ನಿಮೀಲನ

ಮುಟ್ಟುವುದೆಂದರೆ ಮುಟ್ಟದಿರುವುದು
ಮುಟ್ಟದಿರುವುದೆಂದರೂ ಮುಟ್ಟುವುದು
ಕಣ್ಣಾಗಿ ಕಾದು ಕೂತ
ಮೈಮರೆವಿನ ಎಚ್ಚರದಲಿ
ಎವೆಗಳೊಂದಾಗುವ ಚಡಪಡಿಕೆ
ಮುಟ್ಟಿತಾಗುವ ಮೈಮರೆವು.

ಒಂದಾಗಿಯೂ ಬೇರಾದ
ಎರಡಾಗಿಯೂ ಒಂದಾದ ಕಣ್ಣೆವೆ
ಮೈ ಮರೆವಿನಲ್ಲೂ
ಮೊಗ್ಗುಗಳರಳಿ ಪಸರಿಸಿದ ಗಂಧ
ಒಳಗೇ ಒಳಗಾಗುವ
ಕಾಯದಚ್ಚರಿಗೆ ಕೈ ಮುಗಿದು
ಒಂದು ಇನ್ನೊಂದರೊಳಗಿದ್ದು
ತುಂಬಿಕೊಳುವ ಅಲೆ ಅಲಲೆ
ವಾಚಾಳಿ ಮನಸು
ದಿಟ್ಟಿ ತೆರೆದಿಟ್ಟೇ ನಿದ್ದೆಗಿಳಿಯುತ್ತದೆ
ರೆಪ್ಪೆಯಲುಗುವಿಕೆಗೂ ರೋಮಾಂಚನ.

ನಿಶೆಯೊತ್ತಾಯದ ಕಾಣ್ಬಾರಕ್ಕೂ
ತೂಕಡಿಸದ ಮನಸು
ಮೈಯೆಲ್ಲಾ ಕಣ್ಣಾದ
ಹೊರ ಎಚ್ಚರದಲ್ಲೂ
ಒಳಗಿನ ಮೈಮರೆವು
ಮುಟ್ಟುವುದೆಂದರೆ ಒಂದು ಎಚ್ಚರ
ಮೈಮರೆವುದೆಂದರೂ ಇನ್ನೊಂದು ಎಚ್ಚರ.

ನಿಮೀಲನಕ್ಕೆ ಒಳಗಿನೆಚ್ಚರ
ಹೊರಗಿನ ಮೈಮರೆವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಷೆ ಮತ್ತು ಬದಲಾವಣೆ
Next post ಮನ ಮಂಥನ ಸಿರಿ – ೮

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…