Home / ಲೇಖನ / ವಿಜ್ಞಾನ / ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?

ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?

ಉತ್ತರ ಕರ್ನಾಟಕದ ಪ್ರತಿ ಊರಿನಲ್ಲಿಯೂ ಗುಡಿ, ಕಟ್ಟೆ, ರಸ್ತೆ ಎಲ್ಲೆಂದರಲ್ಲಿ ಬೇವಿನ ಮರವನ್ನು ಬೆಳೆಸುತ್ತಾರೆ. ಇದು ಅಲ್ಲಿಯ ಸೆಕೆಯುಳ್ಳ ಕಾಲದ ಜನಕ್ಕೆ ತಂಪೆರೆಯುವ ಮರವೂ ಹೌದು. ಜನಪದ ಕವಿಕೂಡ “ಬ್ಯಾಸಗಿ ದಿವಸಕ ಬೇವಿನ ಮರತಂಪ, ಭೀಮಾರತಿ ಎಂಬ ಹೊಳೆತಂಪ” ಎಂದು ಪದವನ್ನೇ ಕಟ್ಟಿದ್ದಾನೆ. ಈ ಗಿಡದಿಂದಾಗುವ ಅಮೂಲ್ಯ ಉಪಯೋಗಗಳನ್ನು ಕೂಡ ಉತರ ಕರ್ನಾಟಕದ ಜನಕ್ಕೆ ಗೊತ್ತಿದೆ. ಬಾಣಂತಿಯರಿಗೆ ಇದನು ಬಳಸುತ್ತಾರೆ. ಇದರ ವಾಸನೆ ಬಡಿದರೆ ಕ್ರಿಮಿಕೀಟಗಳು ಹತ್ತಿರಬರುವುದಿಲ್ಲ, ಜತೆಗೆ ಈ ಮರವನ್ನು ಕಡಿದಾಗ ಮನೆಗೆ ತೊಲೆ ಸೌದೆಗಳಿಗೆ ಬಳೆಸಬಹುಡು. ಇದರಬೀಜಗಳು ಹಣ್ಣಾಗಿ ಉದುರಿದಾಗ ಸಂಗ್ರಹಿಸಿ ಇದರಿಂದ ಬೇವಿನ ಎಣ್ಣೆಯನ್ನು ತಯಾರಿಸಿ ಔಷಧಿ ಮಾಡುತ್ತಾರೆ. ಈ ಕಾರಣವಾಗಿ ಬೇವಿನಮರವನ್ನು ಸಹಜವಾಗಿ ಮನೆಮುಂದೆ ಬೆಳೆಸಲಾಗುತ್ತದೆ. ಇದರಿಂದ ಬೀಸಿಬರುವ ತಂಗಾಳಿ ಇನ್‌ಫ್ಲೂಯಾಂಜಾ ದಂತಹ ಸಾಂಕ್ರಾಮಿಕ ಜಾಡ್ಯವನ್ನು ಹೋಗಲಾಡಿಸುತ್ತದೆ. ಶೀತ ನೆಗಡಿಗೆ ಇದರ ವಾಸನೆ ಹೇಳಿ ಮಾಡಿಸಿದ ಔಷಧಿ. ಇದರ ಎಲೆಗಳ ಹೊಗೆಯನ್ನು ಮೂಗಿಗೆ ಹಿಡಿದರೆ ಸೀತದಂತಹ ಕಾಯಿಲೆಗಳು ದೂರವಾಗುತ್ತವೆ. ಇದರ ಕಡ್ಡಿಯನ್ನು ಬ್ರೆಶ್‌ನಂತೆ ಮಾಡಿ ಪ್ರತಿದಿನ ಹಲ್ಲುಗಳನ್ನು ಉಜ್ಜುತ್ತಾ ಬಂದರೆ ವಸಡುಗಟ್ಟಿಯಾಗುವುದಲ್ಲದೇ ದಂತಕ್ಷಯ ಮುಂತಾದ ಬಾಯಿ ಹುಣ್ಣುಗಳು ವಾಸಿಯಾಗುತ್ತವೆ. ಹಲ್ಲುಗಳೂ ಸಹ ಹೊಳೆಯುತ್ತವೆ.

ಬೇವಿನ ಎಲೆ, ಕಾಯಿ, ಕಡ್ಡಿ ಎಲ್ಲವೂ ಔಷಧಿ ಗುಣವನ್ನು ಹೊಂದಿರುತ್ತದೆ. ಬೇವಿನ ಎಲೆಗಳನ್ನು ಆಹಾರಧಾನ್ಯಗಳಲ್ಲಿ ಇಲ್ಲವೆ ಪುಸ್ತಕಗಳಲ್ಲಿರಿಸಿದರೆ ಅವು ಹುಳಗಳನ್ನು ದೂರ ಇರಿಸುತ್ತವೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...