Home / ಕವನ / ಕವಿತೆ / ಸಾಮಾಜಿಕ ನ್ಯಾಯ

ಸಾಮಾಜಿಕ ನ್ಯಾಯ

ನನ್ನ ಹರಿದ ಅಂಗಿಯ ಮಧ್ಯದ
ತುಂಡು ಬಟ್ಟೆಯನ್ನೇ ತೆಗೆದು ಅವ್ವ
ಹೊಲಿದಳು ನನಗೊಂದು ನಮಾಜಿನ ಟೋಪಿ
ನನ್ನ ಬಣ್ಣಗೆಟ್ಟ ಟೊಪ್ಪಿಗೆ ನೋಡಿ
ಚಂದದ ಕಸೂತಿ ಹೆಣೆದ ಟೊಪ್ಪಿಗೆ
ಜಂಭದಿಂದ ಭಿಮ್ಮನೆ ಬೀಗುತ್ತ
ಅಹಮ್ಮಿನ ನೋಟ ಬೀರಿ
ನನ್ನವ್ವನ ಬಡತನವನು
ಅಣಕಿಸಿ ನಗುತ್ತಿದೆ ನೋಡು!

ಬೀಡಿ ಕಟ್ಟುವ ನನ್ನವ್ವನ
ನಾಜೂಕು ಎಸಳು ಬೆರಳುಗಳು
ಮೀನಾರಿನ ಅಜಾಹ್‌ನ ಕರೆಗೆ
ತಲೆಮೇಲೆ ಸೆರೆಗೆಳೆದು
ಹರಿದ ಬಟ್ಟೆಯನ್ನೇ ಹಾಸಿ
ನಮಾಜು ಮಡುತ್ತಿರುವುದ ಕಂಡು
ನೆರೆಯವಳ ಬಹುಮಹಡಿ ಬಂಗಲೆಯಿಂದ
ಮಖಮಲ್ಲಿನ ಜಾನಿಮಾಜು
ಧಿಮಾಕಿನಿಂದ ನಗುತ್ತಿದೆ ನೋಡು!
ಶ್ರಮಜೀವಿ ನನ್ನಪ್ಪ
ದಿನವೆಲ್ಲ ರಿಕ್ಷಾ ಹೊಡೆದು
ಗಳಿಸಿದ ಪುಡಿಗಾಸಿನ ಲೆಕ್ಕ
ದಣಿದ ನನ್ನವ್ವನ ಕೈಗಿಟ್ಟು
ದೈನ್ಯತೆಯ ನೋಟ ಬೀರಿ
ಕಣ್ಣೆತ್ತಿ ನೋಡಿದಾಗ
ಮಹಡಿ ಮನೆ ಸಾಹುಕಾರನ
ಕೆಂಪು ನೋಟಿನ ಕಟ್ಟುಗಳು
ನನ್ನವ್ವನ ಕೈಯಲ್ಲಿದ್ದ
ಪುಡಿಗಾಸು ನೋಡಿ
ಕಿಸಕ್ಕನೆ ನಗುತ್ತಿವೆ ನೋಡು!

ನನ್ನವ್ವನ ಹರಿದ ಸೀರೆಗೆ
ಜೋಡಿಸಿದ ನೂರೆಂಟು ತೇಪೆ
ದುಡಿದು ದುಡಿದು ಸವೆದ
ನನ್ನಪ್ಪನ ಅಂಗೈ ರೇಖೆ
ಸವೆದು ಶಿಥಿಲವಾದ ಪಂಚೆ
ಹರಿದ ಬನಿಯನ್ನುಗಳ ನೋಡಿ
ಸೂಟುಬೂಟು ಪಿತಾಂಬರ
ಕಟುಕಿಯಾಡಿ ನಗುವಾಗ ವ್ಯವಸ್ಥೆಯ ಎದೆಗೆ
ಝಾಡಿಸಿ ಒದ್ದು ಕೇಳಬೇಕೆನಿಸುತ್ತದೆ
ಹೇಳು ಎಲ್ಲಿ ಬಚ್ಚಿಟ್ಟಿರುವೆ
ನಿನ್ನ ಸಾಮಾಜಿಕ ನ್ಯಾಯ?
*****
ಅಜಾಹ್‌ನ – ನಮಾಜಿನ ಕರೆ

ಜಾನಿಮಾಜು – ನಮಾಜ್ ಮಾಡುವಾಗ ಕೆಳಗೆ ಹಾಸಿಕೊಳ್ಳುವ ಬಟ್ಟೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...