Home / ಕವನ / ಕೋಲಾಟ / ಸುಗ್ಗಿ ತಳನಲ್ಲಿ ಪದ (ದುಮಸೋಲಣ್ಣಿರಾ)

ಸುಗ್ಗಿ ತಳನಲ್ಲಿ ಪದ (ದುಮಸೋಲಣ್ಣಿರಾ)

ದುಮಸೋ ಲಣ್ಣಿರಾ ಇಲ್ಲಿ ಈಸ್ವರನಿಗೆ ತಳಕ
ದುಮಸೋ ಲಣ್ಣಿರಾ ಇಲ್ಲಿ ಮೇಲು ಹೊಲ್ನರಿಗೇ || ೧ ||

ದುಮಸೋ ಲಣ್ಣಿರಾ ಇಲ್ಲಿ ನಲಕೆ ನಾಗೇಂದ್ರಗೇ
ದುಮಸೋ ಲಣ್ಣಿರಾ ಇಲ್ಲಿ ಕುಲಕೆ ಪಾಂಡವ್ರೀಗೇ || ೨ ||

ದುಮಸೋ ಲಣ್ಣಿರಾ ಇಲ್ಲಿ ಭೂಮಿ ತಾಯಿಗೇ
ದುಮಸೋ ಲಣ್ಣಿರಾ ಇಲ್ಲಿ ಜಟ್ಗು ರಾಯಗೇ || ೩ ||

ದುಮಸೋ ಲಣ್ಣಿರಾ ಇಲ್ಲಿ ಕೀಳು ಪರಿವಾರದರಿಗೇ
ದುಮಸೋ ಲಣ್ಣಿರಾ ಇಲ್ಲಿ ಉರವಾ ಜೋತಿಗೇ || ೪ ||

ದುಮಸೋ ಲಣ್ಣಿರಾ ಇಲ್ಲಿ ಮೆರವಾ ತುಂಬಿಗೇ
ದುಮಸೋ ಲಣ್ಣಿರಾ ಇಲ್ಲಿ ಮೆರವಾ ಚೌಡಮ್ಮಗೇ || ೫ ||

ದುಮಸೋ ಲಣ್ಣಿರಾ ಇಲ್ಲಿ ವರ್ಸಗ್ವೊಂದು ಲಬ್ಬ
ದುಮಸೋ ಲಣ್ಣಿರಾ ಇಲ್ಲಿ ಲಾಡು ತಿಂಬ ಮಕ್ಕಳೇ || ೬ ||

ಹಬ್ಬದ ಮೂರುದಿನ ಲಾಡು ತಿನ್ನಿ ಮಕ್ಕಳೇ
ಹಬ್ಬದ ಮರುದಿನ ಬೇಡು ತಿನ್ನಿ ಮಕ್ಕಳೇ || ೭ ||

ಹಬ್ಬದ ಮರುದಿನ ಮಾ ದೊಡ್ಡ ಬಳಗವೋ
ಹಬ್ಬದ ಮರುದಿನ ಕಾಮನ ಬಳಗವೋ || ೮ ||

ಹಬ್ಬದ ಮರುದಿನ ಬೀಮ ದೊಡ್ಡ ಬಳಗವೋ
ಹಬ್ಬದ ಮರುದಿನ ಕಾಮಗು ಬೀಮಗು ಕತ್ನವು ಬಿದ್ದೋ || ೯ ||

ಹಬ್ಬದ ಮರುದಿನ ಕಾಮನೆ ಬಿದ್ದಾಬೀಮನೆ ಗೆದ್ದಾ
ಹಬ್ಬದ ಮರುದಿನ ಬೀಮನೆ ಬಿದ್ದಾ ಕಾಮನೆ ಗೆದ್ದಾ || ೧೦ ||
*****
ಹೇಳಿದವರು: ಸಣಕೂಸ ಉಪ್ಪಾರ, ಹಳದಿಪುರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...