Home / ಲೇಖನ / ಅಣಕ / ಗೋಡ್ರ ಎಂಡ್‌ಲೆಸ್‌ ಸ್ಟೋರಿ ಎಡವಿದ ಯಡಿಯೂರಿ !

ಗೋಡ್ರ ಎಂಡ್‌ಲೆಸ್‌ ಸ್ಟೋರಿ ಎಡವಿದ ಯಡಿಯೂರಿ !

ಜೆಡಿ(ಎಸ್) ಅಂದ್ರೆ ಜನತಾದಳ ಸನ್ಸ್ ಯಾನೆ ಗೋಡ್ರ ಸನ್ಸ್ ಅಂತ ಸಾಬೀತಾಗೋತು ನೋಡ್ರಿ. ಯಾಕಂತಿರಾ, ಸೆಕ್ಯುಲರ್ ಅಂದ್ರೇನು ಅಂತ್ಲೆ ಪಟ್ಟಾಧಿಕಾರಿ ಕುಮಾರಂಗೆ ಗೊತ್ತಿಲ್ಲಂತೆ ಪಾಪ. ಅಪ್ಪ ಮಕ್ಳು ಸಪರೇಟ್ ಆಗಿ ಕಂಡಕಂಡ ದೇವರಿಗೆಲ್ಲಾ ಕಾಯಿ ಒಡೆಸಿ ‘ಸಿ‌ಎಂ ಪಟ್ಟ ಖಾಯಂ’ ಮಾಡ್ಸು ಅಂತ ಪ್ರೇಯರ್ ಮಾಡಿದ್ದಾತು. ಊರು ಸೀಮ್ಯಾಗಿರೋ ಮಠಾಧೀಶ್ವರರೆಲ್ಲಾ ಅಡ್ಡತರುಬಿ ಅಡ್ ಬಿದ್ದು ಸಪೋಲ್ಟ್ ಕೇಳಿದ್ದಾತು. ತೀರ್ಥಯಾತ್ರೆ ಮುಗಿದು ಅಪ್ಪ ಮಕ್ಳ ಮನದಾಶೆ ಈಡೇರಿದ್ರೂ ಗೋಡ್ರ ನಾಟ್ಕ ಮುಗೀವಲ್ದು! ಈಗ್ಲೂ ಮಾದೇಶನಾಣೆಗೂ ನಾನು ಮಗನಿಗೆ ಎಗೆನೆಸ್ಟ್… ನಾನು ಹಿರಣ್ಯಾಕ್ಷ ಅಂವ ಪ್ರಹ್ಲಾದ. ಆದರೆ ನರಸಿಂಹನ ರೋಲೂ ನಂದೇಯಾ. ನಾನು ಕರಳು ಬಗೆಯೋದು ಕಾಂಗ್ರೆಸ್ಸಿಂದು ಅಂತ ಸ್ವಾಟೆ ಓರೆ ಮಾಡಿ ಇಚಿತ್ರ ಸ್ಟೈಲ್ ಕೊಡ್ಲಿಕತ್ತಾರೆ. ಫೆಬ್ರವರಿ ೨೧ ರಂದು ಜೆಡಿ‌ಎಸ್‌ನ ೪೧ ಸ್ಯಾಸಕರೂ ಕಿಕ್ ಅಂಡ್ ಲೆಗ್ಡ್ಫ಼್ ಔಟ್ ಮಾಡ್ತೀವ್ನಿ ಅಂತ ದೆಹಲಿಯ ವಕ್ತಾರರ ಮುಂದೆ ಕೈನಾಗೆ ಕರ್ಪೂರ ಹಚ್ಕೊಂಡು ಆಣೆ ಮಾಡವರೆ. ಆದರೆ ವಕ್ತಾರರಗೂ ನಂಬಿಕಿಲ್ಲ. ಈಗ ಮಗ ಸೆಕ್ಯುಲರ್ ಸಿದ್ದಾಂತ ಸಮಾಧಿ ಮಾಡಿ ೨ ತಿಂಗಳಾದ್ರೂ ಗೋಡ್ರು ತಮ್ಮ ಮಗನ್ನ ಉಳಿದ ಸ್ಯಾಸಕನ ಉಚ್ಚಾಟಿಸ್ದೆ ಮಾಡ್ತಿರೋ ಡ್ರಾಮಾ ನೋಡಿ ಸುರೇಂದ್ರ ಮೋಹನ್, ವೀರೇಂದ್ರ ಕುಮಾರ್ ಅಂಡ್ ಪಾರ್ಟಿ ಗರಂ ಆಗವರೆ. ಗೋಡ್ರು ಬಾಹರ್ ದ್ರ್ಯಾಬೆಮಕ ತೋರಿಸ್ತಾ ಮಗನ ದಿಗ್ವಿಜಯವನ್ನೆಲ್ಲಾ ಟಿವಿನಾಗೆ ಕಣ್ ಬಿಟ್ಕಂಡು ನೋಡ್ತಾ ಪ್ರಾಂಜಲ ನೇತ್ರರಾಗಿದ್ದಾರೆ. ಅಳ್ತಿಲ್ಲ ಕಣ್ರಿ ಗೋಡ್ರ ನಾಟ್ಕ ಮೆಗಾ ಧಾರವಾಹಿ ಇದ್ದಂಗೆ ಮುಗಿಯೋ ಗ್ಯಾರಂಟಿಲ್ಲ.

ಇದೆಲ್ಲ ಏನಾರ ಹಾಳಾಗಿ ಹೋಗ್ಲತ್ತ. ಸುಮ್ಗಿರಲಾರ್ದೆ ತಿಕದಾಗೆ ಇರುವೆ ಬಿಟ್ಕಂಡ ಕೂಗುಮಾರಿ ಯಡೂರಿ, ದೊಡ್ಡ ಸ್ಥಾನಕ್ಕೆ ಏರಿದರೂ ಅಸಲಿ ಬುದ್ಧಿ ಬಿಡ್ದೆ ಗೋಡೆಮ್ಯಾಗೆ ಅದರ ಪಾಡಿಗಿದ್ದ ಅಂಬೇಡ್ಕರ ಪಟ ಇಂದಿರಮ್ಮನ ಪಟ ತೆಗಿಸಿ ಬೆಣೆ ತಕ್ಕಂಡ ಮಂಗ್ಯಾ ಆಗದೆ. ಇಂದಿರಮ್ಮನ ಮ್ಯಾಗೆ ಹಳೆ ದ್ವೇಸ ಐತೆ ಬಿಡ್ರಿ.. ಆದರೆ ಅಂಬೇಡ್ಕರ್ ಪಟನ ಟಚ್ ಮಾಡಿದ್ರಾಗೆ ಬಿಜೆಪಿಗಳ ಅಂತರಾಳದಾಗೆ ಏಟು ದಲಿತಪ್ರೇಮ ಹೊಕ್ಕೊಂಡೇತೆ ಅಂಬೋದು ಬಟಾಬಯಲಾಗೋತು ನೋಡ್ರಿ. ಕಲಿತ ಬುದ್ಧಿ ಬಿಡೆ ಕಳ್ಳಮುಂಡೆ ಅಂದ್ರೆ ನಡಂತ್ರ ಬಿಟ್ಟೇನು ಮಣ್ಣ ಹೊಯ್ಕಳೆ ಅಂದಂಗಾಗೇತಿ. ಯಡೂರಿ ಪತರಗುಟ್ಟಂಗಾಗಿ, ನಾನು ಶಿವನಾಣೆ ಪಟ
ತೆಗಿಸಿದ್ದು ರೂಮ್ ಕಿಲೀನ್ ಮಾಡಿಸೋಕೆ ಅಂದೇತೆ. ರೂಮ್ ಕಿಲೀನ್ ಮಾಡ್ಸೆ ಅಲ್ಲೇನ್ಲೇ ಯಡೂರಿ ರೂಮ್ಗೆ ಎಂಟ್ರಿ ಕೊಟ್ಟಿದ್ದು? ಬೇರೆಯೋರ ಪಟ ಹಂಗೆ ಬಿಟ್ಟು ಇವು ಎಲ್ಡೇ ಯಾಕೆ
ತೆಗಿಸ್ದೆ ಬೊಗಳು ಅಂತ ದಲಿತ ಸಂಘಟನೆಗಳು ರಾಜ್ಯದಾದ್ಯಂತ ದಾಂಧಲೆ ಎಬ್ಬಿಸವೆ. ‘ರಾಜಿನಾಮೆ ಬಿಸಾಕಲೆ ಹಳೆ ಚಡ್ಡಿ’ ಅಂತ ಕೆಲವರು, ‘ಸಾರಿ ಕೇಳ್ಳೇ ಯಡವಟ್ಟು ಯಡ್ಡಿ’ ಅಂತ ಹಲವರು ಯಡೂರಿ ಗೊಂಬೆ ಮಾಡಿ ಸುಡ್ಲಿಕ್ಕತ್ತಾರೆ. ಕಳ್ಳನ ಹೆಣ್ತಿ ಎಂದಿದ್ರೂ ಮುಂಡೆ ಅಂಬಂಗೆ ಆಸಲಿ ಬುದ್ಧಿ ಬಿಗಿನಿಂಗ್ನಾಗೇ ತೋರಿಸಿ ಬಿಟ್ರಿಲ್ಲೋ ಕಮಲ ಮುಖಿಗಳಾ ಅಂತ ಕಾಂಗ್ರೆಸ್ ಮುಖಿಗಳು ಮುಸಿಮುಸಿ ನಗ್ಲಿಕತ್ತಾವೆ. ಬೆದರು ಗೊಂಬೆಯಂತಾದ ಯಡೂರಿ ಅಗ್ದಿ ಕಂಗಾಲಾಗೈತಿ. ನಾನು ದಲಿತ ಪ್ರೇಮಿ. ಶಿವವೂಜೆ ಮಾಡಕಿಂತ ಮುಂಚೆ ದಲಿತರ ಮನಿಗೋಗಿ ಉಂಡೀರಾ ಉಪಾಸಿದೀರಾ ಅಂತ ಕೇಳ್ಕಂಡು ಬಂದೇ ಉಣ್ತೀನಿ. ಬೇರ್ಷರತ್ ಸಾರಿ ಕೇಳ್ತಿನಿ. ಜಗತ್ತಿನ ಎಲ್ಲಾ ಸಣ್ಣಪುಟ್ಟ ಕಚೇರಿನಾಗೂ ಆಂಬೇಡ್ಕರ್ ಪಟ ಬ್ಲೋ‌ಅಪ್ ಮಾಡ್ಸಿ ಗೋಡೆ ತುಂಬಾ ಅಂಟಿಸಾಕೆ ಆಲ್ಡರ್ ಹೊಂಡಿಸ್ತೀನ್ರಪಾ ನನ್ನನ್ನು ನಂಬಿ. ನಾನು ಬ್ರಾಮಿನ್ ಅಲ್ಲ ಅಪ್ಪಟ ಬಸವಭಕ್ತ ಎಂದು ಒಂದೇ ಕಣ್ಯಾಗೆ ಅಳ್ತಾ ಮಾರಿಗಂಟಿಕ್ಕಿ ಕೂಗಾಡ್ಲಿಕತ್ತದೆ. ಯಡೂರಿದು ಒಂಟು ಧ್ವನಿ ಅನಂತಿಯಾಗ್ಲಿ ಪೋಸ್ಟರ್ನಾಗೆ ತನ್ನ ಮಾರಿ ಇಲ್ಲ ಅಂತ ಮುನಿದ ಶೆಟ್ಟರ್ ಆಗ್ದಿ ಉಸಿರೆತ್ತವಲ್ಲರು. ಜೆಡಿ‌ಎಸ್ನೋರೋ ತಂದೂರಿ ತಿಂದಷ್ಟು ಒಳ್ಗೇ ಖುಷಿ. ಈ ಕಾಂಗೈಗಳು ಕೇಕೆ ಹಾಕ್ತಾ – ‘ದಲಿತರು ಸಾಬರ್ಗೆ ಕಾಂಗೈ ನೆಂಟಸ್ತನ ಬಿಟ್ರೆ ಬೇರೆಕಡೆ ನೋ ಸ್ಥಾನ ನೋ ಮಾನ’ ಅಂತ ಪಾಪ್ ಸಾಂಗ್ ಹಾಡ್ಲಿಕತ್ತಾವೆ. ಆದ್ರೂ ಯಡೂರಿ ಬಿಡಂಗಿಲ್ಲ‘ಸದಾ ವತ್ಸಲೆ ಮಾತೃಭೂಮಿ ಜನ್ಮ ಇರೋಗಂಟ ನಾ ದಲಿತ ಪ್ರೇಮಿ’ ಅಂತ ಲವ್‌ಸಾಂಗ್ ಹಾಡಿದ್ರೂ ಯಾರೂ ನಂಬವಲ್ರು ನೋಡ್ರಿ ದಿನಾ ಟವಿನಾಗೆ ಗೋಡ್ರು ಕಣ್ಣೀರು ಹಾಕದ್ನ ನೋಡಿ ಜನ ನಗೋವಷ್ಟು ಶಾಣ್ಯಾರಾಗ್ಯಾರೆ ಅಂದ ಮ್ಯಾಗೆ ಯಡೂರಿ ಲವ್‌ಸಾಂಗ್ ನಂಬ್ತಾರಾ?

ನಾನೇ ಫೈನಾನ್ಸ್ ಅಬ್ಕಾರಿ ಎಲ್ಲಾ ಖಾತೆ ಮಡಿಕ್ಕಂಡಿವ್ನಿ. ಎಸ್‌ಸಿ, ಎಸ್‌ಟಿ ಗಳ ಡೆವಲಪ್‌ಮೆಂಟ್ಸ್‌ಗೆ ಕೋಟಿಗಟ್ಟಲೆ ಸ್ಯಾಂಕ್ಷನ್ ಮಾಡ್ತೀನಪ್ಪೋ ಬಿಲೀವ್ ಮಿ. ಈಗಾಗಲೇ ಮತ್ತೆ ಅಂಬೇಡ್ಕರ್ ಪಟ ನೇತುಹಾಕಿ ರೇಷ್ಮೆ ಗಾರ್ಲೆಂಡ್ ಹಾಕ್ಸಿನಿ. ಎಕ್ಸ್‌ಕ್ಯೂಜ್ ಮಿ ಆಂತ ಯಡೂರಿ ಮೈ ಪರಚಿಕೊಳ್ಳಿಕತ್ತಾರೆ. ಇರೋ ೪೦ ತಿಂಗಳಲ್ಲಿ ೨೦ ತಿಂಗಳು ಸರದಿಮ್ಯಾಗೆ ಮಂತ್ರಿಗಳನ್ನು ಮಾಡೋ ಆಲೋಚನೆ ಐತೆ ಅಂತ ಮಣ್ಣಿನ ಮೊಮ್ಮಗ ಕೋಮಾರ ಅನೌನ್ಸ್ ಮಾಡವರಂತೆ. ಹಂಗಂದಮ್ಯಾಗೆ ೪೦ ತಿಂಗಳದಾಗೆ ದಿನಕ್ಕೆ ಒಬ್ಬನ್ನ ಮಂತ್ರಿ ಮಾಡ್ತಾ ನಮ್ಮ ಎಲ್ಲಾ, ೭೯ ಸ್ಯಾಸಕರಿಗೂ ಮಂತ್ರಿ ಆಗೋ ಚಾನ್ಸ್ ಕೊಡ್ತೀನಿ ಅಂತ ಪ್ರಾಮಿಸ್ ಮಾಡಿ ತನ್ನ ಪಾರ್ಟಿ ಮಂದಿನಾ ಯಡೂರಿ ಖುಷಿ ಪಡಿಸ್ತಾರಂತ ನ್ಯೂಸ್ ಹಬ್ಬೇತಿ. ಇನ್ನು ಎಂಪಿ ಪ್ರಕಾಸು ಸಿಂದ್ಯಾ ಗೋಡ್ರ ಎದುರು ಮುನಿಸ್ಕೊಂಡು ಕುಂತ್ರೆ ಗೋಡ್ರು, ಹೇಳಿದ್ದು ಕಡ್ಡಿ ಮುರಿದಂಗೆ
ಒಂದೇ ಮಾತು. ‘ನೋಡಿದ್ರಾ ನಿಮ್ಮ ಸ್ಥಿತಿನಾ! ನಿಮ್ಮಿಬ್ಬರ ಹಿಂದೆ ಒಬ್ಬರಾನಾ ಸ್ಯಾಸಕರೆ ಅವರಾ?’ ಎಂದು ಪ್ರಶ್ನಿಸಿದ ಗೋಡ್ರ ಮಾತಿನಾಗೆ ಇದ್ದದ್ದು ಅಪನಂಬಿಕೆಯೋ! ಅನುಕಂಪವೋ? ಅಪಹಾಸ್ಯವೋ ಮೂಕಳಾಗಿ ಕುಂತಿರೋ ತಾಯಿ ಮೂಕಾಂಬಿಕೆಯೇ ಬಲ್ಲಳು. ಯಾವುದು ಹೆಂಗಾರ ಇರ್ಲಿ ಹೊರೆ ಹೊತ್ತ ಮಹಿಳೆನಾ ಮೂಲೆಗೆ ತಳ್ಳಿ ಅರಳ್ತಿರೋ ಕುಮಾರ ಛಲ ಬಿಡದ ತ್ರಿವಿಕ್ರಮನಂಗೆ ಬಹುಮತ ಸಾಬೀತು ಮಾಡವ್ನೆ.

ಬಿಜೆಪಿ ಜೆಡಿ‌ಎಸ್‌ನ ಹನಿಮೂನ್ ಆರಂಭವಾಗೇತೆ. ಇವರ ಹಿಂದಾಗಡೆ ಆರ್‌ಎಸ್‌ಎನ್ನೋರು ದೊಣ್ಣೆ ಹಿಡ್ಕೊಂಡು ಪಹರೆಗೆ ನಿಂತಾರೆ. ಮುಂದೇನಾಯ್ತದೋ ಗೋಡ್ರ ಗೋಡದ್ಯಾವ್ನೆ ಬಲ್ಲ.
*****
( ದಿ.೨೦-೦೨-೨೦೦೬)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...