ರಂಗನ ಕನಸು

ಗಾಳಿಯ ಕಾಲದಿ
ಧೂಳಿನ ದಿನದಿ
ಗಾಳೀಪಟದ ಹುಚ್ಚು
ಪೇಟೆಗೆ ಹೋಗಿ
ಕೊಂಡು ಸಾಮಗ್ರಿ
ಹರಡಿಕೊಳುವುದೇ ಹೆಚ್ಚು

ಪೇಪರ್ ಕತ್ತರಿ
ಬಿದಿರು ಬೆತ್ತರಿ
ಕೊಯ್ದು ಸೀಳಿ ಅಳತೆಗೆ
ಅಂಟು ಸವರಿ
ಕಲ್ಲನು ಹೇರಿ
ತೆಗೆದಿಟ್ಟರು ಪಟನಾಚೆಗೆ

ಸೂತ್ರವ ಬಿಗಿದು
ಫರ ಫರಿ ತೆಗೆದು
ಹೊರಟರು ಊರಿನ ಬಯಲಿಗೆ
ಗಾಳಿಗೆ ತೂರಲು
ದಾರವ ಹಿಡಿಯಲು
ಏರಿತು ನೀಲಿಯ ಬಾನಿಗೆ

ವಂ‍ ವಂಯ್‌ಗುಟ್ಟುತ
ಗಮನವ ಸೆಳೆಯುತ
ಸಂಜೆಯವರೆಗೆ ಆಡಿಸಲು
ಜನಗಳು ಹೊಗಳಲು
ಹರುಷದಿ ತೇಲಲು
ಧರೆಗಿಳಿಯಿತು ನಶೆಯಾಗಲು

ಪಟವನು ಹಿಡಿದ
ಸಂತಸ ಮಿಡಿದು
ರಂಗನು ಮನೆಗೆ ಐತಂದ
ತಿಳಿಯಲು ವಿಷಯ
ಪಟ್ಟರು ಖುಷಿಯ
ಹೊಗಳಲು ರಂಗನ ತಾಯ್ತಂದೆ

ಊಟವ ಮಾಡಲು
ರಂಗನು ಮಲಗಲು
ಕಂಡನು ಬಣ್ಣದ ಕನಸುಗಳ
ಪಟದ ಸ್ಪರ್ಧೆಯಲಿ
ರಂಗನು ಗೆಲ್ಲಲು
ಪಡೆದನು ಬಹುಮಾನಗಳ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ
Next post Recineನ Phaedra ವ್ಯಾಮೋಹ ಒದಗಿಸಿದ ದುರ್‍ಗತಿ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…