Home / ಕಥೆ / ಕಿರು ಕಥೆ / ಕೊಳ, ಕಪ್ಪೆ, ಅಳಿಲು

ಕೊಳ, ಕಪ್ಪೆ, ಅಳಿಲು

ಕೊಳದಲ್ಲಿ ಸ್ನಾನ ಮಾಡಿ ಬಂದ ಮೂರು ಶಿಷ್ಯರನ್ನು ಗುರುಗಳು ಹೀಗೆ ಕೇಳಿದರು.

“ಶಿಷ್ಯಾ! ಕೊಳದಲ್ಲಿ ಈಜಿ ಸ್ನಾನ ಮಾಡಿ ದಡದಲ್ಲಿ ಕುಳಿತು ಧ್ಯಾನ ಮಾಡುವಾಗ, ನಿನಗಾದ ಅನುಭವವೇನು?” ಎಂದು ಕೇಳಿದರು. ಗುರುಗಳೇ! ಕೊಳದಲ್ಲಿ ಕಪ್ಪೆ ದಡದಲ್ಲಿ ಕುಳಿತ ನನ್ನ ಹತ್ತಿರಕ್ಕೆ ಬಂದು, “ವಟವಟ” ಎನ್ನುತಿತ್ತು. ನನಗೇನು ಅನುಭವವಾಗಲಿಲ್ಲ, ಅರ್ಥವೂ ಆಗಲಿಲ್ಲ.” ಎಂದ ಶಿಷ್ಯ. ಎರಡನೇಯ ಶಿಷ್ಯಾ! “ನಿನ್ನ ಅನುಭವವೇನು?” ಎಂದರು.

ಅಳಿಲು ಬೇಸರವಿಲ್ಲದೆ ಮರ ಹತ್ತುತ್ತಿತ್ತು, ಇಳಿಯುತ್ತಿತ್ತು. ಏನೋ ಹುಡುಕಿ ಹುಡುಕಿ ಸವಿಯುತಿತ್ತು. ಅದನ್ನು ನೋಡುತ್ತಾ ಇದ್ದೆ” ಎಂದ

“ನಿನ್ನ ಅನುಭವವೇನು?” ಎಂದರು ಮೂರನೇಯ ಶಿಷ್ಯನಿಗೆ.

ದಡದಲ್ಲಿ ಕುಳಿತ ನಾನು ಕೊಳದ ಅಂತರಂಗ, ನೀರ ಮೇಲೆ ಬರೆಯುವ ಲಿಪಿಯನ್ನು ನೋಡುತ್ತಿದ್ದೆ. ಆದರೆ ಅರ್ಥವಿಸಲಾರದೆ ಹೋದೆ”. ಎಂದ

“ಕೊಳದ ಕಪ್ಪೆ ನೀರಿನಲ್ಲಿ ಇದ್ದರು ನಾ ಮುಳಗಲಿಲ್ಲ. ನೆಲದ ಮೇಲೆ ಇದ್ದರು ನಾ ನೆಗದು ಬೀಳಲಿಲ್ಲ” ಎಂದು ವಟಗುಟ್ಟಿ ಸಾರುತ್ತಿತ್ತು. ಇದರ ಮರ್ಮ ತಿಳಿಯಲಿಲ್ಲವೇ?” ಶಿಷ್ಯಾ ಎಂದರು ಮೊದಲ ಶಿಷ್ಯನಿಗೆ.

ಪುಟ್ಟ ಅಳಿಲು ಮರ ಹತ್ತಿ ಇಳಿಯುವ ಕರ್ಮಯೋಗ ಮಾಡಿ ಸತ್ಯದ ಹಣ್ಣು ಹುಡುಕಿ ಸವಿಯುವುದನ್ನು ಕಾಣಲಿಲ್ಲವೇ?” ಎಂದರು ಎರಡನೇಯ ಶಿಷ್ಯನಿಗೆ

ಹರಿವ ಕೂಳ ತನ್ನ ಅಂತರಂಗವನ್ನು ನೀರ ಮೇಲೆ ಸಹಜೀವನದ ಸೂತ್ರಗಳನ್ನು ಬರೆಯುತ್ತಿದೆ. ಅದನ್ನು ನಾವು ಅರ್ಥವಿಸ ಬೇಕಲ್ಲವೇ?” ಎಂದರು ಗುರುಗಳು.

ಗುರುಗಳ ನಿರೀಕ್ಷೆಗೆ ಬಾರದ ಶಿಷ್ಯರು ತಲೆ ತಗ್ಗಿಸಿ ಸತ್ಯವನ್ನು ಅರಿತು ಕೊಂಡರು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...