Home / ಕವನ / ಕೋಲಾಟ / ಕೋಲಾಟದ ತುಂಡು ಪದಗಳು (೧)

ಕೋಲಾಟದ ತುಂಡು ಪದಗಳು (೧)

(ಹೂಂಗಾ ತರೋ ಮಲ್ಲಗೀರಣ್ಣಾ )

ಹೂಂಗಾ ತರೋ ಮಲ್ಲಿಗೀರಣ್ಣಾ
ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲನ್ನ || ೧ ||

ಸಂಪುಗೆ ಸಂಪುಗೆ ಯಾವೂರ ಸಂಪುಗೇ?
ದ್ಯೇವರಿಗೆ ಹೋಗ್ ಸಂಪಿಗೇ
ದ್ಯೇವರಿಗೆ ಹೋಗ್ ಮಿಂದಾ ಮಕ್ಳ
ತುರ್‍ವ ನೋಡ್ ಸಂಪಿಗೇ
ಕ್ಯೇದುಗೇ ಕ್ಯೇದುಗೇ ಯಾತರ ಕ್ಯಾದುಗೇ
ದೇವರಿಗೆ ಹೋಗ್ವ ಕ್ಯಾದುಗೇ || ೨ ||

ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದೇವರಿಗೆ ಹೋಗ್ ಮಿಂದಾ ಮಕ್ಳ
ತುರವ ನೋಡ್ ಮಲ್ಲುಗೇ
ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದ್ಯೇವರಿಗೆ ಹೋಗ್ವ ಮಲ್ಲುಗೇ
ದೇವರಿಗೆ ಹೋಗ್ವ ಮಲ್ಲುಗೇ || ೩ ||

ಅಳ್ಳದ ಹೂಗು ಬೆಳ್ಳಗಾದ್ರೆ ಮಲ್ಲಿಗೇನ ಮಾಡ್ವದೂ
ಚೆಲ್ವಿ ಗಂಡ ಚೆಲ್ವಿನಾದ್ರೆ ಜಾನಕೇನ್ ಸಲ್ವರೋ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೪ ||

ರೋಟ್ಟಿಯ ತಿಂದೆ ನೋಡೂ ತುಪ್ಪದಿಂದಾ
ನಾನ ಸೋಳಪ್ಪುದೂ ನಾನ್ ರೊಕ್ಕದಿಂದಾ
ಬಚುವನಾ ಬಚುವನ್ನಿರೇ ಬಚವನಾ
ಪಾದಕೆ ಚರಣೆನ್ನಿರೇ || ೫ ||

ಮೇನೆ ಮುತ್ತಿನ ಚತುಗೇ ಆದ ನನ್ನ
ಕಲ್ಲಾ ಪಾಂಡೋರ ಬಚುವೇ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೬ ||

ಕಾರಿಕಾಯು ಕಡಜಲಕಾಯು ಹೊಡೆದಾಟ
ವಳ್ಳೆ ಗಂಡಗೆ ಹೋಗು ಪುಂಡಿಗ್ಯೆಲ್ಲ ಹೊಡೆದಾಟ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೭ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...