ಪರಶಿವನ ಗೆಲ್ಲು

ಭಕ್ತ ನಿನಗೊಂದು ಕಿವಿಮಾತು
ಮಾಡದಿರು ಬಾಳು ವ್ಯಸನದಿ ತೂತು
ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ!
ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ

ಆ ಪರಶಿವನೆ ನಿನ್ನ ಪರಮಾತ್ಮ
ಪಾರ್‍ವತಿಯೇ ನಿನ್ನ ಮನಸ್ಸು ಹೌದು
ಪ್ರಾಣಗಳೇ ಸಹಚರರು ದೇಹವೆ ಮನೆ
ಇಂದ್ರಿಯ ಕ್ರಿಯೆಗಳೇ ನಿನ್ನ ಪೂಜೆ

ನಿದ್ರೆಯೇ ನಿನ್ನ ಸಮಾಧಿ ಸ್ಥಿತಿ
ನಿನ್ನ ಸಂಚಾರವೆಲ್ಲ ಪ್ರದಕ್ಷಿಣೆ ರೀತಿ
ಆಡುವ ಮಾತೇ ಅವನಸ್ತುತಿ
ಮಾಡುವ ಕಾರ್‍ಯಗಳ ಆರಾಧನೆ ಪ್ರೀತಿ

ದೇಹವೇರಥ ಆತ್ಮನೆ ರಥಿ
ಬುದ್ಧಿಯೇ ಸಾರಥಿ ಬಾಳಿಗೆಲ್ಲ
ಮನಸ್ಸೆ ಹುರಿ ಇಂದ್ರಿಯಗಳೇ ಅಶ್ವಗಳು
ದೇವನೆಡೆಗೆ ಹೋಗದೆ ವಿಧಿ ಇಲ್ಲ

ಆಧ್ಯಾತ್ಮಿಕ ದಾರಿಯಲಿ ಬ್ರಹ್ಮಚರ್ಯ
ಪಾಲಿಸು ಸತತ ಏಕಾಗ್ರದಲ್ಲಿ
ಕಾಮನಿರುವಲ್ಲಿ ರಾಮನಿಲ್ಲ
ತುಲಸಿದಾಸರ ವಾಣಿ ನೆನೆ ಮನದಲ್ಲಿ

ಬಿದ್ದು ಹೋಗುವ ತನುವಿಗೆ ಅಭಿಮಾನವೇ
ಜಡ್ಡು ದುರಹಂಕಾರ ಬಿಗು ಮಾನವೇ
ಎಲ್ಲವನ್ನು ಆಚೆ ತಳ್ಳಿ ಎದ್ದು ನಿಲ್ಲು
ಮಾಣಿಕ್ಯ ವಿಠಲನ ಭಾವಗೆಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೧
Next post ಇರುವುವಂದದಾರೂಪ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…