Home / ಕವನ / ಕವಿತೆ / ಬೆಳೆಯಗೊಡಲಿಲ್ಲವೇನಮ್ಮ?

ಬೆಳೆಯಗೊಡಲಿಲ್ಲವೇನಮ್ಮ?

ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ?
ಬೆಳೆಯ ಗೊಡಲಿಲ್ಲವೇ ಅವರು ನಮ್ಮ-
ನಾವಿಂದು ಇರುವ ಹಾಗೆ?

ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು
ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳಯಲಿಲ್ಲವೇ ಅವಳು ಕಟ್ಟಿಕೊಂಡವನ ಬಿಟ್ಟು
ಉಳ್ಳಾಲದ ಉಕ್ಕಿನ ರಾಣಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಕಟ್ಟಿಕೊಂಡವನ ತೊರೆದು
ಅಕ್ಕ ಮಹಾದೇವಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಇಂದಿರಾ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಗಂಡಸರಲ್ಲಿ ಗಂಡಸಾಗಿ
ಯುಗಕ್ಕೊಬ್ಬಳೇ ರಾಜಕಾರಣಿಯಾಗಿ
ನಮಗಿಂತ ಭಿನ್ನವಾಗಿ?

ಬೆಳೆಯಲಿಲ್ಲವೇ ಇವರೆಲ್ಲ
ನಮ್ಮ ಹಾಗಿದ್ದೂ ನಮಗಿಂತ ಭಿನ್ನವಾಗಿ
ಹೆಣ್ಣಾಗಿದ್ದೂ ಗಂಡಿನಂತಾಗಿ
ಚರಿತ್ರೆಯ ಪುಟಗಳಲ್ಲಿ ದಾಖಲಾಗಿ?

ಮತ್ತೇಕೆ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ,
ಬೆಳೆಯ ಗೊಡಲಿಲ್ಲವೇ ಅವರು, ನಮ್
ನಾವಿಂದು ಇರುವಹಾಗೆ?

ಗರ್ಭದೊಳಗೆ ಆಗ ತಾನೇ ಮೊಳಕೆಯೊಡೆದ
ಕುಡಿ ಹೆಣ್ಣೆಂದು ಭ್ರೂಣ ಹತ್ಯೆಗೆ ಒಪ್ಪುವವರು ನಾವು;
ಹೆತ್ತ ಮಗು ಹೆಣ್ಣೆಂದು ಜರಿಯುವವರು ನಾವು;
ಬಂದ ಹೆಣ್ಣು ವರದಕ್ಷಿಣೆ ತರಲಿಲ್ಲವೆಂದು
ಸುಟ್ಟು ಹಾಕಲು ಸಹಕರಿಸುವವರು ನಾವು;
ಒಂಟಿ ಹೆಣ್ಣು ತನಗಾಗಿ ಬದುಕುತ್ತಿರುವಾಗ
ಅವಳ ಚಾರಿತ್ರ್ಯ ವಧೆ ಮಾಡುವವರು ನಾವು;
ಜಾಹೀರಾತಿಗೆಂದು ಮೈ ಚಳಿ ಬಿಟ್ಟು
ಎಲ್ಲ ತೆರೆದು ಬರಿದಾಗಿ ನಿಲ್ಲುವವರು ನಾವು;
ಬೆಳೆಯ ಗೊಡಲಿಲ್ಲವೇ ಅವರು, ನಮ್ಮ
ನಮಗೆ ಬೇಕೆನಿಸಿದ ಹಾಗೆ?

ಈಗ ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ
ಬೆಳೆಯಗೊಡಲಿಲ್ಲವೇ ಅವರು, ನಮ್ಮ-
ನಾವಿಂದು ಇರುವ ಹಾಗೆ?

ನಾವೇಕೆ ನಮ್ಮತನವ ಕಾಯ್ದು ಕೊಳ್ಳಲಿಲ್ಲ?
ನಾವೇಕೆ ನಮ್ಮ ಶೋಷಿಸುವವರ ಪ್ರತಿಭಟಿಸಲಿಲ್ಲ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ