Home / ಕವನ / ಕವಿತೆ / ಭಯೋತ್ಪಾದಕರು

ಭಯೋತ್ಪಾದಕರು

ಯಾರಿವರು ಭಯೋತ್ಪಾದಕರು
ಎಲ್ಲಿಂದ ಬಂದವರು?
ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು?
ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ?
ಇಲ್ಲವಾದರೆ ಹೇಗವರು ಒಂದೇ ರೀತಿ?
ಹೃದಯ ಮನಸ್ಸು ಇಲ್ಲದವರು
ಮತಾಂಧರಾಗಿ ಮಾನವೀಯತೆಯ ಮರೆತವರು.
ಭಯೋತ್ಪಾದಕರು!
ಎಲ್ಲೆಲ್ಲೂ ಭಯೋತ್ಪಾದಕರು
ಬೀದಿ ಬೀದಿಗಳಲ್ಲಿ, ನಗರನಗರಗಳಲ್ಲಿ
ಬಸ್ಸಲ್ಲಿ, ರೈಲಲ್ಲಿ, ವಿಮಾನದಲ್ಲಿ
ಎಲ್ಲೆಂದರಲ್ಲಿ ರಕ್ತಪಿಪಾಸುಗಳು,
ಆತ್ಮಾಹುತಿಗೆ ಸಿದ್ಧರಾದವರು.
ಕಾಶ್ಮೀರದಲ್ಲಿ ಮಾರಣಹೋಮ ನಡೆದಾಗ,
ಮುಂಬಯಿಯಲ್ಲಿ ಸರಣಿ ಬಾಂಬುಗಳು ಸಿಡಿದಾಗ
ನೇಪಾಲದಲ್ಲಿ ವಿಮಾನ ಅಪಹರಣವಾದಾಗ
ತಾಲಿಬಾನ್ ನೆಲದಲ್ಲಿ ಪ್ರಯಾಣಿಕರ ಪಣಕ್ಕೊಡ್ಡಿದಾಗ,
ಜೈಲಲ್ಲಿದ್ದ ಭಯೋತ್ಪಾದಕರ ಬಿಡಬೇಕಾದಾಗ
ಯಾರನ್ನೂ ಧೃತಿಗೆಡಿಸಲಿಲ್ಲ, ಅವರ ಇರವು.
ಜಗತ್ತು ಕಣ್ಣು ಮುಚ್ಚಿತ್ತು.
ಕಂಬಿಯ ಹಿಂದಿದ್ದ ಭಯೋತ್ಪಾದಕರು ಲೀನವಾದರು
ವಿಶ್ವ ಜನಸ್ತೋಮದಲಿ ಜಯಭೇರಿ ಹೊಡೆಯುತ-
ವಿದ್ವಂಸಕ ಕೃತ್ಯಗಳ ಮೆರೆಯಿಸುತ!
ಮುಂದೆಯೊಂದು ದಿನ
ಬೆಳೆಸಿದವರದ್ದೇ ಕೈಕಚ್ಚಿ ಅವರದೆಗೇ ಗುಂಡಿಟ್ಟಾಗ
ಉರುಳಿದವು ಗಗನ ಚುಂಬಿಗಳು
ಚೆಲ್ಲಾಡಿದವು ಜೀವ ರಾಶಿಗಳು.
ಪ್ರತಿಭಾವಂತರನೇಕರು ಆದರಲ್ಲಿ ಜೀವಂತ ಸಮಾಧಿ!
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ಏನಾಗಿದೆ ಮನುಷ್ಯರಾಗಿ ಹುಟ್ಟಿದವರಿಗೆ
ಮಾನವೀಯತೆಯ ಮರೆತು ರಾಕ್ಷಸರಾಗಿ
ಬದಲಾದರು ಹೇಗೆ?
ಹುಟ್ಟುವಾಗ ಜಾತಿ ಇಲ್ಲ ಮತ ಇಲ್ಲ
ಬೆಳೆದಂತೆ ಮತಾಂಧತೆ
ಒಬ್ಬರನ್ನೊಬ್ಬರು ಕೊಚ್ಚಿಹಾಕುವಷ್ಟು,
ಸುಟ್ಟುಬಿಡುವಷ್ಟು,
ಪುಡಿಪುಡಿಮಾಡಿ ಬಿಸಾಕುವಷ್ಟು ಕೆಟ್ಟ ದ್ವೇಷ.
ಇದಕ್ಕೆಲ್ಲಿದೆ ಕೊನೆ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...