Home / ಕವನ / ಕವಿತೆ / ಬೆಳೆಯಗೊಡಲಿಲ್ಲವೇನಮ್ಮ?

ಬೆಳೆಯಗೊಡಲಿಲ್ಲವೇನಮ್ಮ?

ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ?
ಬೆಳೆಯ ಗೊಡಲಿಲ್ಲವೇ ಅವರು ನಮ್ಮ-
ನಾವಿಂದು ಇರುವ ಹಾಗೆ?

ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು
ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳಯಲಿಲ್ಲವೇ ಅವಳು ಕಟ್ಟಿಕೊಂಡವನ ಬಿಟ್ಟು
ಉಳ್ಳಾಲದ ಉಕ್ಕಿನ ರಾಣಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಕಟ್ಟಿಕೊಂಡವನ ತೊರೆದು
ಅಕ್ಕ ಮಹಾದೇವಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಇಂದಿರಾ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಗಂಡಸರಲ್ಲಿ ಗಂಡಸಾಗಿ
ಯುಗಕ್ಕೊಬ್ಬಳೇ ರಾಜಕಾರಣಿಯಾಗಿ
ನಮಗಿಂತ ಭಿನ್ನವಾಗಿ?

ಬೆಳೆಯಲಿಲ್ಲವೇ ಇವರೆಲ್ಲ
ನಮ್ಮ ಹಾಗಿದ್ದೂ ನಮಗಿಂತ ಭಿನ್ನವಾಗಿ
ಹೆಣ್ಣಾಗಿದ್ದೂ ಗಂಡಿನಂತಾಗಿ
ಚರಿತ್ರೆಯ ಪುಟಗಳಲ್ಲಿ ದಾಖಲಾಗಿ?

ಮತ್ತೇಕೆ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ,
ಬೆಳೆಯ ಗೊಡಲಿಲ್ಲವೇ ಅವರು, ನಮ್
ನಾವಿಂದು ಇರುವಹಾಗೆ?

ಗರ್ಭದೊಳಗೆ ಆಗ ತಾನೇ ಮೊಳಕೆಯೊಡೆದ
ಕುಡಿ ಹೆಣ್ಣೆಂದು ಭ್ರೂಣ ಹತ್ಯೆಗೆ ಒಪ್ಪುವವರು ನಾವು;
ಹೆತ್ತ ಮಗು ಹೆಣ್ಣೆಂದು ಜರಿಯುವವರು ನಾವು;
ಬಂದ ಹೆಣ್ಣು ವರದಕ್ಷಿಣೆ ತರಲಿಲ್ಲವೆಂದು
ಸುಟ್ಟು ಹಾಕಲು ಸಹಕರಿಸುವವರು ನಾವು;
ಒಂಟಿ ಹೆಣ್ಣು ತನಗಾಗಿ ಬದುಕುತ್ತಿರುವಾಗ
ಅವಳ ಚಾರಿತ್ರ್ಯ ವಧೆ ಮಾಡುವವರು ನಾವು;
ಜಾಹೀರಾತಿಗೆಂದು ಮೈ ಚಳಿ ಬಿಟ್ಟು
ಎಲ್ಲ ತೆರೆದು ಬರಿದಾಗಿ ನಿಲ್ಲುವವರು ನಾವು;
ಬೆಳೆಯ ಗೊಡಲಿಲ್ಲವೇ ಅವರು, ನಮ್ಮ
ನಮಗೆ ಬೇಕೆನಿಸಿದ ಹಾಗೆ?

ಈಗ ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ
ಬೆಳೆಯಗೊಡಲಿಲ್ಲವೇ ಅವರು, ನಮ್ಮ-
ನಾವಿಂದು ಇರುವ ಹಾಗೆ?

ನಾವೇಕೆ ನಮ್ಮತನವ ಕಾಯ್ದು ಕೊಳ್ಳಲಿಲ್ಲ?
ನಾವೇಕೆ ನಮ್ಮ ಶೋಷಿಸುವವರ ಪ್ರತಿಭಟಿಸಲಿಲ್ಲ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...