Home / ಕಥೆ / ಕಿರು ಕಥೆ / ಶಾಂತಿಗಾಗಿ

ಶಾಂತಿಗಾಗಿ

ಒಬ್ಬ ನಿಷ್ಟಾವಂತ ಸಾಧಕ ಶಾಂತಿಯನ್ನು ಹುಡುಕಿಕೊಂಡು ಹೊರಟ. ಕಾಡುಮೇಡು, ಬೆಟ್ಟಗುಡ್ಡ ಸುತ್ತಿ ನದಿ ನಾವೆಯಲ್ಲಿ ತೇಲಿ ಕೊನೆಗೆ ಒಂದು ದಟ್ಟ ಅರಣ್ಯದ ಬೆಟ್ಟದಡಿಯ ಗುಹೆಯ ಬಳಿ ಬಂದು ನಿಂತ. ಬಹಳ ಶ್ರಮಿಸಿದ್ದ. ಅವನ ಕೈಕಾಲಿನಲ್ಲಿ ತ್ರಾಣವಿರಲಿಲ್ಲ. ಎದೆಯಲ್ಲಿ ಹತ್ತಿಕ್ಕಿ ತಿನ್ನುತಿತ್ತು ಶಾಂತಿಯ ಹಂಬಲ. ಬಳಲಿದ ಶರೀರ, ಕಾಂತಿಹೀನ ಕಣ್ಣುಗಳು ಅವನ ಆಂತರ್ಯದ ಅಳಲನ್ನು ಹರಿಸುತಿತ್ತು.

ಗುರುವೇ! “ಶಿಷ್ಯನ ಧ್ವನಿ ಕೇಳಿಸಲಿಲ್ಲವೇ?” ಎಂದು ಆರ್ತ ಧ್ವನಿಯಲ್ಲಿ ಕೂಗಿಕೊಂಡ.

“ಶಿಷ್ಮಾ! ನಿನಗೇನು ಬೇಕು? ಏಕ ತೊಳಲುತ್ತಿರುವೇ?” ಹೇಳು ಎಂದರು. ಗುರುವೇ! “ನನಗೆ ಶಾಂತಿ ಬೇಕು. ಅದಕ್ಕೆ ನಾ ಏನಾದರು ಕೊಡ ಬಯಸುವೆ. ನನ್ನ ಕೈ ಕಾಲು, ಮೈ, ತಲೆ, ಎದೆ, ಎಲ್ಲದೂ ನಿಮ್ಮದೇ ಗುರುವೇ, ನನಗೆ ಶಾಂತಿ ಮಾತ್ರ ಕೊಡಿರಿ” ಎಂದ.

“ಶಿಷ್ಕಾ! ನನಗೆ ನಿನ್ನ ದೇಹ ಬೇಡ, ನಾನೇನು ಮಾಂಸಾಹಾರಿಯಲ್ಲ. ನನ್ನ ಕೈ ಕಾಲು ಇರುವಾಗ ನಿನ್ನ ಕೈಕಾಲು ನನಗೆ ಬೇಡ. ಇನ್ನು ಇಬ್ಬರ ತಲೆ ಇಂದ ಇನ್ನೊಬ್ಬರಿಗೆ ಖಂಡಿತ ಉಪಯೋಗವಿಲ್ಲ. ಇನ್ನು ನಿನ್ನ ಎದೆ ಬಡಿತದಿಂದ ನಾ ಬದುಕಿರಲಾರೆ. ನಿನ್ನ ಭಾವದಿಂದ ನಾಹಾಡಲಾರೆ, ಕುಣಿಯಲಾರೆ. ನಾನು ಒಂದೇ ಒಂದು ಕೇಳುತ್ತೇನೆ. ನೀನು ಅದನ್ನು ಕೂಡು” -ಎಂದರು.

ಗುರುಗಳೇ! “ನಾನೇನು ಮಾಡಬೇಕು ಹೇಳಿ” ಎಂದ.

“ನೋಡು ಈ ಗುಹೆಯ ದ್ವಾರದಲ್ಲಿ ಒಂದು ಲಕ್ಷ್ಮಣ ರೇಖೆ ಎಳದಿರುವೆ. ನೀನು ನಿನ್ನ ಮನವನ್ನು ಗೆರೆಯ ಹೊರಗೆ ಬಿಟ್ಟು ನೀನು ಮಾತ್ರ ಗೆರೆಯದಾಟಿ ಗುಹೆಯ ಒಳಗೆ
ಬಾ ನಿನಗೆ ಬೇಕಾದಷ್ಟು ಶಾಂತಿ ದೋಚಿಕೊಂಡು ಹೋಗು” ಎಂದರು.

ಮನವನ್ನು ತೊರೆದ ಶಿಷ್ಯ ಗುಹೆಯ ದ್ವಾರದಲ್ಲಿ ಶಿಲೆಯಂತೆ ನಿಂತು ಬಿಟ್ಟ. ಶಿಷ್ಯ ಒಳಗೆ ಬಾರದಿದ್ದನ್ನು ನೋಡಿ ಗುರುಗಳು ಬಂದು “ನೋಡಿದಿಯಾ! ಈಗ ನಿನ್ನ ಎದೆ ತುಂಬಾ ಶಾಂತಿ ತುಂಬಿ ಬಿಟ್ಟಿದೆ” ಎಂದರು.

“ಧನ್ಯೋಸ್ಮಿ!” ಎಂದು ಶಿಷ್ಯ ನಮಸ್ಕರಿಸಿ ಹಿಂತಿರುಗಿದ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...