ಸನ್ಯಾಸಿ ರತ್ನ

ಯಿಂದ್ ಒಬ್ಬ ಬೌದ್ದ ಸನ್ಯಾಸಿ
ಮರದಡಿ ತನ್ನ ಬಟ್ಟೆ ಆಸಿ
ಕುಂತಿದ್ದ ಪದುಮಾಸನಾಕಿ-
ಕಣ್ ಮುಚ್ಚೋದ್ ಒಂದೇನೆ ಬಾಕಿ! ೧

ಕಾಲಿಗ್ ಔನ್ ಮುಂದಾಗ ತೊದಲು
ಬಂದಂಗೆ ಯೆಣ್ ಒಬ್ಳು ಓದ್ಲು-
ಘಮ್ಮಂತ ವಾಸ್ನೆ ಸುಳದಂಗೆ!
ಫಳ್ಳಂತ ಮಿಂಚು ವೊಳದಂಗೆ! ೨

ತಂಗೆ ಕಣ್ ಮಾಡ್ದೊಳ ಕುರ್‍ತಿ
‘ಚಂದದೀ ದೇದಾಗ ಬರ್‍ತಿ
ಒಲ್ಸೇನೆ!’ ಅಂದಿ ಸನ್ನಾಸಿ
‘ಛೆ’ ಅಂದ ಮನದಾಗ ಯೇಸಿ ೩

‘ಒರಗೀನ್ ಅಲಂಕಾರ ತಳಕು!
ಒಳಗಿನ್ದ ಕಂಡ್ರೇನೆ ಬೆಳಕು!’
ಅಂದಿ ಆ ಬೌದ್ದ ಸನ್ನಾಸಿ
ಯಾರ್‍ತಿದ್ದ ಸತ್ಯಾನ ಸೋಸಿ! ೪

ನಾನೂನೆ ಅಂಗೆ ಸನ್ನಾಸಿ!
ಮೂರೊತ್ತು ಯೆಂಡಾನ ಮೂಸಿ
ಮರ್‍ತ್ ಬುಡ್ತೀನ್ ಬುಂಡೇನ ತುರ್‍ತು!
ಒಳಗೀನ್ ಒಂದ್ ಯೆಂಡೆ ನಂಗ್ ಗುರ್‍ತು? ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಮ್ಮ
Next post ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys