ತುಂಟ ಪುಟ್ಟ

ನಮ್ಮ ಪುಟ್ಟ ಬಹಳ ದಿಟ್ಟ
ಸಿಹಿ ಅಂದ್ರೆ ತುಂಬಾ ಇಷ್ಟ
ಸಕ್ಕರೆ ಬೆಲ್ಲ ಕದ್ದು
ಯಾರೂ ಕಾಣದಂಗೆ ಮೆದ್ದು

ಸೈಕಲ್‌ ಅಂದ್ರೆ ಪ್ರಾಣ
ಹೊಡೆಯೋಕೆ ಬೇಕು ತ್ರಾಣ
ಎಷ್ಟೇ ಟ್ರಾಫಿಕ್ಕಿದ್ರೂ
ನುಗ್ಗೇ ಬಿಡ್ತಾನೆ ಹೇಗಾದ್ರೂ

ದುಡ್ಡಂದ್ರೆ ಸುರಿಸ್ತಾನೆ ಜೊಲ್ಲು
ಕೊಡದಿದ್ರೆ ಬಿಡೋದೆ ಇಲ್ಲ
ಕೆಲಸಕ್ಕೊಂದು ರೇಟು
ಅಮ್ಮ ಕೊಡ್ತಾಳೆ ಏಟು

ಟೆಸ್ಟ್ ಅಂದ್ರೆ ತುಂಬಾ ಕಷ್ಟ
ಓದೋಕೆ ಕೂರಿಸೋದೆ ಸಂಕಷ್ಟ
ಬಾಯಿ ಮಾತ್ರಾ ಬೊಂಬಾಯಿ
ತಲೆಯೊಳಗಿಲ್ಲ ಬದನೆಕಾಯಿ

ಶಾಲೆಗೆ ಬರೋದು ಲೇಟೆ
ಅಲೆಯೋದು ಪೇಟೆ ಪೇಟೆ
ಬಂದಾಗ್ಲ ಮಾಡ್ತಾನೆ ತರ್ಲೆ
ಮೇಷ್ಟ್ರು ಕೇಳ್ತಾರೆ ಮರ್ಲೆ

ತಂಗಿ ತುಂಬಾ ಜಾಣೆ
ಅಣ್ಣ ಹಂಗ್ಯಾಕೊ ಕಾಣೆ
ಕ್ಲಾಸಿಗವಳೆ ಫಷ್ಟು
ಎಲ್ಲಾದ್ರಲ್ಲೂ ಫಾಸ್ಟು

ಬಂದೇ ಬಿಡ್ತು ರಿಸಲ್ಟು
ಪುಟ್ಟಂಗಾಯ್ತು ಇನ್ಸಲ್ಟು
ಕ್ಲಾಸಿಗಿವನೆ ಲಾಸ್ಟು
ಆಯ್ತು ಒಂದೊರ್ಷ ವೇಸ್ಟು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಮಾಜಿಕ ನ್ಯಾಯ
Next post ಒದೆ ಬಿತ್ತು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys