Home / ಕವನ / ಕವಿತೆ / ಕಾರಂತರ ಬರಹಗಳು

ಕಾರಂತರ ಬರಹಗಳು

`ಹುಚ್ಚು ಮನದ ಹತ್ತು ಮುಖ’ಗಳ
ದರುಶನ ಪಡೆದು
‘ಚಿಗುರಿದ ಕನಸು’ಗಳ ಜತೆಗೆ
‘ಮೂಕಜ್ಜಿಯ ಕನಸು’ಗಳ ಕಂಡು
‘ಸರಸಮ್ಮನ ಸಮಾಧಿ’ ಕಟ್ಟಿ
‘ಭೂತ’, ‘ದೇವದೂತ’ರುಗಳೊಡನೆ ಓಡಾಡಿ
‘ಸಂನ್ಯಾಸಿಯ ಬದುಕು’ ಅಳೆದು
‘ಮೈಮನದ ಸುಳಿಯಲ್ಲಿ’ ಸೂಳೆಯ ಕಂಡು
‘ಚೋಮನ ದುಡಿ’ಯಲ್ಲಿ ದಲಿತರ ನೋವ ಮಿಡಿದು
‘ಜಾರುವ ದಾರಿಯಲ್ಲಿ’ ‘ಹೆತ್ತಳಾತಾಯಿ’
‘ಕುಡಿಯರ ಕೂಸು’ ಕಂಡ ‘ನಿರ್ಭಾಗ್ಯ ಜನ್ಮ’ದ ‘ಒಂಟಿದನಿ’
‘ಗೊಂಡಾರಣ್ಯ’ದಲಿ ಮೊಳಗಿಸಿ
‘ಬೆಟ್ಟದ ಜೀವ’ದ ಔದಾರ್ಯದ ಉರುಳಲ್ಲಿ’
‘ಕನ್ಯಾಬಲಿ’ಕೊಟ್ಟು ‘ನಂಬಿದವರ ನಾಕ ನರಕ’ವೆನಿಸಿ
‘ಶನೀಶ್ವರನ ನೆರಳಲ್ಲಿ ‘ಜಗದೋದ್ಧಾರನಾ’ ಆಡಿಸಿ
‘ಮುಗಿದ ಯುದ್ಧ’ದಲ್ಲಿ ದಣಿವಾರಿಸಿ
‘ಮೊಗ ಪಡೆದ ಮನ’ದಲ್ಲಿ ವಿರಮಿಸಿ
‘ಭತ್ತದ ತೊರೆ’ಯಾಗಿ, ‘ಸ್ವಪ್ನದ ಹೊಳೆ’ಯಾಗಿ
‘ಇನ್ನೊಂದೇ ದಾರಿ’ ತೋರಿ
‘ಅದೇ ಊರು ಅದೇ ಮರ’ದ ನೆರಳಲ್ಲಿ ಬದುಕಿ
‘ಆಳ ನಿರಾಳ’ದಲ್ಲಿ ‘ನಾವು ಕಟ್ಟಿದ ಸ್ವರ್ಗ’ ಕಂಡು
‘ಇದ್ದರೂ ಚಿಂತೆ’ ಎನ್ನುತ
‘ಅಳಿದ ಮೇಲೆ’ ಎಲ್ಲವೂ ನಿರಾಳವೆನುತ
‘ಮರಳಿ ಮಣ್ಣಿಗೆ’ ಸೇರಿದಿರಿ.

ನಿಮ್ಮದೇ ಮಾತಲ್ಲಿ
ಕವನ ಕಟ್ಟಿರುವೆ ನಾನು
ತಪ್ಪಿದ್ದಲ್ಲಿ ಕ್ಷಮಿಸಿ, ಸಣ್ಣವಳು ನಾನು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...