ಪರಶಿವನ ಗೆಲ್ಲು

ಭಕ್ತ ನಿನಗೊಂದು ಕಿವಿಮಾತು
ಮಾಡದಿರು ಬಾಳು ವ್ಯಸನದಿ ತೂತು
ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ!
ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ

ಆ ಪರಶಿವನೆ ನಿನ್ನ ಪರಮಾತ್ಮ
ಪಾರ್‍ವತಿಯೇ ನಿನ್ನ ಮನಸ್ಸು ಹೌದು
ಪ್ರಾಣಗಳೇ ಸಹಚರರು ದೇಹವೆ ಮನೆ
ಇಂದ್ರಿಯ ಕ್ರಿಯೆಗಳೇ ನಿನ್ನ ಪೂಜೆ

ನಿದ್ರೆಯೇ ನಿನ್ನ ಸಮಾಧಿ ಸ್ಥಿತಿ
ನಿನ್ನ ಸಂಚಾರವೆಲ್ಲ ಪ್ರದಕ್ಷಿಣೆ ರೀತಿ
ಆಡುವ ಮಾತೇ ಅವನಸ್ತುತಿ
ಮಾಡುವ ಕಾರ್‍ಯಗಳ ಆರಾಧನೆ ಪ್ರೀತಿ

ದೇಹವೇರಥ ಆತ್ಮನೆ ರಥಿ
ಬುದ್ಧಿಯೇ ಸಾರಥಿ ಬಾಳಿಗೆಲ್ಲ
ಮನಸ್ಸೆ ಹುರಿ ಇಂದ್ರಿಯಗಳೇ ಅಶ್ವಗಳು
ದೇವನೆಡೆಗೆ ಹೋಗದೆ ವಿಧಿ ಇಲ್ಲ

ಆಧ್ಯಾತ್ಮಿಕ ದಾರಿಯಲಿ ಬ್ರಹ್ಮಚರ್ಯ
ಪಾಲಿಸು ಸತತ ಏಕಾಗ್ರದಲ್ಲಿ
ಕಾಮನಿರುವಲ್ಲಿ ರಾಮನಿಲ್ಲ
ತುಲಸಿದಾಸರ ವಾಣಿ ನೆನೆ ಮನದಲ್ಲಿ

ಬಿದ್ದು ಹೋಗುವ ತನುವಿಗೆ ಅಭಿಮಾನವೇ
ಜಡ್ಡು ದುರಹಂಕಾರ ಬಿಗು ಮಾನವೇ
ಎಲ್ಲವನ್ನು ಆಚೆ ತಳ್ಳಿ ಎದ್ದು ನಿಲ್ಲು
ಮಾಣಿಕ್ಯ ವಿಠಲನ ಭಾವಗೆಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೧
Next post ಇರುವುವಂದದಾರೂಪ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys