Home / ಕಥೆ / ಕಿರು ಕಥೆ / ಕೊಳ, ಕಪ್ಪೆ, ಅಳಿಲು

ಕೊಳ, ಕಪ್ಪೆ, ಅಳಿಲು

ಕೊಳದಲ್ಲಿ ಸ್ನಾನ ಮಾಡಿ ಬಂದ ಮೂರು ಶಿಷ್ಯರನ್ನು ಗುರುಗಳು ಹೀಗೆ ಕೇಳಿದರು.

“ಶಿಷ್ಯಾ! ಕೊಳದಲ್ಲಿ ಈಜಿ ಸ್ನಾನ ಮಾಡಿ ದಡದಲ್ಲಿ ಕುಳಿತು ಧ್ಯಾನ ಮಾಡುವಾಗ, ನಿನಗಾದ ಅನುಭವವೇನು?” ಎಂದು ಕೇಳಿದರು. ಗುರುಗಳೇ! ಕೊಳದಲ್ಲಿ ಕಪ್ಪೆ ದಡದಲ್ಲಿ ಕುಳಿತ ನನ್ನ ಹತ್ತಿರಕ್ಕೆ ಬಂದು, “ವಟವಟ” ಎನ್ನುತಿತ್ತು. ನನಗೇನು ಅನುಭವವಾಗಲಿಲ್ಲ, ಅರ್ಥವೂ ಆಗಲಿಲ್ಲ.” ಎಂದ ಶಿಷ್ಯ. ಎರಡನೇಯ ಶಿಷ್ಯಾ! “ನಿನ್ನ ಅನುಭವವೇನು?” ಎಂದರು.

ಅಳಿಲು ಬೇಸರವಿಲ್ಲದೆ ಮರ ಹತ್ತುತ್ತಿತ್ತು, ಇಳಿಯುತ್ತಿತ್ತು. ಏನೋ ಹುಡುಕಿ ಹುಡುಕಿ ಸವಿಯುತಿತ್ತು. ಅದನ್ನು ನೋಡುತ್ತಾ ಇದ್ದೆ” ಎಂದ

“ನಿನ್ನ ಅನುಭವವೇನು?” ಎಂದರು ಮೂರನೇಯ ಶಿಷ್ಯನಿಗೆ.

ದಡದಲ್ಲಿ ಕುಳಿತ ನಾನು ಕೊಳದ ಅಂತರಂಗ, ನೀರ ಮೇಲೆ ಬರೆಯುವ ಲಿಪಿಯನ್ನು ನೋಡುತ್ತಿದ್ದೆ. ಆದರೆ ಅರ್ಥವಿಸಲಾರದೆ ಹೋದೆ”. ಎಂದ

“ಕೊಳದ ಕಪ್ಪೆ ನೀರಿನಲ್ಲಿ ಇದ್ದರು ನಾ ಮುಳಗಲಿಲ್ಲ. ನೆಲದ ಮೇಲೆ ಇದ್ದರು ನಾ ನೆಗದು ಬೀಳಲಿಲ್ಲ” ಎಂದು ವಟಗುಟ್ಟಿ ಸಾರುತ್ತಿತ್ತು. ಇದರ ಮರ್ಮ ತಿಳಿಯಲಿಲ್ಲವೇ?” ಶಿಷ್ಯಾ ಎಂದರು ಮೊದಲ ಶಿಷ್ಯನಿಗೆ.

ಪುಟ್ಟ ಅಳಿಲು ಮರ ಹತ್ತಿ ಇಳಿಯುವ ಕರ್ಮಯೋಗ ಮಾಡಿ ಸತ್ಯದ ಹಣ್ಣು ಹುಡುಕಿ ಸವಿಯುವುದನ್ನು ಕಾಣಲಿಲ್ಲವೇ?” ಎಂದರು ಎರಡನೇಯ ಶಿಷ್ಯನಿಗೆ

ಹರಿವ ಕೂಳ ತನ್ನ ಅಂತರಂಗವನ್ನು ನೀರ ಮೇಲೆ ಸಹಜೀವನದ ಸೂತ್ರಗಳನ್ನು ಬರೆಯುತ್ತಿದೆ. ಅದನ್ನು ನಾವು ಅರ್ಥವಿಸ ಬೇಕಲ್ಲವೇ?” ಎಂದರು ಗುರುಗಳು.

ಗುರುಗಳ ನಿರೀಕ್ಷೆಗೆ ಬಾರದ ಶಿಷ್ಯರು ತಲೆ ತಗ್ಗಿಸಿ ಸತ್ಯವನ್ನು ಅರಿತು ಕೊಂಡರು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...