ಪಯಣವೆತ್ತ?

ಅಂದು,
ಸ್ವಾತಂತ್ರ್ಯ ಬೇಕೆಂದು
ನಮ್ಮ ದೇಶ ನಮಗೇ ಬೇಕೆಂದು
ಸ್ವದೇಶೀ ಚಳವಳಿಮಾಡಿ
ಹೊರಗಟ್ಟಿದರು ವಿದೇಶೀಯರ
ನಮ್ಮ ಹಿರಿಯರು,
ದೇಶಕ್ಕಾಗೇ ಜೀವತೆತ್ತವರು.

ಇಂದು,
ವಿದೇಶಿ ಬಂಡವಾಳ ಹೂಡಿಕೆದಾರರ
ನಾವೇ ಆಹ್ವಾನಿಸಿ
ಹರಾಜು ಹಾಕಲು ಸಿದ್ಧರಾಗಿರುವೆವು
ನಮ್ಮ ಸ್ವಾತಂತ್ರ್ಯವನ್ನು.
ನೆಲ ನಮ್ಮದು, ಜಲ ನಮ್ಮದು
ಹಣಹಾಕಿ ಬೆಳೆತೆಗೆಯುವವರು
ವಿದೇಶೀಯರು!
ಆದಾಯ ಅವರಿಗೆ ಕೊಳೆ ನಮಗೆ
ಲಾಭ ಅವರಿಗೆ ಪರಿಸರ ನಾಶ ನಮಗೆ
ಉಳುವವನೇ ಭೂಮಿಗೊಡೆಯನೆಂದು
ಭೂಮಿಕಳಕೊಂಡ ಭೂಪತಿಗಳು ನಾವು!

ಮುಂದೆ,
ಬೆಳತೆಗೆಯವವನೇ
ಸೊತ್ತಿಗೊಡೆಯನೆಂದು
ಸಾರ್ವಭೌಮತ್ವ ಸಾರಿದರೆ
ಇನ್ನೊಮ್ಮೆ ಗುಲಾಮತ್ವದ ಕಡೆಗೆ
ನಮ್ಮ ಮಕ್ಕಳ ಒಪ್ಪಿಸಲು
ಸಿದ್ಧರಾಗಬೇಕೇ ನಾವು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು
Next post ಮಧ್ಯವಯಸ್ಸು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…