ಅತಿಥಿ

ಕಂಡೆ ನನ್ನ ಆಂತರ್ಯದಮರಪುರುಷನನು ತೆರೆಯಲಿಹನ
ಮನದ ಮುಖವಾಡ ತೊಟ್ಟುಕೊಂಡ, ಭಧ್ರಾಃಕಾರ, ಘನನ
ಮೃತ್ಯುಲೋಕವನು ಅಮೃತನಂತೆ ಯಾಹೊತ್ತು ಕಾಣುವವನ
ಮರ್ತ್ಯಲೀಲೆಯನು ದಿವ್ಯಪ್ರೇಕ್ಷಕನ ಹಾಗೆ ನೋಡುತಿಹನ !

ಹೃದಯಕಿರುವ ಮೈಗಿರುವ ಹರ್ಷ-ಖೇದಗಳ ಸ್ಪರ್ಶಗಿರ್ಶ
ತಟ್ಟಲರಿಯನಾಗರ್ಭಗುಡಿಯ ನಿಃಶಬ್ದ ಶುಚಿ ವಿಮರ್ಶ.
ಸಂಕಟವು ಭಯವು – ಭೂಬಿಟ್ಟ ವಿಧಿಯ ಕ್ರೂರಾತ್ಮ ಕರ್ಮಶುನಕ
ಹರಕೊಳ್ಳಬಹುದು ಮೈಮನವ, ಬರವು-ಮುಕ್ತಾತ್ಮನಲ್ಲಿ ತನಕ

ನಿರ್ನಿದ್ರವಾದ ಆ ದೇವಕಿರಣ ಹೃದಯದಲಿ ಸಾಕ್ಷಿಯಾಗಿ
ನಿರ್ಮರಣವಾದ ಸಾತ್ವಿಕದ ಅಚ್ಚ ಜೀವಾತ್ಮದಕ್ಷಿಯಾಗಿ
ಸರ್ವಶಕ್ತ, ದುರ್ಗಮ್ಯ, ಅತಿಥಿ ಊರ್ವ್ಯೂಧ್ವ ಅಗ್ನಿ ನಿಧಿಯು
ಮರಣ ಬರಲು, ಬಲಿಯೆಂದು ಅದನೆ ಎತ್ತಿತ್ತು ದಿವ್ಯ ವಿಧಿಯು

ಪೂರ್ವಪಕೃತಿಯಾ ಮನೆಯು ಬೀಳುತಿದೆ, ಕೊಚ್ಚಿ ಕೆಳಗೆ ಕುಸಿದು
ದುರ್ದಮ್ಯನಂತೆ ಅಕ್ಷುಬ್ಧಶಾಂತ ಇಹನಾತ ಮಿಂಚ ಮಸೆದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚಿನ ಮಾಟ
Next post ವಾಗ್ದೇವಿ – ೩೬

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys