Home / ಕಥೆ / ಕಿರು ಕಥೆ / ಶಾಂತಿಗಾಗಿ

ಶಾಂತಿಗಾಗಿ

ಒಬ್ಬ ನಿಷ್ಟಾವಂತ ಸಾಧಕ ಶಾಂತಿಯನ್ನು ಹುಡುಕಿಕೊಂಡು ಹೊರಟ. ಕಾಡುಮೇಡು, ಬೆಟ್ಟಗುಡ್ಡ ಸುತ್ತಿ ನದಿ ನಾವೆಯಲ್ಲಿ ತೇಲಿ ಕೊನೆಗೆ ಒಂದು ದಟ್ಟ ಅರಣ್ಯದ ಬೆಟ್ಟದಡಿಯ ಗುಹೆಯ ಬಳಿ ಬಂದು ನಿಂತ. ಬಹಳ ಶ್ರಮಿಸಿದ್ದ. ಅವನ ಕೈಕಾಲಿನಲ್ಲಿ ತ್ರಾಣವಿರಲಿಲ್ಲ. ಎದೆಯಲ್ಲಿ ಹತ್ತಿಕ್ಕಿ ತಿನ್ನುತಿತ್ತು ಶಾಂತಿಯ ಹಂಬಲ. ಬಳಲಿದ ಶರೀರ, ಕಾಂತಿಹೀನ ಕಣ್ಣುಗಳು ಅವನ ಆಂತರ್ಯದ ಅಳಲನ್ನು ಹರಿಸುತಿತ್ತು.

ಗುರುವೇ! “ಶಿಷ್ಯನ ಧ್ವನಿ ಕೇಳಿಸಲಿಲ್ಲವೇ?” ಎಂದು ಆರ್ತ ಧ್ವನಿಯಲ್ಲಿ ಕೂಗಿಕೊಂಡ.

“ಶಿಷ್ಮಾ! ನಿನಗೇನು ಬೇಕು? ಏಕ ತೊಳಲುತ್ತಿರುವೇ?” ಹೇಳು ಎಂದರು. ಗುರುವೇ! “ನನಗೆ ಶಾಂತಿ ಬೇಕು. ಅದಕ್ಕೆ ನಾ ಏನಾದರು ಕೊಡ ಬಯಸುವೆ. ನನ್ನ ಕೈ ಕಾಲು, ಮೈ, ತಲೆ, ಎದೆ, ಎಲ್ಲದೂ ನಿಮ್ಮದೇ ಗುರುವೇ, ನನಗೆ ಶಾಂತಿ ಮಾತ್ರ ಕೊಡಿರಿ” ಎಂದ.

“ಶಿಷ್ಕಾ! ನನಗೆ ನಿನ್ನ ದೇಹ ಬೇಡ, ನಾನೇನು ಮಾಂಸಾಹಾರಿಯಲ್ಲ. ನನ್ನ ಕೈ ಕಾಲು ಇರುವಾಗ ನಿನ್ನ ಕೈಕಾಲು ನನಗೆ ಬೇಡ. ಇನ್ನು ಇಬ್ಬರ ತಲೆ ಇಂದ ಇನ್ನೊಬ್ಬರಿಗೆ ಖಂಡಿತ ಉಪಯೋಗವಿಲ್ಲ. ಇನ್ನು ನಿನ್ನ ಎದೆ ಬಡಿತದಿಂದ ನಾ ಬದುಕಿರಲಾರೆ. ನಿನ್ನ ಭಾವದಿಂದ ನಾಹಾಡಲಾರೆ, ಕುಣಿಯಲಾರೆ. ನಾನು ಒಂದೇ ಒಂದು ಕೇಳುತ್ತೇನೆ. ನೀನು ಅದನ್ನು ಕೂಡು” -ಎಂದರು.

ಗುರುಗಳೇ! “ನಾನೇನು ಮಾಡಬೇಕು ಹೇಳಿ” ಎಂದ.

“ನೋಡು ಈ ಗುಹೆಯ ದ್ವಾರದಲ್ಲಿ ಒಂದು ಲಕ್ಷ್ಮಣ ರೇಖೆ ಎಳದಿರುವೆ. ನೀನು ನಿನ್ನ ಮನವನ್ನು ಗೆರೆಯ ಹೊರಗೆ ಬಿಟ್ಟು ನೀನು ಮಾತ್ರ ಗೆರೆಯದಾಟಿ ಗುಹೆಯ ಒಳಗೆ
ಬಾ ನಿನಗೆ ಬೇಕಾದಷ್ಟು ಶಾಂತಿ ದೋಚಿಕೊಂಡು ಹೋಗು” ಎಂದರು.

ಮನವನ್ನು ತೊರೆದ ಶಿಷ್ಯ ಗುಹೆಯ ದ್ವಾರದಲ್ಲಿ ಶಿಲೆಯಂತೆ ನಿಂತು ಬಿಟ್ಟ. ಶಿಷ್ಯ ಒಳಗೆ ಬಾರದಿದ್ದನ್ನು ನೋಡಿ ಗುರುಗಳು ಬಂದು “ನೋಡಿದಿಯಾ! ಈಗ ನಿನ್ನ ಎದೆ ತುಂಬಾ ಶಾಂತಿ ತುಂಬಿ ಬಿಟ್ಟಿದೆ” ಎಂದರು.

“ಧನ್ಯೋಸ್ಮಿ!” ಎಂದು ಶಿಷ್ಯ ನಮಸ್ಕರಿಸಿ ಹಿಂತಿರುಗಿದ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...