ಸಂಜೆ ಗತ್ತಲು

ಅದೊ ನೋಡು ಮಧ್ಯಾಹ್ನ ಸರಿದು
ಸಂಜೆ ಗತ್ತಲು ಸಾಗಿ ಬರುತ್ತಿದೆ
ನಿನ್ನೂರಿಗೆ ಹೋಗುವ ಬದಲು
ಏನು ಜಾತ್ರೆ ನಿನ್ನೀ ಮನ ಮಾಡಿದೆ

ನೀನೋರ್‍ವನೆ ಅಲ್ಲಿ ಸಾಗಬೇಕು
ನಿನಗ್ಯಾರು ಅಲ್ಲಿ ಜೊತೆಗಿಲ್ಲ
ನಿನ್ನ ಕರ್‍ಮಗಳೇ ಸಂಗಾತಿ
ಮತ್ತೇನು ಹಿಂದೆ ಬರುವುದಿಲ್ಲ

ಎಚ್ಚರದ ಗಂಟೆಗೆ ಆಲಿಸು ಬೇಗ
ಸುಧಾರಿಸು ಸುಧಾರಿಸು ನೀನೀಗ
ಭೋಗಗಳೆಲ್ಲ ಆಚೆ ತಳ್ಳು
ಜಪ ತಪಗಳ ಬಯಸೀಗ

ಯುಗ ಯುಗಗಳು ಸರಿದವು
ನಿನ್ನ ತೃಷೆಗಳು ಹಿಂಗಲಿಲ್ಲ
ಮತ್ತೆ ಜನುಮಗಳು ಬಂದವು
ಮರಣಗಳು ನಿನ್ನ ಬಿಡಲಿಲ್ಲ

ಆಸೆ ಸ್ವಾರ್‍ಥ ಅಮಿಷೆಗಳೆಲ್ಲ
ಯೌವ್ವನದಲ್ಲೆ ಕರಗುವವು
ಅಂತಲೆ ತ್ಯಾಗಿಸಿ ನಡೆ ಮುಂದೆ
ತಾನೇ ನಾಶವಾಗುವವು ಅವು

ಗುರುಗಳ ಕೃಪಾಸಿಂಧು ಈಗಾಗಿದೆ
ನಿನ್ನಲ್ಲಿ ಜಾಗೃತಿ ಮೂಡಿ ನಿಂದಿದೆ
ಈ ಸುವರ್‍ಣಾವಕಾಶ ಕಳೆಯಬೇಡ
ಮಾಣಿಕ್ಯ ವಿಠಲನ ಧ್ಯಾನಿಸಬೇಕಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೯
Next post ಮಲ್ಲಿ – ೨೭

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…