ಸೀತೆ

ಕೊಳ್‌ತಾಯೆ ವಂದನೆಯ ಮಹಿಳೆಯರ ಕಣ್ಮಣಿಯೆ
ತ್ಯಾಗದಿಂ ಜೀವನವ ನಂದನನ ಗೈದಿರುವೆ
ನಿನ್ನ ಮಂಗಲನಾಮ ಕೊಂಡಾನು ಮನದಣಿಯೆ!
ಬಾಳ ಮರದಲಿ ನೀನು ಫಲವಾಗಿ ಮಾಗಿರುವೆ
ನಿನ್ನ ಜೀವನವೊಂದು ತಪದ ರೂಪದೊಳಿಹುದು
ನಲುಮೆ ಒಲಮೆಗಳಿಂದ ನವನಾಕವಾಗಿಹುದು
ನರಕದಲಿ ನಿಂತರೂ ಅದನೆ ಸ್ವರ್ಗವಮಾಡಿ
ಹೆಗ್ಗುರಿಯ ಧ್ರುವದೆಡೆಗೆ ಬಾಳನ್ನು ಗುರಿಮಾಡಿ
ಹೆದರದೆಯೆ ಹೇಸಿಕೆಯನೆಲ್ಲದಾಟುತ ನಡೆದು
ಹೂವಯ್ಯ ನೆತ್ತರಕೆ ನೆಗೆದ ಸೀತಾದೇವಿ
ನಿನ್ನ ಹೃದಯವ ಸತತ ಆ ವಿಧಿಯು ಕಡೆಕಡೆದು
ಬೇಸತ್ತಿತಲ! ನಿನ್ನ ತಾಳ್ಮೆಯನು ಕಂಡೋವಿ
ಸಂತೈಸಿತಲ! ವಿಧಿಯ ಗೆದ್ದೆ ಧೀರರ ಧೀರೆ
ನಡೆದೆಯಲ ಮೇಗಡೆಗೆ ಹೆಗ್ಗುರಿಯ ನೀಸಾರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೭
Next post ರಾವಣಾಂತರಂಗ – ೧೮

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…