ನಟ್ಟಿರುಳಿನಲ್ಲೊಂದು ಸಂವಾದ

ಬೆಳಕು

ಬೇಡವಾದರೆ
ಇಲ್ಲ
ಇಲ್ಲಿ ಏನೂ ಆಗಿಯೇ ಇಲ್ಲ
ಆಗಿದ್ದು ಆಟವಷ್ಟೇ
ಲೆಕ್ಕವಲ್ಲ
ಜಮಾ ಆಗಿಲ್ಲ
ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ
ಎಲ್ಲಾ ಕೊಡವಿ
ಎದ್ದು ಹೋಗಿಬಿಡಬಹುದು
ಕತ್ತಲು

ಬೇಡದ್ದೆಲ್ಲಾ ಒಪ್ಪಿ
ತೋಳ್ತೆರೆದು ಅಪ್ಪಿ
ತುಂಬಿ ತುಂಬಿ
ಮೇಲೇರಿ ಬರುವ
ಎಲ್ಲ ಅಮಲುಗಳ
ಒಳಕದುಮಿ ಗುದ್ದಿ
ಹೇಗೆ ಬರೆಯುವುದು
ಪರಂಪರಾಗತವಲ್ಲದ
ಶಾಸ್ತ್ರೋಕ್ತವಲ್ಲದ
ಛಂದೋಬದ್ಧವಲ್ಲದ
ಆದರೂ ಅರ್ಥಪೂರ್ಣ ಕವಿತೆ!

ಬೆಳಕು

ಬಿಡು ಮನಸು ಮಾಡಿದರೆ
ಸಮುದ್ರಗಳನ್ನೇ ದಾಟಿಬಿಡಬಹುದು

ಕತ್ತಲು

ಹೌದು. ಆದರೆ ಎಲ್ಲಕ್ಕೂ ಮೊದಲು
ದಾಟಬೇಕು ಹೊಸಿಲು !
ಹೊಸಿಲಿನೊಳಗಿಂದ ಜಗ್ಗುವ
ಗೋಜಲು ಬೇರುಗಳು
ಹೊರಗಿನಿಂದ ಸೆಳೆಯುವ
ಆಕಾರವಿಲ್ಲದ ಅಸ್ಪಷ್ಟಾಕಾರಗಳು.

ಬೆಳಕು

ಇಲ್ಲಿ ಯಾವುದೂ
ಪರಿಪೂರ್ಣ ಆಕಾರವಲ್ಲ
ನಿರಾಕಾರಕ್ಕೆ ಆಕಾರ ಕೊಡುವುದೇ
ಕರಗಳ ಕೆಲಸವೆಲ್ಲ
ಇತಿಹಾಸವಾಗಿ ಬಿಡುತ್ತದೆ
ಆಕಾರವಾದದ್ದೆಲ್ಲ.

ಕತ್ತಲು

ಹೊಸಿಲು ದಾಟಿದವರಿಗೆಲ್ಲ
ಒಂದೋ ಪ್ರಪಾತ
ಇಲ್ಲವೇ ಆಕಾಶ
ಬೇರೆಲ್ಲಿದೆ ಅವಕಾಶ?
ಎರಡು ಅತಿಗಳ ನಡುವೆ
ಇದೆಯೇ ಎಲ್ಲೆ ಮೀರುವ ಮಿತಿ?

ಬೆಳಕು

ಸವಕಲಾದ ಬೊಟ್ಟಿನ
ತೂಗುವ ತಕ್ಕಡಿಯ
ಅಳತೆಗಾಗಿಯೇ
ಬದುಕಲಾಗುವುದಿಲ್ಲ
ಅತೀತರೆಲ್ಲ ಅಳತೆಗೆ ಸಿಕ್ಕುವುದಿಲ್ಲ
ಅಳತೆಗಳ ಮಿತಿಗೆ ಬಿದ್ದವರು
ಬಿಡು ಅತೀತರಾಗುವುದಿಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ ನೀನೊಬ್ಬನೆ
Next post ಖರ್ಗೆಯೇ ಕೂಗಾಡ್ಲಿ ಸಿದ್ದುವೇ ಹೋರಾಡ್ಲಿ ಸಿ‌ಎಂ ನೆಮ್ಮದಿಗೆ ಭಂಗವಿಲ್ಲ…!

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys