ಯೆಂಡ ಕುಡಿಯೋರ್ ನಾವು

ದೊಡ್ಡೋನ್ಗ್ ಎಚ್ಗೆ ಸಂಬ್ಳಾಂತ್ ಅಂದ್ರೆ
ಚಿಕ್ಕೋರ್ ಕೆಲ್ಸಕ್ ಕೋತ!
ಆನೆ ಮೈನ ಬೆಳಸಬೇಕಂದ್ರೆ-
ಆವ್ತಿ ಬಡಕಲ್ ವೋತ! ೧

ಗುಡಿಸಿಲ್ಗ್ ಉಲ್ಲು ಸಾಲ್ದಿದ್ರೂನೆ
ಮಾಡೀಗ್ ಮಾಡಿ ಬಡ್ತಿ!
ರೂಪಾಯ್ಗ್ ಒಂದ್ ಕಾಸ್ ಕಮ್ಮಿ ಬಂದ್ರೆ
ಬಡವೊನ್ ಮನೇ ಜಡ್ತಿ! ೨

ನಾಯ್ನ ನಾಯೇ ತಿಂತಾದಂತೆ!
ಮೀನ್ಗೆ ಮೀನೆ ತಿಂಡಿ!
ಮನ್ಸನ್ ಮನ್ಸ ತಿಂತಾನ್ ಈಗ
ಜೀವ ಪೂರ ಯಿಂಡಿ! ೩

ಯೆಂಡ ಕುಡಿಯೋರ್ ನಾವ್ ಇಂಗಿಲ್ಲ!
ಬುಂಡೆ ಪೂರ ತಂದಿ
ಪಕ್ದೋನ್ ಕೈಲಿ ಕಾಸ್ ಇಲ್ದಿದ್ರೆ
ಔನ್ಗು ಕೊಡತೀವ್ ಸೇಂದಿ! ೪

ನಂತಾಕ್ ಬಂದ್ರೆ ಯೋಳ್ಕೊಡ್ತೀವಿ
ದಾನ ಧರ್‍ಮಕ್ ಅರ್‍ತ;
ಸಾಜ ಕೇಳಿ ರೇಕ್ಕೊಂಡ್ ಓದ್ರೆ-
ಕೋಪಾನೆಲ್ಲ ವೆರ್‍ತ! ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತತಿ
Next post ರಾಷ್ಟ್ರೀಯತೆಯಲ್ಲಿ ಕುರುಡಾಗದ ಕವಿ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…