Home / ಕಥೆ / ಕಿರು ಕಥೆ / ಕೊಳ, ಕಪ್ಪೆ, ಅಳಿಲು

ಕೊಳ, ಕಪ್ಪೆ, ಅಳಿಲು

ಕೊಳದಲ್ಲಿ ಸ್ನಾನ ಮಾಡಿ ಬಂದ ಮೂರು ಶಿಷ್ಯರನ್ನು ಗುರುಗಳು ಹೀಗೆ ಕೇಳಿದರು.

“ಶಿಷ್ಯಾ! ಕೊಳದಲ್ಲಿ ಈಜಿ ಸ್ನಾನ ಮಾಡಿ ದಡದಲ್ಲಿ ಕುಳಿತು ಧ್ಯಾನ ಮಾಡುವಾಗ, ನಿನಗಾದ ಅನುಭವವೇನು?” ಎಂದು ಕೇಳಿದರು. ಗುರುಗಳೇ! ಕೊಳದಲ್ಲಿ ಕಪ್ಪೆ ದಡದಲ್ಲಿ ಕುಳಿತ ನನ್ನ ಹತ್ತಿರಕ್ಕೆ ಬಂದು, “ವಟವಟ” ಎನ್ನುತಿತ್ತು. ನನಗೇನು ಅನುಭವವಾಗಲಿಲ್ಲ, ಅರ್ಥವೂ ಆಗಲಿಲ್ಲ.” ಎಂದ ಶಿಷ್ಯ. ಎರಡನೇಯ ಶಿಷ್ಯಾ! “ನಿನ್ನ ಅನುಭವವೇನು?” ಎಂದರು.

ಅಳಿಲು ಬೇಸರವಿಲ್ಲದೆ ಮರ ಹತ್ತುತ್ತಿತ್ತು, ಇಳಿಯುತ್ತಿತ್ತು. ಏನೋ ಹುಡುಕಿ ಹುಡುಕಿ ಸವಿಯುತಿತ್ತು. ಅದನ್ನು ನೋಡುತ್ತಾ ಇದ್ದೆ” ಎಂದ

“ನಿನ್ನ ಅನುಭವವೇನು?” ಎಂದರು ಮೂರನೇಯ ಶಿಷ್ಯನಿಗೆ.

ದಡದಲ್ಲಿ ಕುಳಿತ ನಾನು ಕೊಳದ ಅಂತರಂಗ, ನೀರ ಮೇಲೆ ಬರೆಯುವ ಲಿಪಿಯನ್ನು ನೋಡುತ್ತಿದ್ದೆ. ಆದರೆ ಅರ್ಥವಿಸಲಾರದೆ ಹೋದೆ”. ಎಂದ

“ಕೊಳದ ಕಪ್ಪೆ ನೀರಿನಲ್ಲಿ ಇದ್ದರು ನಾ ಮುಳಗಲಿಲ್ಲ. ನೆಲದ ಮೇಲೆ ಇದ್ದರು ನಾ ನೆಗದು ಬೀಳಲಿಲ್ಲ” ಎಂದು ವಟಗುಟ್ಟಿ ಸಾರುತ್ತಿತ್ತು. ಇದರ ಮರ್ಮ ತಿಳಿಯಲಿಲ್ಲವೇ?” ಶಿಷ್ಯಾ ಎಂದರು ಮೊದಲ ಶಿಷ್ಯನಿಗೆ.

ಪುಟ್ಟ ಅಳಿಲು ಮರ ಹತ್ತಿ ಇಳಿಯುವ ಕರ್ಮಯೋಗ ಮಾಡಿ ಸತ್ಯದ ಹಣ್ಣು ಹುಡುಕಿ ಸವಿಯುವುದನ್ನು ಕಾಣಲಿಲ್ಲವೇ?” ಎಂದರು ಎರಡನೇಯ ಶಿಷ್ಯನಿಗೆ

ಹರಿವ ಕೂಳ ತನ್ನ ಅಂತರಂಗವನ್ನು ನೀರ ಮೇಲೆ ಸಹಜೀವನದ ಸೂತ್ರಗಳನ್ನು ಬರೆಯುತ್ತಿದೆ. ಅದನ್ನು ನಾವು ಅರ್ಥವಿಸ ಬೇಕಲ್ಲವೇ?” ಎಂದರು ಗುರುಗಳು.

ಗುರುಗಳ ನಿರೀಕ್ಷೆಗೆ ಬಾರದ ಶಿಷ್ಯರು ತಲೆ ತಗ್ಗಿಸಿ ಸತ್ಯವನ್ನು ಅರಿತು ಕೊಂಡರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...