ರಾಜಹಂಸ

ಇಂತಿಹುದು ರಾಜಹಂಸದ ಮರಣ. ಸುಳಿಗಾಳಿ-
ಯುಸಿರುವದು ಕಿವಿಮಾತಿನಲಿ,-ಬಂತು ಕೊನೆಯೆಂದು.
ಧವಲಗಿರಿಯಿಂದಾಚೆ ಬಳಿಸಾರಿ ಬರುವಂದು
ರೆಕ್ಕೆಗಿಹ ಬಲವೆಲ್ಲ ಕುಂದಿಹುದು. ಮೈದಾಳಿ
ಬೆಳಕೆ ಬಂತೇನೆಂಬ ರೂಪು ಮುದುಡಿದೆ. ಬಾಳಿ
ಮಾನಸದಿ ಪಟ್ಟ ಸುಖಗಳ ಪ್ರಜ್ಞೆಯೊಂದುಂಟು
ಆ ಪರಮ ಸಲಿಲವನ್ನಿಂತು ಕನಸಿನ ನಂಟು!
ಬೀಳ್ಕೊಳುತಲದೆ ಕೊಳವ ದಂದೆಗುಂಟದು ತೇಲಿ!

ನಡುಗತ್ತಲಾಗಿರಲು ಕೊನೆಯ ಹರಕೆಯ ಬೀಸಿ,
ನಡು ನೀರಿನಲಿ ಮಂದಮಂದಗತಿಯಿಂದೀಸಿ,-
ಕಮಲಗಳ, ತಾರೆಗಳ ವಿಮಲ ಪ್ರೇಮವ ತಳೆದು
ನಸುವೆ ದುಗುಡವು ಬೆರೆತ ಇನಿದನಿಯನೆತ್ತುವದು
ಅಮರ ಗಾನದಲಂದು. ಆ ಗಾನ ಮುತ್ತುವದು
ಬಾನೆದೆಯ, ರೆಕ್ಕೆಗಳು ಮಾಯವಾಗಿರೆ ಹೊಳೆದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಗಿಳಿಗಳೆ ಚಲುವ ಹೂಗಳೆ
Next post ಕಾಡುತಾವ ನೆನಪುಗಳು – ೬

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…