ಪರಶಿವನ ಗೆಲ್ಲು

ಭಕ್ತ ನಿನಗೊಂದು ಕಿವಿಮಾತು
ಮಾಡದಿರು ಬಾಳು ವ್ಯಸನದಿ ತೂತು
ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ!
ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ

ಆ ಪರಶಿವನೆ ನಿನ್ನ ಪರಮಾತ್ಮ
ಪಾರ್‍ವತಿಯೇ ನಿನ್ನ ಮನಸ್ಸು ಹೌದು
ಪ್ರಾಣಗಳೇ ಸಹಚರರು ದೇಹವೆ ಮನೆ
ಇಂದ್ರಿಯ ಕ್ರಿಯೆಗಳೇ ನಿನ್ನ ಪೂಜೆ

ನಿದ್ರೆಯೇ ನಿನ್ನ ಸಮಾಧಿ ಸ್ಥಿತಿ
ನಿನ್ನ ಸಂಚಾರವೆಲ್ಲ ಪ್ರದಕ್ಷಿಣೆ ರೀತಿ
ಆಡುವ ಮಾತೇ ಅವನಸ್ತುತಿ
ಮಾಡುವ ಕಾರ್‍ಯಗಳ ಆರಾಧನೆ ಪ್ರೀತಿ

ದೇಹವೇರಥ ಆತ್ಮನೆ ರಥಿ
ಬುದ್ಧಿಯೇ ಸಾರಥಿ ಬಾಳಿಗೆಲ್ಲ
ಮನಸ್ಸೆ ಹುರಿ ಇಂದ್ರಿಯಗಳೇ ಅಶ್ವಗಳು
ದೇವನೆಡೆಗೆ ಹೋಗದೆ ವಿಧಿ ಇಲ್ಲ

ಆಧ್ಯಾತ್ಮಿಕ ದಾರಿಯಲಿ ಬ್ರಹ್ಮಚರ್ಯ
ಪಾಲಿಸು ಸತತ ಏಕಾಗ್ರದಲ್ಲಿ
ಕಾಮನಿರುವಲ್ಲಿ ರಾಮನಿಲ್ಲ
ತುಲಸಿದಾಸರ ವಾಣಿ ನೆನೆ ಮನದಲ್ಲಿ

ಬಿದ್ದು ಹೋಗುವ ತನುವಿಗೆ ಅಭಿಮಾನವೇ
ಜಡ್ಡು ದುರಹಂಕಾರ ಬಿಗು ಮಾನವೇ
ಎಲ್ಲವನ್ನು ಆಚೆ ತಳ್ಳಿ ಎದ್ದು ನಿಲ್ಲು
ಮಾಣಿಕ್ಯ ವಿಠಲನ ಭಾವಗೆಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೧
Next post ಇರುವುವಂದದಾರೂಪ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…