ಭಯೋತ್ಪಾದಕರು

ಯಾರಿವರು ಭಯೋತ್ಪಾದಕರು
ಎಲ್ಲಿಂದ ಬಂದವರು?
ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು?
ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ?
ಇಲ್ಲವಾದರೆ ಹೇಗವರು ಒಂದೇ ರೀತಿ?
ಹೃದಯ ಮನಸ್ಸು ಇಲ್ಲದವರು
ಮತಾಂಧರಾಗಿ ಮಾನವೀಯತೆಯ ಮರೆತವರು.
ಭಯೋತ್ಪಾದಕರು!
ಎಲ್ಲೆಲ್ಲೂ ಭಯೋತ್ಪಾದಕರು
ಬೀದಿ ಬೀದಿಗಳಲ್ಲಿ, ನಗರನಗರಗಳಲ್ಲಿ
ಬಸ್ಸಲ್ಲಿ, ರೈಲಲ್ಲಿ, ವಿಮಾನದಲ್ಲಿ
ಎಲ್ಲೆಂದರಲ್ಲಿ ರಕ್ತಪಿಪಾಸುಗಳು,
ಆತ್ಮಾಹುತಿಗೆ ಸಿದ್ಧರಾದವರು.
ಕಾಶ್ಮೀರದಲ್ಲಿ ಮಾರಣಹೋಮ ನಡೆದಾಗ,
ಮುಂಬಯಿಯಲ್ಲಿ ಸರಣಿ ಬಾಂಬುಗಳು ಸಿಡಿದಾಗ
ನೇಪಾಲದಲ್ಲಿ ವಿಮಾನ ಅಪಹರಣವಾದಾಗ
ತಾಲಿಬಾನ್ ನೆಲದಲ್ಲಿ ಪ್ರಯಾಣಿಕರ ಪಣಕ್ಕೊಡ್ಡಿದಾಗ,
ಜೈಲಲ್ಲಿದ್ದ ಭಯೋತ್ಪಾದಕರ ಬಿಡಬೇಕಾದಾಗ
ಯಾರನ್ನೂ ಧೃತಿಗೆಡಿಸಲಿಲ್ಲ, ಅವರ ಇರವು.
ಜಗತ್ತು ಕಣ್ಣು ಮುಚ್ಚಿತ್ತು.
ಕಂಬಿಯ ಹಿಂದಿದ್ದ ಭಯೋತ್ಪಾದಕರು ಲೀನವಾದರು
ವಿಶ್ವ ಜನಸ್ತೋಮದಲಿ ಜಯಭೇರಿ ಹೊಡೆಯುತ-
ವಿದ್ವಂಸಕ ಕೃತ್ಯಗಳ ಮೆರೆಯಿಸುತ!
ಮುಂದೆಯೊಂದು ದಿನ
ಬೆಳೆಸಿದವರದ್ದೇ ಕೈಕಚ್ಚಿ ಅವರದೆಗೇ ಗುಂಡಿಟ್ಟಾಗ
ಉರುಳಿದವು ಗಗನ ಚುಂಬಿಗಳು
ಚೆಲ್ಲಾಡಿದವು ಜೀವ ರಾಶಿಗಳು.
ಪ್ರತಿಭಾವಂತರನೇಕರು ಆದರಲ್ಲಿ ಜೀವಂತ ಸಮಾಧಿ!
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ಏನಾಗಿದೆ ಮನುಷ್ಯರಾಗಿ ಹುಟ್ಟಿದವರಿಗೆ
ಮಾನವೀಯತೆಯ ಮರೆತು ರಾಕ್ಷಸರಾಗಿ
ಬದಲಾದರು ಹೇಗೆ?
ಹುಟ್ಟುವಾಗ ಜಾತಿ ಇಲ್ಲ ಮತ ಇಲ್ಲ
ಬೆಳೆದಂತೆ ಮತಾಂಧತೆ
ಒಬ್ಬರನ್ನೊಬ್ಬರು ಕೊಚ್ಚಿಹಾಕುವಷ್ಟು,
ಸುಟ್ಟುಬಿಡುವಷ್ಟು,
ಪುಡಿಪುಡಿಮಾಡಿ ಬಿಸಾಕುವಷ್ಟು ಕೆಟ್ಟ ದ್ವೇಷ.
ಇದಕ್ಕೆಲ್ಲಿದೆ ಕೊನೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ
Next post ಗಂಟು

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys