Home / ಕವನ / ಕವಿತೆ / ಕಾರಂತರ ಬರಹಗಳು

ಕಾರಂತರ ಬರಹಗಳು

`ಹುಚ್ಚು ಮನದ ಹತ್ತು ಮುಖ’ಗಳ
ದರುಶನ ಪಡೆದು
‘ಚಿಗುರಿದ ಕನಸು’ಗಳ ಜತೆಗೆ
‘ಮೂಕಜ್ಜಿಯ ಕನಸು’ಗಳ ಕಂಡು
‘ಸರಸಮ್ಮನ ಸಮಾಧಿ’ ಕಟ್ಟಿ
‘ಭೂತ’, ‘ದೇವದೂತ’ರುಗಳೊಡನೆ ಓಡಾಡಿ
‘ಸಂನ್ಯಾಸಿಯ ಬದುಕು’ ಅಳೆದು
‘ಮೈಮನದ ಸುಳಿಯಲ್ಲಿ’ ಸೂಳೆಯ ಕಂಡು
‘ಚೋಮನ ದುಡಿ’ಯಲ್ಲಿ ದಲಿತರ ನೋವ ಮಿಡಿದು
‘ಜಾರುವ ದಾರಿಯಲ್ಲಿ’ ‘ಹೆತ್ತಳಾತಾಯಿ’
‘ಕುಡಿಯರ ಕೂಸು’ ಕಂಡ ‘ನಿರ್ಭಾಗ್ಯ ಜನ್ಮ’ದ ‘ಒಂಟಿದನಿ’
‘ಗೊಂಡಾರಣ್ಯ’ದಲಿ ಮೊಳಗಿಸಿ
‘ಬೆಟ್ಟದ ಜೀವ’ದ ಔದಾರ್ಯದ ಉರುಳಲ್ಲಿ’
‘ಕನ್ಯಾಬಲಿ’ಕೊಟ್ಟು ‘ನಂಬಿದವರ ನಾಕ ನರಕ’ವೆನಿಸಿ
‘ಶನೀಶ್ವರನ ನೆರಳಲ್ಲಿ ‘ಜಗದೋದ್ಧಾರನಾ’ ಆಡಿಸಿ
‘ಮುಗಿದ ಯುದ್ಧ’ದಲ್ಲಿ ದಣಿವಾರಿಸಿ
‘ಮೊಗ ಪಡೆದ ಮನ’ದಲ್ಲಿ ವಿರಮಿಸಿ
‘ಭತ್ತದ ತೊರೆ’ಯಾಗಿ, ‘ಸ್ವಪ್ನದ ಹೊಳೆ’ಯಾಗಿ
‘ಇನ್ನೊಂದೇ ದಾರಿ’ ತೋರಿ
‘ಅದೇ ಊರು ಅದೇ ಮರ’ದ ನೆರಳಲ್ಲಿ ಬದುಕಿ
‘ಆಳ ನಿರಾಳ’ದಲ್ಲಿ ‘ನಾವು ಕಟ್ಟಿದ ಸ್ವರ್ಗ’ ಕಂಡು
‘ಇದ್ದರೂ ಚಿಂತೆ’ ಎನ್ನುತ
‘ಅಳಿದ ಮೇಲೆ’ ಎಲ್ಲವೂ ನಿರಾಳವೆನುತ
‘ಮರಳಿ ಮಣ್ಣಿಗೆ’ ಸೇರಿದಿರಿ.

ನಿಮ್ಮದೇ ಮಾತಲ್ಲಿ
ಕವನ ಕಟ್ಟಿರುವೆ ನಾನು
ತಪ್ಪಿದ್ದಲ್ಲಿ ಕ್ಷಮಿಸಿ, ಸಣ್ಣವಳು ನಾನು.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...