ರಾಜಹಂಸ

ಇಂತಿಹುದು ರಾಜಹಂಸದ ಮರಣ. ಸುಳಿಗಾಳಿ-
ಯುಸಿರುವದು ಕಿವಿಮಾತಿನಲಿ,-ಬಂತು ಕೊನೆಯೆಂದು.
ಧವಲಗಿರಿಯಿಂದಾಚೆ ಬಳಿಸಾರಿ ಬರುವಂದು
ರೆಕ್ಕೆಗಿಹ ಬಲವೆಲ್ಲ ಕುಂದಿಹುದು. ಮೈದಾಳಿ
ಬೆಳಕೆ ಬಂತೇನೆಂಬ ರೂಪು ಮುದುಡಿದೆ. ಬಾಳಿ
ಮಾನಸದಿ ಪಟ್ಟ ಸುಖಗಳ ಪ್ರಜ್ಞೆಯೊಂದುಂಟು
ಆ ಪರಮ ಸಲಿಲವನ್ನಿಂತು ಕನಸಿನ ನಂಟು!
ಬೀಳ್ಕೊಳುತಲದೆ ಕೊಳವ ದಂದೆಗುಂಟದು ತೇಲಿ!

ನಡುಗತ್ತಲಾಗಿರಲು ಕೊನೆಯ ಹರಕೆಯ ಬೀಸಿ,
ನಡು ನೀರಿನಲಿ ಮಂದಮಂದಗತಿಯಿಂದೀಸಿ,-
ಕಮಲಗಳ, ತಾರೆಗಳ ವಿಮಲ ಪ್ರೇಮವ ತಳೆದು
ನಸುವೆ ದುಗುಡವು ಬೆರೆತ ಇನಿದನಿಯನೆತ್ತುವದು
ಅಮರ ಗಾನದಲಂದು. ಆ ಗಾನ ಮುತ್ತುವದು
ಬಾನೆದೆಯ, ರೆಕ್ಕೆಗಳು ಮಾಯವಾಗಿರೆ ಹೊಳೆದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಗಿಳಿಗಳೆ ಚಲುವ ಹೂಗಳೆ
Next post ಕಾಡುತಾವ ನೆನಪುಗಳು – ೬

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…