ಗಂಡು ಮೆಟ್ಟಿನ ನಾಡು

ಗಂಡು ಮೆಟ್ಟಿನ ನಾಡು ಕನ್ನಡ ನಾಡು
ಗಂಡುಗಲಿಗಳ ಶೌರ್ಯ ಸಾಹಸ ಬೀಡು
ತ್ಯಾಗ ಪ್ರೀತಿ ಶೌರ್ಯಕೆ ಹೆಸರಾಯಿತೊ ಅಂದು…
ಇತಿಹಾಸದ ಪುಟಪುಟದಿ ಉಳಿಯಿತಿದೊ ಇಂದು
ಪುಲಿಕೇಶಿ ಮಯೂರ ವಿಕ್ರಮಾದಿತ್ಯರು
ಗಂಡೆದೆಯ ಗುಂಡುಗಳು; ಗಂಡರಿಗೆ ಗಂಡರು
ಬನವಾಸಿ ಕಲ್ಯಾಣ ಬಾದಾಮಿ ಮಣ್ಣಲಿ
ಮೆರೆದಂತ ಶೂರರು; ಕನ್ನಡ ರಣಧೀರರು
ಸಿರಿಗನ್ನಡ ಬಾವುಟ ಮುಗಿಲೆತ್ತರಕ್ಕೇರಿಸಿ
ಕಲಿಗನ್ನಡ ಜಯಭೇರಿ ದಿಕ್ಕದಿಕ್ಕಲು ಬಾರಿಸಿ
ಕನ್ನಡ ರಾಜೇಶ್ವರಿಗೆ ಕೀರ್ತಿ ತಂದರೋ…
ದಿಟ್ಟೆದೆಗಳ ಹಾದಿಗೆ ಸ್ಫೂರ್ತಿ ಆದರೊ
ನೃಪತುಂಗ ಹೊಯ್ಸಳ ಕೃಷ್ಣದೇವರಾಯ
ಏಳು ಸುತ್ತಿನಾ ಕೋಟೆ ಮದಕರಿ ನಾಯಕರು
ಎಚ್ಚಮ್ಮ ನಾಯಕ ಕಿತ್ತೂರು ಚೆನ್ನಮ್ಮ
ಆಂಗ್ಲರನು ಬಗ್ಗುಬಡಿದ ಬೆಳವಡಿ ಮಲ್ಲಮ್ಮ
ಕನ್ನಡ ಚೈತನ್ಯವ ತಮ್ಮಲ್ಲೆ ಸೂಸುತ
ಕನ್ನಡ ಪ್ರತಾಪವ ವಿಶ್ವಕ್ಕೆ ತೋರುತ
ರಣರಂಗದ ತುಮುಲದಲಿ ವೀರ ಹೆಜ್ಜೆ ಇಟ್ಟರೋ…
ಜಗದೇಕ ವೀರರಿಗೆ ಮಾದರಿ ಆದರೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿ ಬೊಗಳಿದ್ದು ಕೇಳಿಸಲಿಲ್ಲ
Next post ಹಕ್ಕಿಯ ಉಳಿಸೋಣ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…