ದೇಹ ಆತ್ಮಗಳ ಗೂಢತೆ

ಆಸೆಗಳಿಗೆ ದಾಸನಾಗದಿರು ಮನುಜ
ಕಷ್ಟಗಳಿಗೆ ನಿತ್ಯವೂ ಕೈಚಾಚು
ನರದೇಹವು ನಿನ್ನದು ಶಾಶ್ವತವಲ್ಲವು
ಮೋಹ ಸಂದೇಹಗಳ ಮರೆಮಾಚು

ಆತ್ಮವು ದೇಹದ ಆಲಯದಲ್ಲಿದ್ದರೂ
ದೇಹದಾಚೆಗೂ ಅದು ಪಸರಿಸಿದೆ
ಕಾಲಕ್ಕೆ ತಕ್ಕಂತೆ ದೇಹ ಬದಲಿಸಿದರೂ
ಆತ್ಮ ಕಾಲಾತೀತವಾಗಿ ಬೆಳಗಿದೆ

ಇಂದ್ರಿಯ ಸುಖ ಭೋಗಗಳೇ ನಿಷ್ಠೆ
ಇದು ದೇಹದ ನಿತ್ಯ ಪರಿಪಾಠ
ಎಷ್ಟೋ ಜನುಮಗಳ ವರೆಗೂ ಹೀಗೆ
ಆತ್ಮಕ್ಕೆ ದಾರಿತಪ್ಪಿಸಲು ಆಗಿದೆ ಕಾಟ

ಆತ್ಮೋದ್ಧಾರಕ್ಕೆ ಶರೀರವಾಗಲಿ ಇಂಬು
ಮುಕ್ತಿ ಮಾರ್‍ಗಕ್ಕೆ ಆಗಲಿ ಸೋಪಾನ
ದೇಹ ಆತ್ಮದೊಂದಿಗೆ ಪಾದವಿರಿಸಲಿ
ಮಾಣಿಕ್ಯ ವಿಠಲನೆ ಶಾಶ್ವತ ತಾಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೪
Next post ಯೋಧ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…