ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?

ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?

ಉತ್ತರ ಕರ್ನಾಟಕದ ಪ್ರತಿ ಊರಿನಲ್ಲಿಯೂ ಗುಡಿ, ಕಟ್ಟೆ, ರಸ್ತೆ ಎಲ್ಲೆಂದರಲ್ಲಿ ಬೇವಿನ ಮರವನ್ನು ಬೆಳೆಸುತ್ತಾರೆ. ಇದು ಅಲ್ಲಿಯ ಸೆಕೆಯುಳ್ಳ ಕಾಲದ ಜನಕ್ಕೆ ತಂಪೆರೆಯುವ ಮರವೂ ಹೌದು. ಜನಪದ ಕವಿಕೂಡ “ಬ್ಯಾಸಗಿ ದಿವಸಕ ಬೇವಿನ ಮರತಂಪ, ಭೀಮಾರತಿ ಎಂಬ ಹೊಳೆತಂಪ” ಎಂದು ಪದವನ್ನೇ ಕಟ್ಟಿದ್ದಾನೆ. ಈ ಗಿಡದಿಂದಾಗುವ ಅಮೂಲ್ಯ ಉಪಯೋಗಗಳನ್ನು ಕೂಡ ಉತರ ಕರ್ನಾಟಕದ ಜನಕ್ಕೆ ಗೊತ್ತಿದೆ. ಬಾಣಂತಿಯರಿಗೆ ಇದನು ಬಳಸುತ್ತಾರೆ. ಇದರ ವಾಸನೆ ಬಡಿದರೆ ಕ್ರಿಮಿಕೀಟಗಳು ಹತ್ತಿರಬರುವುದಿಲ್ಲ, ಜತೆಗೆ ಈ ಮರವನ್ನು ಕಡಿದಾಗ ಮನೆಗೆ ತೊಲೆ ಸೌದೆಗಳಿಗೆ ಬಳೆಸಬಹುಡು. ಇದರಬೀಜಗಳು ಹಣ್ಣಾಗಿ ಉದುರಿದಾಗ ಸಂಗ್ರಹಿಸಿ ಇದರಿಂದ ಬೇವಿನ ಎಣ್ಣೆಯನ್ನು ತಯಾರಿಸಿ ಔಷಧಿ ಮಾಡುತ್ತಾರೆ. ಈ ಕಾರಣವಾಗಿ ಬೇವಿನಮರವನ್ನು ಸಹಜವಾಗಿ ಮನೆಮುಂದೆ ಬೆಳೆಸಲಾಗುತ್ತದೆ. ಇದರಿಂದ ಬೀಸಿಬರುವ ತಂಗಾಳಿ ಇನ್‌ಫ್ಲೂಯಾಂಜಾ ದಂತಹ ಸಾಂಕ್ರಾಮಿಕ ಜಾಡ್ಯವನ್ನು ಹೋಗಲಾಡಿಸುತ್ತದೆ. ಶೀತ ನೆಗಡಿಗೆ ಇದರ ವಾಸನೆ ಹೇಳಿ ಮಾಡಿಸಿದ ಔಷಧಿ. ಇದರ ಎಲೆಗಳ ಹೊಗೆಯನ್ನು ಮೂಗಿಗೆ ಹಿಡಿದರೆ ಸೀತದಂತಹ ಕಾಯಿಲೆಗಳು ದೂರವಾಗುತ್ತವೆ. ಇದರ ಕಡ್ಡಿಯನ್ನು ಬ್ರೆಶ್‌ನಂತೆ ಮಾಡಿ ಪ್ರತಿದಿನ ಹಲ್ಲುಗಳನ್ನು ಉಜ್ಜುತ್ತಾ ಬಂದರೆ ವಸಡುಗಟ್ಟಿಯಾಗುವುದಲ್ಲದೇ ದಂತಕ್ಷಯ ಮುಂತಾದ ಬಾಯಿ ಹುಣ್ಣುಗಳು ವಾಸಿಯಾಗುತ್ತವೆ. ಹಲ್ಲುಗಳೂ ಸಹ ಹೊಳೆಯುತ್ತವೆ.

ಬೇವಿನ ಎಲೆ, ಕಾಯಿ, ಕಡ್ಡಿ ಎಲ್ಲವೂ ಔಷಧಿ ಗುಣವನ್ನು ಹೊಂದಿರುತ್ತದೆ. ಬೇವಿನ ಎಲೆಗಳನ್ನು ಆಹಾರಧಾನ್ಯಗಳಲ್ಲಿ ಇಲ್ಲವೆ ಪುಸ್ತಕಗಳಲ್ಲಿರಿಸಿದರೆ ಅವು ಹುಳಗಳನ್ನು ದೂರ ಇರಿಸುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Bride Burning
Next post ಮುಗಿಯಿತೆ ನಾಟಕವು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys