Home / ಕವನ / ಕವಿತೆ / ಪ್ರಜಾರಾಜ್ಯದ ಅಣಕಾಟ

ಪ್ರಜಾರಾಜ್ಯದ ಅಣಕಾಟ

ಪ್ರಜಾ ರಾಜ್ಯದ ಅಣಕಾಟ ನೋಡಿರಿ ಜನರ ತಿಣುಕಾಟ   ||ಪ||
ಪ್ರಜೆಗಳ ರಾಜ್ಯವು ಪ್ರಜೆಗಳಿಗಾಗಿಯೆ
ಪ್ರಜೆಗಳಿಂದಲೇ ನಡೆಯಲು ಬೇಕು
ಪ್ರಜೆಗಳ ಹೆಸರಲಿ ಕೊಬ್ಬುವ ಜನರನು
ಯಾವ ರೀತಿಯಲಿ ಕೊಲಬೇಕು ||೧||

ಓಟಿನ ಮುಂಚಿನ ಸೋಗು ನೋಡಿರೋ
ನಮ್ಮನೆ ನಾಯಿಯ ಪರಿಯಂತೆ
ಓಟು ನೋಟು ಕೈ ಬದಲಿಯ ನಂತರ
ನಾವೇ ಅವರಿಗೆ ನಾಯಂತೆ ||೨||

ದೇಶದ ತುಂಬಾ ಬಡವರೆ ಪ್ರಜೆಗಳು
ಒಬ್ಬ ಬಡ ಮಂತ್ರಿಯ ತೋರಿಸಿರಿ
ಹಣ ಹಣ ಝಣ ಝಣ ಹಣವೆ ಆಳುವುದು
ಪ್ರಜಾರಾಜ್ಯ ಶೋಷಣೆಯ ಪರಿ ||೩||

ನಮ್ಮ ದೇಶವನು ನಾವಾಳುವೆವೋ
ಕನಸು ಕಾಣುವಿಯ ಹುಚ್ಚಣ್ಣ
ಫ್ಯಾಕ್ಟರಿ ಒಡೆಯರು ಕಂತ್ರಾಟದಾರರು
ಸೇಟು ಜಮೀನ್ದಾರರ ವಶವಣ್ಣಾ ||೪||

ನಿನ್ನದೆ ರಾಜ್ಯವು ಆಗಿದ್ದರೆ ನೀ
ಕಛೇರಿ ಕಛೇರಿ ಅಲೆದೀಯಾ
ಆಫೀಸ್ ಗುಮಾಸ್ತ ಗದರಿಸಿ ಬಯ್ದರೆ
ಕೆಮ್ಮಗೆ ಲಂಚವ ತೆತ್ತೀಯಾ ||೫||

ಡಾಕ್ಟರಾಗುವರು ಎಂಜಿನೀಯರೂ
ಆಫೀಸರುಗಳು ಉಳ್ಳವರು
ಧನಿಕ ಶಾಸಕರು ತಂತಮ್ಮಂದಿಗೆ
ತುಂಬುವರೆಲ್ಲಿ ನಿನ್ನವರು ||೬||

ತಾಸೀಲ್ದಾರರು ಜಿಲ್ಲಾಧಿಕಾರಿಯು
ಪಂಚಾತಿ ಮುನಿಸೀಪಾಲಿಟಿಯು
ಪೊಲೀಸ್ ಕೋರ್ಟು ಎಲ್ಲ ಖಾತೆಗಳು
ದಣಿಗಳ ಸೇವಾ ಪಾರಿಟಿಯು ||೭||

ಅನ್ನ ಕೊಡುವವನೆ ಎಲ್ಲ ದುಡಿಯುವನೆ
ದೇಶವ ಕಟ್ಟುವ ಎಲೆ ಬಡವ
ನಿನ್ನದು ದೇಶ ನಿಜವಾದೊಡೆಯನೆ
ಮಬ್ಬನು ಕೊಡವು ಏಳ್ ಬಡವ ||೮||

೧೮-೫-೮೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...