ಗುಡಿಯಾ ಸೃಂಗಾರ ಮಾಡಿದಾ

ಬೆಟ್ಟದ ಮೇಲೆ ಬೆನ್ನವಿಟ್ಟು ಬೇಲಿಮೇಲಿನ ಸೋರೆಬುರುಡೆ
ಯಾವ ಮರ ಮಾಡಾನಪ್ಪಾ ಲೋಲಕಿನ್ನುರಿಯಾ || ೧ ||

ಚೆಲುವಯ್ಯ ಚೆಲುವೋ ತಾನ ತಾನಿ ತನ್ನನ್ನಾ
ನಿನ್ನ ಮಾಯಾರಿ ಪೇಳಲೋ ಕೋಲನ್ನ ಕೋಲೇ || ೨ ||

ಆಚಿಗೆ ಆಲದ ಮರ ಈಚೀಗೆ ಗೋಳೀಮರ
ಸುತ್ತಾಕಿ ಬಾರೋ ಬಳಿಗಾರಾ || ೩ ||

ಮಲ್ಲಿಗೆ ಹೂವಿನಲ್ ಹೆಣಿದಿದ್ದ ಮಂಚ
ಅದು ನಮ ಗುರುಗಳು ವರಗುವ ಮಂಚ || ೪ ||

ದೇವ ಸೃಂಗಾರ ಮಾಡಿದಾ ಬಸವಣ್ಣ
ಗುಡಿಯಾ ಸೃಂಗಾರ ಮಾಡಿದಾ || ೫ ||

ಕ್ಯಾದೀಗೆ ಹೂವಿನಲ್ ಹೆಣದೀದ ಮಂಚ
ಅದು ನಮ ಸರಸ್ವತಿ ವರಗೂವ ಮಂಚ || ೬ ||

ದೇವ ಸೃಂಗಾರ ಮಾಡಿದಾ ಬಸವಣ್ಣ
ಗುಡಿಯಾ ಸೃಂಗಾರ ಮಾಡಿದಾ || ೭ ||
*****
ಹೇಳಿದವರು: ಲಕ್ಷ್ಮಣ ರಾಮ ನಾಯ್ಕ, ಮಾಬ್ಲೇಶ್ವರ ಕರಿಯಾ ನಾಯ್ಕ, ಮೆಣಸಿ
೦೨/೧೧/೭೦

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ ಬೆಳೆಯೆಂದಾವ ಬೆಳೆಯನಾಯ್ದುಕೊಳ್ಳಲಿ?
Next post ಭಾರತೀಯ ಸ್ತ್ರೀ ಮತ್ತು ಸಾಮಾಜಿಕ ಸಮತೆ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys