ಇಷ್ಟೊಂದು ದೇವರ

ಇಷ್ಟೊಂದು ದೇವರ ಎಷ್ಟೊಂದು ದೇವರ
ಎಲ್ಲೆಲ್ಲಿ ನೋಡಿದರು ದೇವರೆ ದೇವರ

ಇಷ್ಟೊಂದು ದೇವರಲಿ ನಿನಗಾರು ದೇವರ
ನಿನಗ್ಯಾಕೆ ದೇವರ ನೀನೇ ದೇವರ

ಯಜಮಾನ ದೇವರ ಧಣಿಗಳು ದೇವರ
ಜನನಾಯಕರು ದೇವರ ಢಣನಾಯಕರು ದೇವರ

ಅಂಬಾರಿ ದೇವರ ಜಂಬೂಸವಾರಿ ದೇವರ
ಪೂಜೆಯ ದೇವರ ಜಾತ್ರೆಯ ದೇವರ

ಜನ ಮೆಚ್ಚೋ ದೇವರ ಜನ ಹಚ್ಚೋ ದೇವರ
ಜನರಿಂದ ದೂರವಿರೋ ಮುಗುಮ್ಮಾನೆ ದೇವರ

ಭಕ್ತರ ಮೈಮೇಲೆ ಬರುವ ದೇವರ
ಅವರ ತಲೆಮೇಲೆ ಕೂರುವ ದೇವರ

ಕುಂತ ದೇವರ ನಿಂತ ದೇವರ
ಮಲಕ್ಕೊಂಡು ಸುಖವಾಗಿ ನಿದ್ರಿಸುವ ದೇವರ

ಕುರಿಣಗಳ ಬಲಿ ಕೇಳುವ ದೇವರ
ಮಾಂಸ ಮದ್ಯಗಳ ಬೇಡುವ ದೇವರ

ಹಾಡಿಗೆ ನಿದ್ರಿಸುವ ರಸಿಕ ದೇವರ
ತೊಟ್ಟಿಲ ಸೇವೆಯ ಇಷ್ಟಾರ್‍ಥ ದೇವರ

ಘಂಟಾನಾದಕ್ಕೆ ಉತ್ತಿಷ್ಟ ದೇವರ
ಭಾಜಾಬಜಂತ್ರಿಯ ನರಶಾರ್‍ದೂಲ ದೇವರ

ಕಿಂಡಿಯೊಳಗೆ ಇಣುಕಿ ನೋಡುವ ದೇವರ
ಹುಂಡಿಯ ಮುಂದಿಟ್ಟುಕೊಂಡಿರುವ ದೇವರ

ಬೆತ್ತಲೆ ಸೇವೆಗೆ ಕಾಯುವ ದೇವರ
ಕತ್ತಲೆಗೆಲ್ಲೆಲ್ಲೋ ಮಾಯುವ ದೇವರ

ನಿನಗಾರೊ ದೇವರ ನಿನಗ್ಯಾಕೊ ದೇವರ
ನೀನೇ ದೇವರ ನಿನಗಿಲ್ಲೊ ದೇವರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ನಾಯಿ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…