್ನ ಕಠಿಣತೆಗೆ ನನ್ನ ಮೃದುಲತೆಯ ಆಶೆ ಇದೆ. ನಿನ್ನ ಪಾದದ ಅಡಿದಾವರೆಯಲಿ ನನ್ನ ಬೆಳೆಯಲು ಬಿಡು, ನಾವು ಜೋಡಿಯಾಗಿ ಇರೋಣ, ಬಾಳೋಣ, ಕಲ್ಲು-ಹುಲ್ಲಿನ ಬಾಳು ವಿಶ್ವ ಕನ್ನಡಿಯಲಿ ಸಮರಸದ ಬಿಂಬವಾಗಲಿ” ಎಂದಿತು.

ಕಲ್ಲು ಬಂಡೆಗೆ ಹೃದಯ ಕರಗಿತು. ಪ್ರೀತಿ ಅಂಕುರಿಸಿತು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...