Home / ಕವನ / ಕವಿತೆ / ನಟ್ಟಿರುಳಿನಲ್ಲೊಂದು ಸಂವಾದ

ನಟ್ಟಿರುಳಿನಲ್ಲೊಂದು ಸಂವಾದ

ಬೆಳಕು

ಬೇಡವಾದರೆ
ಇಲ್ಲ
ಇಲ್ಲಿ ಏನೂ ಆಗಿಯೇ ಇಲ್ಲ
ಆಗಿದ್ದು ಆಟವಷ್ಟೇ
ಲೆಕ್ಕವಲ್ಲ
ಜಮಾ ಆಗಿಲ್ಲ
ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ
ಎಲ್ಲಾ ಕೊಡವಿ
ಎದ್ದು ಹೋಗಿಬಿಡಬಹುದು
ಕತ್ತಲು

ಬೇಡದ್ದೆಲ್ಲಾ ಒಪ್ಪಿ
ತೋಳ್ತೆರೆದು ಅಪ್ಪಿ
ತುಂಬಿ ತುಂಬಿ
ಮೇಲೇರಿ ಬರುವ
ಎಲ್ಲ ಅಮಲುಗಳ
ಒಳಕದುಮಿ ಗುದ್ದಿ
ಹೇಗೆ ಬರೆಯುವುದು
ಪರಂಪರಾಗತವಲ್ಲದ
ಶಾಸ್ತ್ರೋಕ್ತವಲ್ಲದ
ಛಂದೋಬದ್ಧವಲ್ಲದ
ಆದರೂ ಅರ್ಥಪೂರ್ಣ ಕವಿತೆ!

ಬೆಳಕು

ಬಿಡು ಮನಸು ಮಾಡಿದರೆ
ಸಮುದ್ರಗಳನ್ನೇ ದಾಟಿಬಿಡಬಹುದು

ಕತ್ತಲು

ಹೌದು. ಆದರೆ ಎಲ್ಲಕ್ಕೂ ಮೊದಲು
ದಾಟಬೇಕು ಹೊಸಿಲು !
ಹೊಸಿಲಿನೊಳಗಿಂದ ಜಗ್ಗುವ
ಗೋಜಲು ಬೇರುಗಳು
ಹೊರಗಿನಿಂದ ಸೆಳೆಯುವ
ಆಕಾರವಿಲ್ಲದ ಅಸ್ಪಷ್ಟಾಕಾರಗಳು.

ಬೆಳಕು

ಇಲ್ಲಿ ಯಾವುದೂ
ಪರಿಪೂರ್ಣ ಆಕಾರವಲ್ಲ
ನಿರಾಕಾರಕ್ಕೆ ಆಕಾರ ಕೊಡುವುದೇ
ಕರಗಳ ಕೆಲಸವೆಲ್ಲ
ಇತಿಹಾಸವಾಗಿ ಬಿಡುತ್ತದೆ
ಆಕಾರವಾದದ್ದೆಲ್ಲ.

ಕತ್ತಲು

ಹೊಸಿಲು ದಾಟಿದವರಿಗೆಲ್ಲ
ಒಂದೋ ಪ್ರಪಾತ
ಇಲ್ಲವೇ ಆಕಾಶ
ಬೇರೆಲ್ಲಿದೆ ಅವಕಾಶ?
ಎರಡು ಅತಿಗಳ ನಡುವೆ
ಇದೆಯೇ ಎಲ್ಲೆ ಮೀರುವ ಮಿತಿ?

ಬೆಳಕು

ಸವಕಲಾದ ಬೊಟ್ಟಿನ
ತೂಗುವ ತಕ್ಕಡಿಯ
ಅಳತೆಗಾಗಿಯೇ
ಬದುಕಲಾಗುವುದಿಲ್ಲ
ಅತೀತರೆಲ್ಲ ಅಳತೆಗೆ ಸಿಕ್ಕುವುದಿಲ್ಲ
ಅಳತೆಗಳ ಮಿತಿಗೆ ಬಿದ್ದವರು
ಬಿಡು ಅತೀತರಾಗುವುದಿಲ್ಲ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...