Home / ಕವನ / ಕೋಲಾಟ / ಕೋಲಾಟದ ತುಂಡು ಪದಗಳು (೧)

ಕೋಲಾಟದ ತುಂಡು ಪದಗಳು (೧)

(ಹೂಂಗಾ ತರೋ ಮಲ್ಲಗೀರಣ್ಣಾ )

ಹೂಂಗಾ ತರೋ ಮಲ್ಲಿಗೀರಣ್ಣಾ
ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲನ್ನ || ೧ ||

ಸಂಪುಗೆ ಸಂಪುಗೆ ಯಾವೂರ ಸಂಪುಗೇ?
ದ್ಯೇವರಿಗೆ ಹೋಗ್ ಸಂಪಿಗೇ
ದ್ಯೇವರಿಗೆ ಹೋಗ್ ಮಿಂದಾ ಮಕ್ಳ
ತುರ್‍ವ ನೋಡ್ ಸಂಪಿಗೇ
ಕ್ಯೇದುಗೇ ಕ್ಯೇದುಗೇ ಯಾತರ ಕ್ಯಾದುಗೇ
ದೇವರಿಗೆ ಹೋಗ್ವ ಕ್ಯಾದುಗೇ || ೨ ||

ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದೇವರಿಗೆ ಹೋಗ್ ಮಿಂದಾ ಮಕ್ಳ
ತುರವ ನೋಡ್ ಮಲ್ಲುಗೇ
ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದ್ಯೇವರಿಗೆ ಹೋಗ್ವ ಮಲ್ಲುಗೇ
ದೇವರಿಗೆ ಹೋಗ್ವ ಮಲ್ಲುಗೇ || ೩ ||

ಅಳ್ಳದ ಹೂಗು ಬೆಳ್ಳಗಾದ್ರೆ ಮಲ್ಲಿಗೇನ ಮಾಡ್ವದೂ
ಚೆಲ್ವಿ ಗಂಡ ಚೆಲ್ವಿನಾದ್ರೆ ಜಾನಕೇನ್ ಸಲ್ವರೋ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೪ ||

ರೋಟ್ಟಿಯ ತಿಂದೆ ನೋಡೂ ತುಪ್ಪದಿಂದಾ
ನಾನ ಸೋಳಪ್ಪುದೂ ನಾನ್ ರೊಕ್ಕದಿಂದಾ
ಬಚುವನಾ ಬಚುವನ್ನಿರೇ ಬಚವನಾ
ಪಾದಕೆ ಚರಣೆನ್ನಿರೇ || ೫ ||

ಮೇನೆ ಮುತ್ತಿನ ಚತುಗೇ ಆದ ನನ್ನ
ಕಲ್ಲಾ ಪಾಂಡೋರ ಬಚುವೇ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೬ ||

ಕಾರಿಕಾಯು ಕಡಜಲಕಾಯು ಹೊಡೆದಾಟ
ವಳ್ಳೆ ಗಂಡಗೆ ಹೋಗು ಪುಂಡಿಗ್ಯೆಲ್ಲ ಹೊಡೆದಾಟ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೭ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...