ಅತಿಥಿ

ಕಂಡೆ ನನ್ನ ಆಂತರ್ಯದಮರಪುರುಷನನು ತೆರೆಯಲಿಹನ
ಮನದ ಮುಖವಾಡ ತೊಟ್ಟುಕೊಂಡ, ಭಧ್ರಾಃಕಾರ, ಘನನ
ಮೃತ್ಯುಲೋಕವನು ಅಮೃತನಂತೆ ಯಾಹೊತ್ತು ಕಾಣುವವನ
ಮರ್ತ್ಯಲೀಲೆಯನು ದಿವ್ಯಪ್ರೇಕ್ಷಕನ ಹಾಗೆ ನೋಡುತಿಹನ !

ಹೃದಯಕಿರುವ ಮೈಗಿರುವ ಹರ್ಷ-ಖೇದಗಳ ಸ್ಪರ್ಶಗಿರ್ಶ
ತಟ್ಟಲರಿಯನಾಗರ್ಭಗುಡಿಯ ನಿಃಶಬ್ದ ಶುಚಿ ವಿಮರ್ಶ.
ಸಂಕಟವು ಭಯವು – ಭೂಬಿಟ್ಟ ವಿಧಿಯ ಕ್ರೂರಾತ್ಮ ಕರ್ಮಶುನಕ
ಹರಕೊಳ್ಳಬಹುದು ಮೈಮನವ, ಬರವು-ಮುಕ್ತಾತ್ಮನಲ್ಲಿ ತನಕ

ನಿರ್ನಿದ್ರವಾದ ಆ ದೇವಕಿರಣ ಹೃದಯದಲಿ ಸಾಕ್ಷಿಯಾಗಿ
ನಿರ್ಮರಣವಾದ ಸಾತ್ವಿಕದ ಅಚ್ಚ ಜೀವಾತ್ಮದಕ್ಷಿಯಾಗಿ
ಸರ್ವಶಕ್ತ, ದುರ್ಗಮ್ಯ, ಅತಿಥಿ ಊರ್ವ್ಯೂಧ್ವ ಅಗ್ನಿ ನಿಧಿಯು
ಮರಣ ಬರಲು, ಬಲಿಯೆಂದು ಅದನೆ ಎತ್ತಿತ್ತು ದಿವ್ಯ ವಿಧಿಯು

ಪೂರ್ವಪಕೃತಿಯಾ ಮನೆಯು ಬೀಳುತಿದೆ, ಕೊಚ್ಚಿ ಕೆಳಗೆ ಕುಸಿದು
ದುರ್ದಮ್ಯನಂತೆ ಅಕ್ಷುಬ್ಧಶಾಂತ ಇಹನಾತ ಮಿಂಚ ಮಸೆದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚಿನ ಮಾಟ
Next post ವಾಗ್ದೇವಿ – ೩೬

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…