ಪಯಣವೆತ್ತ?

ಅಂದು,
ಸ್ವಾತಂತ್ರ್ಯ ಬೇಕೆಂದು
ನಮ್ಮ ದೇಶ ನಮಗೇ ಬೇಕೆಂದು
ಸ್ವದೇಶೀ ಚಳವಳಿಮಾಡಿ
ಹೊರಗಟ್ಟಿದರು ವಿದೇಶೀಯರ
ನಮ್ಮ ಹಿರಿಯರು,
ದೇಶಕ್ಕಾಗೇ ಜೀವತೆತ್ತವರು.

ಇಂದು,
ವಿದೇಶಿ ಬಂಡವಾಳ ಹೂಡಿಕೆದಾರರ
ನಾವೇ ಆಹ್ವಾನಿಸಿ
ಹರಾಜು ಹಾಕಲು ಸಿದ್ಧರಾಗಿರುವೆವು
ನಮ್ಮ ಸ್ವಾತಂತ್ರ್ಯವನ್ನು.
ನೆಲ ನಮ್ಮದು, ಜಲ ನಮ್ಮದು
ಹಣಹಾಕಿ ಬೆಳೆತೆಗೆಯುವವರು
ವಿದೇಶೀಯರು!
ಆದಾಯ ಅವರಿಗೆ ಕೊಳೆ ನಮಗೆ
ಲಾಭ ಅವರಿಗೆ ಪರಿಸರ ನಾಶ ನಮಗೆ
ಉಳುವವನೇ ಭೂಮಿಗೊಡೆಯನೆಂದು
ಭೂಮಿಕಳಕೊಂಡ ಭೂಪತಿಗಳು ನಾವು!

ಮುಂದೆ,
ಬೆಳತೆಗೆಯವವನೇ
ಸೊತ್ತಿಗೊಡೆಯನೆಂದು
ಸಾರ್ವಭೌಮತ್ವ ಸಾರಿದರೆ
ಇನ್ನೊಮ್ಮೆ ಗುಲಾಮತ್ವದ ಕಡೆಗೆ
ನಮ್ಮ ಮಕ್ಕಳ ಒಪ್ಪಿಸಲು
ಸಿದ್ಧರಾಗಬೇಕೇ ನಾವು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು
Next post ಮಧ್ಯವಯಸ್ಸು

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys