Home / ಕಥೆ / ಕಿರು ಕಥೆ / ಶಾಂತಿಗಾಗಿ

ಶಾಂತಿಗಾಗಿ

ಒಬ್ಬ ನಿಷ್ಟಾವಂತ ಸಾಧಕ ಶಾಂತಿಯನ್ನು ಹುಡುಕಿಕೊಂಡು ಹೊರಟ. ಕಾಡುಮೇಡು, ಬೆಟ್ಟಗುಡ್ಡ ಸುತ್ತಿ ನದಿ ನಾವೆಯಲ್ಲಿ ತೇಲಿ ಕೊನೆಗೆ ಒಂದು ದಟ್ಟ ಅರಣ್ಯದ ಬೆಟ್ಟದಡಿಯ ಗುಹೆಯ ಬಳಿ ಬಂದು ನಿಂತ. ಬಹಳ ಶ್ರಮಿಸಿದ್ದ. ಅವನ ಕೈಕಾಲಿನಲ್ಲಿ ತ್ರಾಣವಿರಲಿಲ್ಲ. ಎದೆಯಲ್ಲಿ ಹತ್ತಿಕ್ಕಿ ತಿನ್ನುತಿತ್ತು ಶಾಂತಿಯ ಹಂಬಲ. ಬಳಲಿದ ಶರೀರ, ಕಾಂತಿಹೀನ ಕಣ್ಣುಗಳು ಅವನ ಆಂತರ್ಯದ ಅಳಲನ್ನು ಹರಿಸುತಿತ್ತು.

ಗುರುವೇ! “ಶಿಷ್ಯನ ಧ್ವನಿ ಕೇಳಿಸಲಿಲ್ಲವೇ?” ಎಂದು ಆರ್ತ ಧ್ವನಿಯಲ್ಲಿ ಕೂಗಿಕೊಂಡ.

“ಶಿಷ್ಮಾ! ನಿನಗೇನು ಬೇಕು? ಏಕ ತೊಳಲುತ್ತಿರುವೇ?” ಹೇಳು ಎಂದರು. ಗುರುವೇ! “ನನಗೆ ಶಾಂತಿ ಬೇಕು. ಅದಕ್ಕೆ ನಾ ಏನಾದರು ಕೊಡ ಬಯಸುವೆ. ನನ್ನ ಕೈ ಕಾಲು, ಮೈ, ತಲೆ, ಎದೆ, ಎಲ್ಲದೂ ನಿಮ್ಮದೇ ಗುರುವೇ, ನನಗೆ ಶಾಂತಿ ಮಾತ್ರ ಕೊಡಿರಿ” ಎಂದ.

“ಶಿಷ್ಕಾ! ನನಗೆ ನಿನ್ನ ದೇಹ ಬೇಡ, ನಾನೇನು ಮಾಂಸಾಹಾರಿಯಲ್ಲ. ನನ್ನ ಕೈ ಕಾಲು ಇರುವಾಗ ನಿನ್ನ ಕೈಕಾಲು ನನಗೆ ಬೇಡ. ಇನ್ನು ಇಬ್ಬರ ತಲೆ ಇಂದ ಇನ್ನೊಬ್ಬರಿಗೆ ಖಂಡಿತ ಉಪಯೋಗವಿಲ್ಲ. ಇನ್ನು ನಿನ್ನ ಎದೆ ಬಡಿತದಿಂದ ನಾ ಬದುಕಿರಲಾರೆ. ನಿನ್ನ ಭಾವದಿಂದ ನಾಹಾಡಲಾರೆ, ಕುಣಿಯಲಾರೆ. ನಾನು ಒಂದೇ ಒಂದು ಕೇಳುತ್ತೇನೆ. ನೀನು ಅದನ್ನು ಕೂಡು” -ಎಂದರು.

ಗುರುಗಳೇ! “ನಾನೇನು ಮಾಡಬೇಕು ಹೇಳಿ” ಎಂದ.

“ನೋಡು ಈ ಗುಹೆಯ ದ್ವಾರದಲ್ಲಿ ಒಂದು ಲಕ್ಷ್ಮಣ ರೇಖೆ ಎಳದಿರುವೆ. ನೀನು ನಿನ್ನ ಮನವನ್ನು ಗೆರೆಯ ಹೊರಗೆ ಬಿಟ್ಟು ನೀನು ಮಾತ್ರ ಗೆರೆಯದಾಟಿ ಗುಹೆಯ ಒಳಗೆ
ಬಾ ನಿನಗೆ ಬೇಕಾದಷ್ಟು ಶಾಂತಿ ದೋಚಿಕೊಂಡು ಹೋಗು” ಎಂದರು.

ಮನವನ್ನು ತೊರೆದ ಶಿಷ್ಯ ಗುಹೆಯ ದ್ವಾರದಲ್ಲಿ ಶಿಲೆಯಂತೆ ನಿಂತು ಬಿಟ್ಟ. ಶಿಷ್ಯ ಒಳಗೆ ಬಾರದಿದ್ದನ್ನು ನೋಡಿ ಗುರುಗಳು ಬಂದು “ನೋಡಿದಿಯಾ! ಈಗ ನಿನ್ನ ಎದೆ ತುಂಬಾ ಶಾಂತಿ ತುಂಬಿ ಬಿಟ್ಟಿದೆ” ಎಂದರು.

“ಧನ್ಯೋಸ್ಮಿ!” ಎಂದು ಶಿಷ್ಯ ನಮಸ್ಕರಿಸಿ ಹಿಂತಿರುಗಿದ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್