Home / ಕವನ / ಕವಿತೆ / ಭಯೋತ್ಪಾದಕರು

ಭಯೋತ್ಪಾದಕರು

ಯಾರಿವರು ಭಯೋತ್ಪಾದಕರು
ಎಲ್ಲಿಂದ ಬಂದವರು?
ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು?
ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ?
ಇಲ್ಲವಾದರೆ ಹೇಗವರು ಒಂದೇ ರೀತಿ?
ಹೃದಯ ಮನಸ್ಸು ಇಲ್ಲದವರು
ಮತಾಂಧರಾಗಿ ಮಾನವೀಯತೆಯ ಮರೆತವರು.
ಭಯೋತ್ಪಾದಕರು!
ಎಲ್ಲೆಲ್ಲೂ ಭಯೋತ್ಪಾದಕರು
ಬೀದಿ ಬೀದಿಗಳಲ್ಲಿ, ನಗರನಗರಗಳಲ್ಲಿ
ಬಸ್ಸಲ್ಲಿ, ರೈಲಲ್ಲಿ, ವಿಮಾನದಲ್ಲಿ
ಎಲ್ಲೆಂದರಲ್ಲಿ ರಕ್ತಪಿಪಾಸುಗಳು,
ಆತ್ಮಾಹುತಿಗೆ ಸಿದ್ಧರಾದವರು.
ಕಾಶ್ಮೀರದಲ್ಲಿ ಮಾರಣಹೋಮ ನಡೆದಾಗ,
ಮುಂಬಯಿಯಲ್ಲಿ ಸರಣಿ ಬಾಂಬುಗಳು ಸಿಡಿದಾಗ
ನೇಪಾಲದಲ್ಲಿ ವಿಮಾನ ಅಪಹರಣವಾದಾಗ
ತಾಲಿಬಾನ್ ನೆಲದಲ್ಲಿ ಪ್ರಯಾಣಿಕರ ಪಣಕ್ಕೊಡ್ಡಿದಾಗ,
ಜೈಲಲ್ಲಿದ್ದ ಭಯೋತ್ಪಾದಕರ ಬಿಡಬೇಕಾದಾಗ
ಯಾರನ್ನೂ ಧೃತಿಗೆಡಿಸಲಿಲ್ಲ, ಅವರ ಇರವು.
ಜಗತ್ತು ಕಣ್ಣು ಮುಚ್ಚಿತ್ತು.
ಕಂಬಿಯ ಹಿಂದಿದ್ದ ಭಯೋತ್ಪಾದಕರು ಲೀನವಾದರು
ವಿಶ್ವ ಜನಸ್ತೋಮದಲಿ ಜಯಭೇರಿ ಹೊಡೆಯುತ-
ವಿದ್ವಂಸಕ ಕೃತ್ಯಗಳ ಮೆರೆಯಿಸುತ!
ಮುಂದೆಯೊಂದು ದಿನ
ಬೆಳೆಸಿದವರದ್ದೇ ಕೈಕಚ್ಚಿ ಅವರದೆಗೇ ಗುಂಡಿಟ್ಟಾಗ
ಉರುಳಿದವು ಗಗನ ಚುಂಬಿಗಳು
ಚೆಲ್ಲಾಡಿದವು ಜೀವ ರಾಶಿಗಳು.
ಪ್ರತಿಭಾವಂತರನೇಕರು ಆದರಲ್ಲಿ ಜೀವಂತ ಸಮಾಧಿ!
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ಏನಾಗಿದೆ ಮನುಷ್ಯರಾಗಿ ಹುಟ್ಟಿದವರಿಗೆ
ಮಾನವೀಯತೆಯ ಮರೆತು ರಾಕ್ಷಸರಾಗಿ
ಬದಲಾದರು ಹೇಗೆ?
ಹುಟ್ಟುವಾಗ ಜಾತಿ ಇಲ್ಲ ಮತ ಇಲ್ಲ
ಬೆಳೆದಂತೆ ಮತಾಂಧತೆ
ಒಬ್ಬರನ್ನೊಬ್ಬರು ಕೊಚ್ಚಿಹಾಕುವಷ್ಟು,
ಸುಟ್ಟುಬಿಡುವಷ್ಟು,
ಪುಡಿಪುಡಿಮಾಡಿ ಬಿಸಾಕುವಷ್ಟು ಕೆಟ್ಟ ದ್ವೇಷ.
ಇದಕ್ಕೆಲ್ಲಿದೆ ಕೊನೆ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...