Home / ಕವನ / ಕವಿತೆ / ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ
ಮೋಹಿಸುವುದೇ ಒಂದು ತೆವಲು
ಬದುಕ ಮೋಹಿಸುತ್ತೇವೆ
ಬದುಕಲು ಮೋಹಿಸುತ್ತೇವೆ,
ಮೋಹದಿಂದಲೇ ಉಸಿರು ಅದರಿಂದಲೇ ಬಸಿರು
ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು

ಬರೆಯುವುದನ್ನು ಮೋಹಿಸದೇ ಹಡೆಯುವುದು
ಹೇಗೆ? ಅಕ್ಷರ ಮೂಡುವುದು ಹೇಗೆ?
ಪದಕ್ಕೆ ಪದ ಜೊತೆಯಾಗಿ ಪಾದವಾಗುವುದು ಹೇಗೆ?
ಅರ್‍ಥ ಹುಟ್ಟುವುದು ಹೇಗೆ? ಅರ್ಥವೆನ್ನುತ್ತಲೇ
ನೆನಪಾಯಿತು ಅರ್ಥಶಾಸ್ತ್ರ
ಬದುಕೆಲ್ಲಾ ಅರ್ಥಶಾಸ್ತ್ರವೇ
ಕೂಡಿ ಕಳೆದು ಲೆಕ್ಕ ಹಾಕಿ
ಗುಣಿಸಿ ಬಾಗಿಸಿ ಬಂದ ಶೇಷದಿಂದ
ಒಂದಿಷ್ಟು ಹೊಸ ಉಸಿರು

ಮೋಹಿಸದಿದ್ದರೆ ನಾವು ಈ ಭೂಮಿ
ಈ ಬಾನು ಈ ನೆಲ ಈ ಆಕಾಶ
ಈಜುವುದು ಹೇಗೆ ಈ ಭವಸಾಗರ
ಈಸಬೇಕು ಇದ್ದ ಜೈಸಬೇಕು ನಡೆದಿದೆ ಉಪದೇಶ,
ದಡ ಕಾಣುವುದು ಹೇಗೆ?
ಮನುಷ್ಯರು ಮನುಷ್ಯರ ಮುಖ ನೋಡುವುದು ಹೇಗೆ?
ಮೋಹಿಸು ಎಂದು ಅದೇ ಹೆತ್ತ ಮಗು
ಹೇಳುತ್ತಿದ ಅಳುತ್ತಿದೆ ಗಾರ್‌ಗಾರ್ ಕೇಳಿಸದೇ
ಕೇಳಿಸದಿದ್ದರೆ ಜಗತ್ತೇ ಅತ್ತಂತೆ.
ಮೃತ್ಯು ಹೊಂಚು ಹಾಕಿ ಕುಳಿತಿದೆ
ಹಾವಿನ ಹೆಡೆಯ ನೆರಳಿನ ಕಪ್ಪೆ.

ಬದುಕಿರುವಷ್ಟು ದಿನ ಮೋಹಿಸುತ್ತೇವೆ
ಮೋಹಿಸುವುದರಿಂದಲೇ ಬದುಕುತ್ತೇವೆ
“ಇಲ್ಲವಾದರೇನಿದೆ ಇಲ್ಲಿ ಕಣ್ಣು ಕೀಳುವ
ಸೂಜಿ ಕೊಲುವ ಬಡಿಗೆ” ಅದರಡಿಗೇ
ಮದ್ದು ಗುಂಡು ರಕ್ತಪಾತ ಆಸ್ಪತ್ರೆ
ಔಷಧ ಪರಿಹಾರ ಚೆಕ್ಕು ಹಣ
ಸಾಗಿದೆ ಸಾಲಾಗಿ ಹೆಣ!

ಕಿತ್ತ ಕೈ ಕಾಲುಗಳು, ಚೆಲ್ಲಾಡಿದ
ಸರ ಬಳೆ ಕೈ ಚೀಲಗಳು
ಇವನ್ನೆಲ್ಲಾ ನಿಲ್ಲಿಸಲು ನೀವೂ ಮೋಹಿಸಿ
ಕೈಗೆ ಬಂದ ಬಂದೂಕನ್ನು ಮೇಲೆತ್ತುವ ಮೊದಲು
ಯುದ್ಧ ಘೋಷಿಸುವ ಮೊದಲು,
ಗಡಿಗಳಿಗೆ ತಂತಿ ಬಿಗಿಯುವ ಮೊದಲು
ಶವಪೆಟ್ಟಿಗೆ ಖರೀದಿಸುವ ಮೊದಲು
ಒಂದಿಷ್ಟು ಮೋಹಿಸಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...