ಏಕೆ

ದೇವಾ ಎನ್ನ ಮನಕ್ಕೆ ರಕ್ಷಿಸು
ಕಾಮಕ್ರೋಧ ಮತ್ಸರಗಳಿಂದ
ದೇವಾ ಎನ್ನ ಮನಕ್ಕೆ ಶಿಕ್ಷಿಸು
ಪುನಃ ಪುನಃ ಮಾಡುವ ತಪ್ಪುಗಳಿಂದ

ಮನದಲಿ ಮೋಹ ಬಾರದಿರಲಿ
ನಿತ್ಯ ಪ್ರಪಾತಕ್ಕೆ ತಳ್ಳುವುದು
ಮನದಲಿ ಸ್ವಾರ್‍ಥ ಇಣಕದಿರಲಿ
ನಿತ್ಯವೂ ರಕ್ಕಸದಿ ವರ್‍ತಿಸುವುದು

ಕೆಟ್ಟದನ್ನು ಕೇಳದಂತೆ ಮನವರಳಲಿ
ಪರರ ನಿಂದೆಯನ್ನು ಮಾಡದಿರಲಿ
ಪರೋಪಕಾರಕ್ಕೆ ತಾನು ಮುಂದಾಗಲಿ
ಎಲ್ಲರಲ್ಲೂ ಕಲ್ಯಾಣವನ್ನೆ ಕಾಣಲಿ

ಕ್ಷಣಿಕ ಬಾಳಿನಲಿ ಆಸೆಗಳೇಕೆ!
ಬಿದ್ದು ಹೋಗುವ ದೇಹಕ್ಕೆ ದಂಭವೇಕೆ!
ಶಾಂತಿಗಾಗಿ ಎತ್ತೆತ್ತಸುತ್ತಲೇಕೆ!
ಮಾಣಿಕ್ಯ ವಿಠಲ ಅಂತರದಿ ಕಾಣಬಾರದೇಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೮
Next post ಪಾಪಿಯ ಪಾಡು – ೧೧

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…