Home / ಲೇಖನ / ಇತರೆ / ವಚನ ವಿಚಾರ – ಸಂಬಂಧ

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ
ಕೈದೊ ಕೈಯೊ ಮನವೊ
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ
ಅಂಗವೊ ಲಿಂಗವೊ ಆತ್ಮನೊ
ಕಾಲಾಂತ ಭೀಮೇಶ್ವರಲಿಂಗವನರಿದುದು

[ಕೈದ-ಆಯುಧವನ್ನು]

ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ.

ಆಯುಧ ಹಿಡಿದು ಯುದ್ಧಮಾಡುವುದುಂಟಲ್ಲ, ಆಗ ಕಾದುತ್ತಿರುವುದು ಆಯುಧವೋ, ಆಯುಧ ಹಿಡಿದ ಕೈಯೋ, ಅಥವಾ ಮನಸ್ಸೋ? ದೇಹ ಮತ್ತು ದೇವರ ಸಂಬಂಧ ಅನ್ನುವುದುಂಟಲ್ಲ, ಆ ಸಂಬಂಧ ದೇಹದ್ದೋ, ದೇಹದೊಳಗಿನ ಮತ್ತು ದೇಹದ ಮೇಲಿರುವ ಲಿಂಗದ್ದೋ ಅಥವಾ ಆತ್ಮದ್ದೋ?

ಈ ವಚನ ಇರುವ ರೀತಿಯಲ್ಲೇ ವಚನಕಾರನ ನಿಲುವೂ ಸ್ಪಷ್ಟವಾಗಿಯೇ ಇದೆ. ಆಯುಧ ತನ್ನಷ್ಟಕ್ಕೇ ಕಾದಲಾರದು, ಹಿಡಿಯುವ ಕೈ ಬೇಕು; ಮತ್ತೆ ಅದಕ್ಕಿಂತ ಮಿಗಿಲಾಗಿ ಕಾದುವ ಮನಸ್ಸು ಬೇಕು. ಹಾಗೆ ನೋಡಿದರೆ ಯುದ್ಧದಲ್ಲಿ ತೊಡಗುವುದಕ್ಕೆ ಮನಸ್ಸೇ ಮುಖ್ಯ ಕಾರಣ. ಹಾಗೆಯೇ ಅಂಗ, ಲಿಂಗ ಇವೆಲ್ಲಕ್ಕಿಂತ ಒಳಗಿನ ಆತ್ಮ, `ನಾನು’, ಅನ್ನುವುದೇ ಮುಖ್ಯ.

ನಾವು ಕಣ್ಣಿಗೆ ಕಾಣುವ ಸ್ಕೂಲವಾದದ್ದನ್ನು ಮಾತ್ರ ಗಮನಿಸಿ ಸೂಕ್ಷ್ಮವಾದದ್ದನ್ನು ಲೆಕ್ಕಿಸುವುದೇ ಇಲ್ಲ. ಕಾದುವಾಗ ಮತ್ತು ದೇವರನ್ನು ಅರಿಯುವಾಗ ಸ್ಥೂಲವಾಗಿ ಬೇರೆ ಬೇರೆಯಾಗಿ ಕಾಣುವ ಸಂಗತಿಗಳಿಗೆಲ್ಲ ಇರುವ ಬಿಡಿಸಲಾರದ ಸಂಬಂಧವೇ ಮುಖ್ಯ. ಹೀಗೆ ಸಂಬಂಧದ ಸ್ವರೂಪವನ್ನು ಅರಿಯುವುದೇ ಆಧ್ಯಾತ್ಮ ಎಂದು ಡಕ್ಕೆಯ ಬೊಮ್ಮಣ್ಣ ಹೇಳುತ್ತಿರುವಂತಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...