ನಿಮೀಲನ

ಮುಟ್ಟುವುದೆಂದರೆ ಮುಟ್ಟದಿರುವುದು
ಮುಟ್ಟದಿರುವುದೆಂದರೂ ಮುಟ್ಟುವುದು
ಕಣ್ಣಾಗಿ ಕಾದು ಕೂತ
ಮೈಮರೆವಿನ ಎಚ್ಚರದಲಿ
ಎವೆಗಳೊಂದಾಗುವ ಚಡಪಡಿಕೆ
ಮುಟ್ಟಿತಾಗುವ ಮೈಮರೆವು.

ಒಂದಾಗಿಯೂ ಬೇರಾದ
ಎರಡಾಗಿಯೂ ಒಂದಾದ ಕಣ್ಣೆವೆ
ಮೈ ಮರೆವಿನಲ್ಲೂ
ಮೊಗ್ಗುಗಳರಳಿ ಪಸರಿಸಿದ ಗಂಧ
ಒಳಗೇ ಒಳಗಾಗುವ
ಕಾಯದಚ್ಚರಿಗೆ ಕೈ ಮುಗಿದು
ಒಂದು ಇನ್ನೊಂದರೊಳಗಿದ್ದು
ತುಂಬಿಕೊಳುವ ಅಲೆ ಅಲಲೆ
ವಾಚಾಳಿ ಮನಸು
ದಿಟ್ಟಿ ತೆರೆದಿಟ್ಟೇ ನಿದ್ದೆಗಿಳಿಯುತ್ತದೆ
ರೆಪ್ಪೆಯಲುಗುವಿಕೆಗೂ ರೋಮಾಂಚನ.

ನಿಶೆಯೊತ್ತಾಯದ ಕಾಣ್ಬಾರಕ್ಕೂ
ತೂಕಡಿಸದ ಮನಸು
ಮೈಯೆಲ್ಲಾ ಕಣ್ಣಾದ
ಹೊರ ಎಚ್ಚರದಲ್ಲೂ
ಒಳಗಿನ ಮೈಮರೆವು
ಮುಟ್ಟುವುದೆಂದರೆ ಒಂದು ಎಚ್ಚರ
ಮೈಮರೆವುದೆಂದರೂ ಇನ್ನೊಂದು ಎಚ್ಚರ.

ನಿಮೀಲನಕ್ಕೆ ಒಳಗಿನೆಚ್ಚರ
ಹೊರಗಿನ ಮೈಮರೆವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಷೆ ಮತ್ತು ಬದಲಾವಣೆ
Next post ಮನ ಮಂಥನ ಸಿರಿ – ೮

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys