ದೇಹ ಆತ್ಮಗಳ ಗೂಢತೆ

ಆಸೆಗಳಿಗೆ ದಾಸನಾಗದಿರು ಮನುಜ
ಕಷ್ಟಗಳಿಗೆ ನಿತ್ಯವೂ ಕೈಚಾಚು
ನರದೇಹವು ನಿನ್ನದು ಶಾಶ್ವತವಲ್ಲವು
ಮೋಹ ಸಂದೇಹಗಳ ಮರೆಮಾಚು

ಆತ್ಮವು ದೇಹದ ಆಲಯದಲ್ಲಿದ್ದರೂ
ದೇಹದಾಚೆಗೂ ಅದು ಪಸರಿಸಿದೆ
ಕಾಲಕ್ಕೆ ತಕ್ಕಂತೆ ದೇಹ ಬದಲಿಸಿದರೂ
ಆತ್ಮ ಕಾಲಾತೀತವಾಗಿ ಬೆಳಗಿದೆ

ಇಂದ್ರಿಯ ಸುಖ ಭೋಗಗಳೇ ನಿಷ್ಠೆ
ಇದು ದೇಹದ ನಿತ್ಯ ಪರಿಪಾಠ
ಎಷ್ಟೋ ಜನುಮಗಳ ವರೆಗೂ ಹೀಗೆ
ಆತ್ಮಕ್ಕೆ ದಾರಿತಪ್ಪಿಸಲು ಆಗಿದೆ ಕಾಟ

ಆತ್ಮೋದ್ಧಾರಕ್ಕೆ ಶರೀರವಾಗಲಿ ಇಂಬು
ಮುಕ್ತಿ ಮಾರ್‍ಗಕ್ಕೆ ಆಗಲಿ ಸೋಪಾನ
ದೇಹ ಆತ್ಮದೊಂದಿಗೆ ಪಾದವಿರಿಸಲಿ
ಮಾಣಿಕ್ಯ ವಿಠಲನೆ ಶಾಶ್ವತ ತಾಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೪
Next post ಯೋಧ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…