ಮುಗಿಯಿತೆ ನಾಟಕವು

ಮುಗಿಯಿತೆ ನಾಟಕವು
ಪರದೆ ಕೆಳಕ್ಕಿಳಿಯಿತೆ
ಪ್ರೇಕ್ಷಕರೆದ್ದು ಹೋಗಿಯಾಯಿತೆ
ನೇಪಥ್ಯ ಬರಿದಾಯಿತೆ

ವೇಷ ಕಳಚಬೇಕು ನಟರು
ಮುಖವ ತೊಳೆಯಬೇಕು ಅವರು
ತೊಳೆದರೂನು ಬಣ್ಣವು
ಮೋರೆಯಲ್ಲಿ ಇನ್ನುವು

ಇನ್ನೂ ಏನೊ ಉಳಿದಂತೆ
ಕತೆಯಿನ್ನೂ ಮುಗಿಯದಂತೆ
ಮಾತು ಅರ್‍ಧವು
ಮಾತಿನರ್‍ಥ ಅರ್ಧವು

ಯಾವುದು ತಾನೆ ನಾಟಕ
ಯಾವುದು ತಾನೆ ಜೀವನ
ಯಾವುದರಲಿ ಯಾವುದೆಂದು
ತಿಳಿಯದಂತು ಗೊಂದಲ

ಕೊನೆಯಾದರೂ ಕೊನೆಯಿಲ್ಲ
ಅಂಕ ದೃಶ್ಯ ಮರೆತಿತಲ್ಲ
ಮನಸು ಆಗಲೇ
ರಂಗ ಮಧ್ಯದಲ್ಲೇ

ಬಣ್ಣ ಬದಲಾಯಿಸಿ
ವೇಷ ಬದಲಾಯಿಸಿ
ಸತ್ತವನೆದ್ದು ಬರಬಹುದೆ
ಮಿಂಚುವನೆ ಇಲ್ಲ ಕುಸಿಯುವನೆ

ಅಂಕ ಬದಲಾಗುವುದು
ನಾಟಕ ಬದಲಾಗುವುದು
ನೋಡುವ ಜನರು ಬದಲಾಗುವರು
ಬದಲಾಗದಿರುವರೇನು ಆಡುವವರೂ ಆಡಿಸುವವರೂ

ಇದ್ದರದಕೆ ದೃಶ್ಯವೆಂದು
ಇಲ್ಲದಿದ್ದರೆ ಅದೃಶ್ಯವೆಂದು
ನಟರ ನಟ ನಟರಾಜನೆ
ದಿಗ್ದರ್‍ಶಕ ನೀ ಸದಾಶಿವ ಸದಾ ಕಣ್ಮರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?
Next post ಸತ್ಯದ ಸಮೀಪ ಬಾ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys