Home / ಕವನ / ಕವಿತೆ / ತ್ರುಪ್ತಿ

ತ್ರುಪ್ತಿ

‘ದುಡ್ ಉಳ್ಳೋರು ದುಡ್ ಇಲ್ದೋರು
ಲೋಕಕ್ ಎಳ್ಡೇ ಜಾತಿ!’
ಅಂತಂದೌನೆ ನಮ್ಮೌನ್ ಒಬ್ಬ!
ಏ ಹೈ ಸಚ್ಚಿ ಬಾತ್ಙಿ! ೧

ಪೈಲಾದೋರು ದುಡ್ಡಿಗ್ ದತ್ತು-
ಔರ್ ಕಂಡಿಲ್ಲ ತ್ರುಪ್ತಿ!
ಕಾಸ್ ಇಲ್ದಿದ್ರು ದುಸರೀಯೋರ್‍ಗೆ
ಇದ್ದಿದ್ರಲ್ಲೆ ತ್ರುಪ್ತಿ! ೨

ದುಸರಿಯೋರ್‍ದು ತ್ರುಪ್ತಿ ಸತ್ರೆ
ಲೋಕಕ್ ಬಂತು ಚಟ್ಟ!
ಆಗಯಾರೆ ಚಟ್ಟಾಂತಂದ್ರೆ-
ಎಲ್ಲ ಘನ! ಮಟ್ಟ! ೩

ಬಡವರ್ ತ್ರುಪ್ತಿಗ್ ದಪ್ಫನ್ ಅಂದ್ರೆ
ಎಲ್ಲಾರ್ ಬಾಯ್ಗೂ ಮಣ್ಣು!
ದೊಡ್ದು ಚಿಕ್ದು ಸಬ್ಬಿ ಒಟ್ಗೆ
ಎಕ್ಕ ಉಟ್ಟೋಯ್ತಣ್ಣ! ೪

ಲೋಕಾನ್ ಬದಕ್ಸೋ ಇಸ್ನೂಂತ್ ಅಂದ್ರೆ
ದುಸರೀಯೋರ್‍ದು ತ್ರುಪ್ತಿ!
ಪೈಲಾದೋರ್‍ಗೆ ಉಸರಾಡ್ಸೋದೂ
ದುಸರಿಯೋರ್‍ದು ತ್ರುಪ್ತಿ! ೫

ದುಸರಿ ಜೊತ್ಗೆ ಪೈಲಾದೊರ್‍ದು
ತ್ರುಪ್ತಿ ಮಿಲಾಯ್ಸೋದ್ರೆ-
ಬೂಮೀಗ್ ಇರೋರ್‍ಗ್ ಯಾಕ್ ಬೇಕಣ್ಣ
ಸೊರ್‍ಗ ಗಿರ್‍ಗದ್ ತೊಂದ್ರೆ! ೬

(ಯೆಂಡಕ್‌ ಮುನ್ಯ ನೀರ್ ಗೀರ್ ಬೆರಸಿ
ಮೋಸ ಮಾಡೌನ್ ನೆಮ್ಸಿ;
ಅದಕೇ ಈವೊತ್ ಕನ್ನಡ್ ಪದಕೆ
ಬೆರಕ್ಯಾಗೈತೆ ಕ್ಸಮ್ಸಿ!) ೭
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...