ಕೊಳ್ತಾಯೆ ವಂದನೆಯ ಮಹಿಳೆಯರ ಕಣ್ಮಣಿಯೆ
ತ್ಯಾಗದಿಂ ಜೀವನವ ನಂದನನ ಗೈದಿರುವೆ
ನಿನ್ನ ಮಂಗಲನಾಮ ಕೊಂಡಾನು ಮನದಣಿಯೆ!
ಬಾಳ ಮರದಲಿ ನೀನು ಫಲವಾಗಿ ಮಾಗಿರುವೆ
ನಿನ್ನ ಜೀವನವೊಂದು ತಪದ ರೂಪದೊಳಿಹುದು
ನಲುಮೆ ಒಲಮೆಗಳಿಂದ ನವನಾಕವಾಗಿಹುದು
ನರಕದಲಿ ನಿಂತರೂ ಅದನೆ ಸ್ವರ್ಗವಮಾಡಿ
ಹೆಗ್ಗುರಿಯ ಧ್ರುವದೆಡೆಗೆ ಬಾಳನ್ನು ಗುರಿಮಾಡಿ
ಹೆದರದೆಯೆ ಹೇಸಿಕೆಯನೆಲ್ಲದಾಟುತ ನಡೆದು
ಹೂವಯ್ಯ ನೆತ್ತರಕೆ ನೆಗೆದ ಸೀತಾದೇವಿ
ನಿನ್ನ ಹೃದಯವ ಸತತ ಆ ವಿಧಿಯು ಕಡೆಕಡೆದು
ಬೇಸತ್ತಿತಲ! ನಿನ್ನ ತಾಳ್ಮೆಯನು ಕಂಡೋವಿ
ಸಂತೈಸಿತಲ! ವಿಧಿಯ ಗೆದ್ದೆ ಧೀರರ ಧೀರೆ
ನಡೆದೆಯಲ ಮೇಗಡೆಗೆ ಹೆಗ್ಗುರಿಯ ನೀಸಾರೆ
*****
Related Post
ಸಣ್ಣ ಕತೆ
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಹೃದಯದ ತೀರ್ಪು
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
-
ಆಪ್ತಮಿತ್ರ
ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…