ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ
ದಾಯವೇರಿದೊಡದನು ಮೌಲ್ಯ ವರ್ಧನೆಯೆನುವರಲಾ?
ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ
ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ
ನಯದೊಳುಣುವರನೋಲೈಸಿದೊಡದು ಮೌಲ್ಯವರ್ಧನೆಯೇಂ? – ವಿಜ್ಞಾನೇಶ್ವರಾ
*****
ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ
ದಾಯವೇರಿದೊಡದನು ಮೌಲ್ಯ ವರ್ಧನೆಯೆನುವರಲಾ?
ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ
ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ
ನಯದೊಳುಣುವರನೋಲೈಸಿದೊಡದು ಮೌಲ್ಯವರ್ಧನೆಯೇಂ? – ವಿಜ್ಞಾನೇಶ್ವರಾ
*****