Home / ಕವನ / ಕವಿತೆ / ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ
ಮೋಹಿಸುವುದೇ ಒಂದು ತೆವಲು
ಬದುಕ ಮೋಹಿಸುತ್ತೇವೆ
ಬದುಕಲು ಮೋಹಿಸುತ್ತೇವೆ,
ಮೋಹದಿಂದಲೇ ಉಸಿರು ಅದರಿಂದಲೇ ಬಸಿರು
ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು

ಬರೆಯುವುದನ್ನು ಮೋಹಿಸದೇ ಹಡೆಯುವುದು
ಹೇಗೆ? ಅಕ್ಷರ ಮೂಡುವುದು ಹೇಗೆ?
ಪದಕ್ಕೆ ಪದ ಜೊತೆಯಾಗಿ ಪಾದವಾಗುವುದು ಹೇಗೆ?
ಅರ್‍ಥ ಹುಟ್ಟುವುದು ಹೇಗೆ? ಅರ್ಥವೆನ್ನುತ್ತಲೇ
ನೆನಪಾಯಿತು ಅರ್ಥಶಾಸ್ತ್ರ
ಬದುಕೆಲ್ಲಾ ಅರ್ಥಶಾಸ್ತ್ರವೇ
ಕೂಡಿ ಕಳೆದು ಲೆಕ್ಕ ಹಾಕಿ
ಗುಣಿಸಿ ಬಾಗಿಸಿ ಬಂದ ಶೇಷದಿಂದ
ಒಂದಿಷ್ಟು ಹೊಸ ಉಸಿರು

ಮೋಹಿಸದಿದ್ದರೆ ನಾವು ಈ ಭೂಮಿ
ಈ ಬಾನು ಈ ನೆಲ ಈ ಆಕಾಶ
ಈಜುವುದು ಹೇಗೆ ಈ ಭವಸಾಗರ
ಈಸಬೇಕು ಇದ್ದ ಜೈಸಬೇಕು ನಡೆದಿದೆ ಉಪದೇಶ,
ದಡ ಕಾಣುವುದು ಹೇಗೆ?
ಮನುಷ್ಯರು ಮನುಷ್ಯರ ಮುಖ ನೋಡುವುದು ಹೇಗೆ?
ಮೋಹಿಸು ಎಂದು ಅದೇ ಹೆತ್ತ ಮಗು
ಹೇಳುತ್ತಿದ ಅಳುತ್ತಿದೆ ಗಾರ್‌ಗಾರ್ ಕೇಳಿಸದೇ
ಕೇಳಿಸದಿದ್ದರೆ ಜಗತ್ತೇ ಅತ್ತಂತೆ.
ಮೃತ್ಯು ಹೊಂಚು ಹಾಕಿ ಕುಳಿತಿದೆ
ಹಾವಿನ ಹೆಡೆಯ ನೆರಳಿನ ಕಪ್ಪೆ.

ಬದುಕಿರುವಷ್ಟು ದಿನ ಮೋಹಿಸುತ್ತೇವೆ
ಮೋಹಿಸುವುದರಿಂದಲೇ ಬದುಕುತ್ತೇವೆ
“ಇಲ್ಲವಾದರೇನಿದೆ ಇಲ್ಲಿ ಕಣ್ಣು ಕೀಳುವ
ಸೂಜಿ ಕೊಲುವ ಬಡಿಗೆ” ಅದರಡಿಗೇ
ಮದ್ದು ಗುಂಡು ರಕ್ತಪಾತ ಆಸ್ಪತ್ರೆ
ಔಷಧ ಪರಿಹಾರ ಚೆಕ್ಕು ಹಣ
ಸಾಗಿದೆ ಸಾಲಾಗಿ ಹೆಣ!

ಕಿತ್ತ ಕೈ ಕಾಲುಗಳು, ಚೆಲ್ಲಾಡಿದ
ಸರ ಬಳೆ ಕೈ ಚೀಲಗಳು
ಇವನ್ನೆಲ್ಲಾ ನಿಲ್ಲಿಸಲು ನೀವೂ ಮೋಹಿಸಿ
ಕೈಗೆ ಬಂದ ಬಂದೂಕನ್ನು ಮೇಲೆತ್ತುವ ಮೊದಲು
ಯುದ್ಧ ಘೋಷಿಸುವ ಮೊದಲು,
ಗಡಿಗಳಿಗೆ ತಂತಿ ಬಿಗಿಯುವ ಮೊದಲು
ಶವಪೆಟ್ಟಿಗೆ ಖರೀದಿಸುವ ಮೊದಲು
ಒಂದಿಷ್ಟು ಮೋಹಿಸಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...