ಸಮಾಜದೈವತ


ಸಾಸಿರ ವಕ್ತ್ರದ ಸಾಸಿರ ನೇತ್ರದ
ಸಾಸಿರ ಪದಗಳ ವ್ಯಕ್ತಿ-
ಸಾಸಿರ ಚಿತ್ತದ ಸಾಸಿರ ಹೃದಯದ
ಸಾಸಿರ ಬುದ್ಧಿಯ ಶಕ್ತಿ!


ಈ ಶಕ್ತಿಯೆ ದಿಟವಿಂದಿನ ದೈವತ,
ಪೂಜೆಯಿದಕೆ ಬೇಕು-
ಪೂಜೆ ದೊರೆಯದಿರೆ ದೈವತವಲ್ಲಿದು,
ದೆವ್ವವಯ್ಯೊ ! ಸಾಕು !!


ಕಲ್ಲು-ಕಂಚು-ಕಟ್ಟಿಗೆಯ ಮೂರ್ತಿಗಳೆ
ದೇವರೆಂಬಿರೇನು ?
ಅಲ್ಲವಲ್ಲವವು ಬರಿಯ ಗೊಂಬೆಗಳೆ,
ಮಾಡಬಲ್ಲವೇನು ?


ಒಳಿತು-ಹದುಳಗಳ ಗೆಲವು-ಮೇಲುಗಳ
ಸೆಳೆದು ತರುವುದೀ ಶಕ್ತಿ-
ಮುಳಿದರೆ ಇದು ಮನುವಿನ ಕುನ್ನಿಗಳಿಗೆ
ಇರುವುದೆಲ್ಲಿಯಾ ಮುಕ್ತಿ?


ಚೆಲುವು-ಚೆನ್ನಿನಲಿ ಇಳೆಯನು ತುಳುಕಿಸಿ
ನಲಿಸಲು ಬಲ್ಲದಿದು ;
ಪ್ರಳಯದ ಬಳಗವ ಕರೆದು ಲೋಕಗಳ-
ನಳಿಸಲು ಬಲ್ಲದಿದು !


ವಿಷಮತೆಯಿಂದಿದನರ್ಚಿಸೆ ಮೆಚ್ಚದೆ
ಮುಳಿದೆದಾಡುವುದು-
ಸಮತೆಯ ಪೂಜೆಯ ಸಲಿಸಿದರಿದು ಸುಖ-
ಶಾಂತಿಯ ನೀಡುವುದು.


ಸಾಸಿರ ವಕ್ತ್ರದ ಸಾಸಿರ ನೇತ್ರದ
ಸಾಸಿರ ಪದಗಳ ವ್ಯಕ್ತಿ-
ನಾಶವನರಿಯದ ಕಡೆ-ಮೊದಲಿಲ್ಲದ
ಭೀಕರ ಶಂಕರ ಶಕ್ತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಸ್ತುಮಧ್ಯ: ಆದಿ ಅಂತ್ಯಗಳ ನಡುವೆ
Next post ಬಣ್ಣದ ಚಿಟ್ಟೆ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys