ಕಾರಣ

ಕೆಂಪಿನ್ ಬಟ್ಟೆ ಕಾಣ್ದೆ ಓದ್ರೆ
ಗೂಳೀಗ್ ರಕ್ತ ಕುದಿಯಾಲ್ಲ!
ಸುಂಕೆ ಕುದಿಯಾಲ್ಲ!
ನಂಜಿ ರತ್ನಂಗ್ ಒದ್ರೆ ಕಾರಣ
ಗೀರಣ ಯೋಳ್ಕೊಂಡ್ ಒದಿಯಾಲ್ಲ!
ಇದಕೇಂತ್ ಒದಿಯಾಲ್ಲ! ೧

ರಾಗ ಆಕ್ತ ರಾತ್ರಿ ಬರದೆ
ಸುಂಕೆ ಮಲ್ಗೆ ಅರಳಾಲ್ಲ!
ಅಗಲಲ್ ಅರಳಾಲ್ಲ!
ರತ್ನನ್ ಆಳ್ತ ಮುತ್ನಲ್ ಊಳ್ತ
ನಂಜಿ ಇದಕೇಂತ್ ಯೋಳಾಲ್ಲ!
ರತ್ನ ಕೇಳಾಲ್ಲ! ೨

ನಂಜಿ! ನೀ ನಂಗ್ ಒದ್ರೂ ಬಿದ್ರೂ
ಕಾರಣ ನಿಂಗೇನ್ ಬೇಕಿಲ್ಲ!
ನಂಗೂ ಬೇಕಿಲ್ಲ!
ಕಾರಣ ಗೀರಣ ಎಲ್ಲಾ ಐತೆ-
ಕಣ್ಗೆ ಕಂಡ್ರೂ ಕಾಣಾಲ್ಲ!
ಕೇಳೋದ್ ಜಾಣಲ್ಲ! ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಬ್ಬಾಳಿಕೆಗೆ – ೨

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…