ಕಾರಂತರ ಬರಹಗಳು

`ಹುಚ್ಚು ಮನದ ಹತ್ತು ಮುಖ’ಗಳ
ದರುಶನ ಪಡೆದು
‘ಚಿಗುರಿದ ಕನಸು’ಗಳ ಜತೆಗೆ
‘ಮೂಕಜ್ಜಿಯ ಕನಸು’ಗಳ ಕಂಡು
‘ಸರಸಮ್ಮನ ಸಮಾಧಿ’ ಕಟ್ಟಿ
‘ಭೂತ’, ‘ದೇವದೂತ’ರುಗಳೊಡನೆ ಓಡಾಡಿ
‘ಸಂನ್ಯಾಸಿಯ ಬದುಕು’ ಅಳೆದು
‘ಮೈಮನದ ಸುಳಿಯಲ್ಲಿ’ ಸೂಳೆಯ ಕಂಡು
‘ಚೋಮನ ದುಡಿ’ಯಲ್ಲಿ ದಲಿತರ ನೋವ ಮಿಡಿದು
‘ಜಾರುವ ದಾರಿಯಲ್ಲಿ’ ‘ಹೆತ್ತಳಾತಾಯಿ’
‘ಕುಡಿಯರ ಕೂಸು’ ಕಂಡ ‘ನಿರ್ಭಾಗ್ಯ ಜನ್ಮ’ದ ‘ಒಂಟಿದನಿ’
‘ಗೊಂಡಾರಣ್ಯ’ದಲಿ ಮೊಳಗಿಸಿ
‘ಬೆಟ್ಟದ ಜೀವ’ದ ಔದಾರ್ಯದ ಉರುಳಲ್ಲಿ’
‘ಕನ್ಯಾಬಲಿ’ಕೊಟ್ಟು ‘ನಂಬಿದವರ ನಾಕ ನರಕ’ವೆನಿಸಿ
‘ಶನೀಶ್ವರನ ನೆರಳಲ್ಲಿ ‘ಜಗದೋದ್ಧಾರನಾ’ ಆಡಿಸಿ
‘ಮುಗಿದ ಯುದ್ಧ’ದಲ್ಲಿ ದಣಿವಾರಿಸಿ
‘ಮೊಗ ಪಡೆದ ಮನ’ದಲ್ಲಿ ವಿರಮಿಸಿ
‘ಭತ್ತದ ತೊರೆ’ಯಾಗಿ, ‘ಸ್ವಪ್ನದ ಹೊಳೆ’ಯಾಗಿ
‘ಇನ್ನೊಂದೇ ದಾರಿ’ ತೋರಿ
‘ಅದೇ ಊರು ಅದೇ ಮರ’ದ ನೆರಳಲ್ಲಿ ಬದುಕಿ
‘ಆಳ ನಿರಾಳ’ದಲ್ಲಿ ‘ನಾವು ಕಟ್ಟಿದ ಸ್ವರ್ಗ’ ಕಂಡು
‘ಇದ್ದರೂ ಚಿಂತೆ’ ಎನ್ನುತ
‘ಅಳಿದ ಮೇಲೆ’ ಎಲ್ಲವೂ ನಿರಾಳವೆನುತ
‘ಮರಳಿ ಮಣ್ಣಿಗೆ’ ಸೇರಿದಿರಿ.

ನಿಮ್ಮದೇ ಮಾತಲ್ಲಿ
ಕವನ ಕಟ್ಟಿರುವೆ ನಾನು
ತಪ್ಪಿದ್ದಲ್ಲಿ ಕ್ಷಮಿಸಿ, ಸಣ್ಣವಳು ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ
Next post ಯುಗಾದಿ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys