ಕಾಫಿಯ ಕೆರೆ

(ಕಾಳನ ಕೋರಿಕೆ)

ಕಾಳನು ಏಳೆಂಟು ವರುಷದ ಹುಡುಗ,
ಕಾಳಿಯ ಗುಡಿಗೊಂದು ದಿವಸ ಹೋದಾಗ-
ತೋಳೆತ್ತಿ ಕೈ ಮುಗಿದು ಕಣ್‌ಮುಚ್ಚಿ ನಿಂತು
ಕಾಳೀದೇವಿಗೆ ಬೇಡಿಕೊಂಡನು ಇಂತು ೧

ಅಮ್ಮಮ್ಮಾ ನಮ್ಮೂರು ಬಲು ದೊಡ್ಡದಮ್ಮಾ!
ನಮ್ಮೂರಲಿಹ ಜನ ಕಮ್ಮೀ ಇಲ್ಲಮ್ಮಾ!
ಎರಡು ಲಕ್ಷದ ಮೇಲೆ ಇನ್ನೆಷ್ಟೋ ಸಾವಿರ
ಇರುವರು-ಎಂದು ನಾನರಿತಿಹೆನಮ್ಮಾ! ೨

ದಿನ ದಿನ ಬೆಳಗು-ಸಂಜೆಯೊಳು ಅವರಿಗೆಲ್ಲಾ
ಕುಡಿಯಲು ಬಿಸಿ ಬಿಸಿ ಕಾಫೀ ಬೇಕಮ್ಮಾ!
ಅವರೆಲ್ಲಾ ಕುಡಿಯುವ ಕಾಫಿಯ ಲೆಕ್ಕವ
ವಿವರಿಸಿ ಹೇಳುವೆ, ಕೇಳು ನಮ್ಮಮ್ಮಾ! ೩

ಅಬ್ಬಬ್ಬಾ ! ತೀರ ಕಡಿಮೆಯಾಗಿ ಹಿಡಿದರೂ
ಒಬ್ಬೊಬ್ಬರಿಗೆ ಲೋಟಾ ಎರಡು ಬೇಡೇನೆ ?
ನಾಲ್ಕು ಲೋಟಕೆ ಕಿಟ್ಟಲಿ ತುಂಬುವುದು ಹದಿ-
ನಾಲ್ಕು ಕಿಟ್ಟಲಿಗೊಂದು ಕೊಡ ತುಂಬದೇನೆ ? ೪

ನೂರುಮಂದಿಗೆ ನಾಲ್ಕು ಕೊಡವಾಗುವುದು; ಹತ್ತು-
ನೂರುಮಂದಿಗೆ ನಲವತ್ತು ಆಗುವುದು ;
ಲಕ್ಷ ಮಂದಿಗೆ ನಾಲ್ಕು ಸಾವಿರ ಕೊಡ ಕಾಫೀ
ಲೆಕ್ಕವಾಯಿತೆ-ನಮಗೆಷ್ಟು ಬೇಕೆಂದು ? ೫

ನಮ್ಮೂರ ಜನಕೆಂಟು ಸಾವಿರಕ್ಕೂ ಹೆಚ್ಚು
ಕಮ್ಮನೆಯಾ ಕಾಫೀ ಕೊಡಗಳು ಬೇಕಮ್ಮಾ!
ಒಂದೊಂದೇ ದಿನಕಿಷ್ಟು ಕೊಡಗಳು ಬೇಕಿರೆ,
ಒಂದು ವರುಷಕೆಷ್ಟು ಲೆಕ್ಕ ನೋಡಮ್ಮಾ ! ೬

ಇಂದು ಈ ಲೆಕ್ಕವ ನಾ ಮಾಡಲರಿಯೆನೆ,
ಮುಂದಿನ ವರುಷಕೆ ಮಾಡಿ ಹೇಳುವೆನು !
ಇಂತಹ ಲೆಕ್ಕವ ಮಾಸ್ತರ್ರು ನಮಗಿನ್ನೂ
ಕಲಿಸಿಯೆ ಕೊಟ್ಟಿಲ್ಲ ನಾ ಮಾಡಲೇನು ? ೭

ಆದರು ನಾ ಸುಮಾರಾಗಿ ಹೇಳುವೆನು –
ನಮ್ಮೂರ ವರುಷದ ಕಾಫೀ ಲೆಕ್ಕವನು ;
ವರುಷದ ಕಾಫಿಯು ಸೇರಿ ಕೆಂಪಾಂಬುಧಿ,
ಕೆರೆಯಂಥಾ ಕೆರೆ ತುಂಬುವುದು ತಿಳಿ ನೀನು ! ೮

ಕೆರೆತುಂಬಾ ಕಾಫಿಯ ಕಾಸಬೇಕಾದರೆ,
ವರುಷವೆಲ್ಲವು ಎಷ್ಟು ಶ್ರಮ ನಮಗಮ್ಮಾ!
ಇರುವೆ ನೀ ಸುಮ್ಮನೆ ಕರುಣೆಯು ಬರದೇನೆ ?
ಹರಿಸು ನಮ್ಮಗಳ ಈ ಕೊರತೆಯನಮ್ಮಾ! ೯

ಇನ್ನೇನ ಬೇಡೆನು, ನಿನ್ನನು ಕಾಡೆನು,
ನನ್ನದಿದೊಂದೇ ಕೋರಿಕೆಯು ಕೇಳಮ್ಮಾ!
ಆಪತ್ತು ಬರದಂತೆ ನಮ್ಮೂರ ಜನಕೆಲ್ಲಾ
ಕಾಫಿಯ ಕೆರೆಯೊಂದ ಕೊಡು ನೀ ಕಾಳಮಾ ! ೧೦

ದೋಸೆಯ ಬೆಟ್ಟವೊಂದಿದ್ದರೂ ಬೇಕು,
ಇಲ್ಲದಿದ್ದರೆ ಕಾಫೀ ಕೆರೆಯೊಂದೇ ಸಾಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕ ಬೆಳವಣಿಗೆಯ
Next post ವಚನಗಳು

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…