ರಂಗನ ಕನಸು

ಗಾಳಿಯ ಕಾಲದಿ
ಧೂಳಿನ ದಿನದಿ
ಗಾಳೀಪಟದ ಹುಚ್ಚು
ಪೇಟೆಗೆ ಹೋಗಿ
ಕೊಂಡು ಸಾಮಗ್ರಿ
ಹರಡಿಕೊಳುವುದೇ ಹೆಚ್ಚು

ಪೇಪರ್ ಕತ್ತರಿ
ಬಿದಿರು ಬೆತ್ತರಿ
ಕೊಯ್ದು ಸೀಳಿ ಅಳತೆಗೆ
ಅಂಟು ಸವರಿ
ಕಲ್ಲನು ಹೇರಿ
ತೆಗೆದಿಟ್ಟರು ಪಟನಾಚೆಗೆ

ಸೂತ್ರವ ಬಿಗಿದು
ಫರ ಫರಿ ತೆಗೆದು
ಹೊರಟರು ಊರಿನ ಬಯಲಿಗೆ
ಗಾಳಿಗೆ ತೂರಲು
ದಾರವ ಹಿಡಿಯಲು
ಏರಿತು ನೀಲಿಯ ಬಾನಿಗೆ

ವಂ‍ ವಂಯ್‌ಗುಟ್ಟುತ
ಗಮನವ ಸೆಳೆಯುತ
ಸಂಜೆಯವರೆಗೆ ಆಡಿಸಲು
ಜನಗಳು ಹೊಗಳಲು
ಹರುಷದಿ ತೇಲಲು
ಧರೆಗಿಳಿಯಿತು ನಶೆಯಾಗಲು

ಪಟವನು ಹಿಡಿದ
ಸಂತಸ ಮಿಡಿದು
ರಂಗನು ಮನೆಗೆ ಐತಂದ
ತಿಳಿಯಲು ವಿಷಯ
ಪಟ್ಟರು ಖುಷಿಯ
ಹೊಗಳಲು ರಂಗನ ತಾಯ್ತಂದೆ

ಊಟವ ಮಾಡಲು
ರಂಗನು ಮಲಗಲು
ಕಂಡನು ಬಣ್ಣದ ಕನಸುಗಳ
ಪಟದ ಸ್ಪರ್ಧೆಯಲಿ
ರಂಗನು ಗೆಲ್ಲಲು
ಪಡೆದನು ಬಹುಮಾನಗಳ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ
Next post Recineನ Phaedra ವ್ಯಾಮೋಹ ಒದಗಿಸಿದ ದುರ್‍ಗತಿ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…