Home / ಕವನ / ತತ್ವಪದ / ಪರಶಿವನ ಗೆಲ್ಲು

ಪರಶಿವನ ಗೆಲ್ಲು

ಭಕ್ತ ನಿನಗೊಂದು ಕಿವಿಮಾತು
ಮಾಡದಿರು ಬಾಳು ವ್ಯಸನದಿ ತೂತು
ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ!
ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ

ಆ ಪರಶಿವನೆ ನಿನ್ನ ಪರಮಾತ್ಮ
ಪಾರ್‍ವತಿಯೇ ನಿನ್ನ ಮನಸ್ಸು ಹೌದು
ಪ್ರಾಣಗಳೇ ಸಹಚರರು ದೇಹವೆ ಮನೆ
ಇಂದ್ರಿಯ ಕ್ರಿಯೆಗಳೇ ನಿನ್ನ ಪೂಜೆ

ನಿದ್ರೆಯೇ ನಿನ್ನ ಸಮಾಧಿ ಸ್ಥಿತಿ
ನಿನ್ನ ಸಂಚಾರವೆಲ್ಲ ಪ್ರದಕ್ಷಿಣೆ ರೀತಿ
ಆಡುವ ಮಾತೇ ಅವನಸ್ತುತಿ
ಮಾಡುವ ಕಾರ್‍ಯಗಳ ಆರಾಧನೆ ಪ್ರೀತಿ

ದೇಹವೇರಥ ಆತ್ಮನೆ ರಥಿ
ಬುದ್ಧಿಯೇ ಸಾರಥಿ ಬಾಳಿಗೆಲ್ಲ
ಮನಸ್ಸೆ ಹುರಿ ಇಂದ್ರಿಯಗಳೇ ಅಶ್ವಗಳು
ದೇವನೆಡೆಗೆ ಹೋಗದೆ ವಿಧಿ ಇಲ್ಲ

ಆಧ್ಯಾತ್ಮಿಕ ದಾರಿಯಲಿ ಬ್ರಹ್ಮಚರ್ಯ
ಪಾಲಿಸು ಸತತ ಏಕಾಗ್ರದಲ್ಲಿ
ಕಾಮನಿರುವಲ್ಲಿ ರಾಮನಿಲ್ಲ
ತುಲಸಿದಾಸರ ವಾಣಿ ನೆನೆ ಮನದಲ್ಲಿ

ಬಿದ್ದು ಹೋಗುವ ತನುವಿಗೆ ಅಭಿಮಾನವೇ
ಜಡ್ಡು ದುರಹಂಕಾರ ಬಿಗು ಮಾನವೇ
ಎಲ್ಲವನ್ನು ಆಚೆ ತಳ್ಳಿ ಎದ್ದು ನಿಲ್ಲು
ಮಾಣಿಕ್ಯ ವಿಠಲನ ಭಾವಗೆಲ್ಲು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...