ವಚನ ವಿಚಾರ – ಸಂಬಂಧ

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ
ಕೈದೊ ಕೈಯೊ ಮನವೊ
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ
ಅಂಗವೊ ಲಿಂಗವೊ ಆತ್ಮನೊ
ಕಾಲಾಂತ ಭೀಮೇಶ್ವರಲಿಂಗವನರಿದುದು

[ಕೈದ-ಆಯುಧವನ್ನು]

ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ.

ಆಯುಧ ಹಿಡಿದು ಯುದ್ಧಮಾಡುವುದುಂಟಲ್ಲ, ಆಗ ಕಾದುತ್ತಿರುವುದು ಆಯುಧವೋ, ಆಯುಧ ಹಿಡಿದ ಕೈಯೋ, ಅಥವಾ ಮನಸ್ಸೋ? ದೇಹ ಮತ್ತು ದೇವರ ಸಂಬಂಧ ಅನ್ನುವುದುಂಟಲ್ಲ, ಆ ಸಂಬಂಧ ದೇಹದ್ದೋ, ದೇಹದೊಳಗಿನ ಮತ್ತು ದೇಹದ ಮೇಲಿರುವ ಲಿಂಗದ್ದೋ ಅಥವಾ ಆತ್ಮದ್ದೋ?

ಈ ವಚನ ಇರುವ ರೀತಿಯಲ್ಲೇ ವಚನಕಾರನ ನಿಲುವೂ ಸ್ಪಷ್ಟವಾಗಿಯೇ ಇದೆ. ಆಯುಧ ತನ್ನಷ್ಟಕ್ಕೇ ಕಾದಲಾರದು, ಹಿಡಿಯುವ ಕೈ ಬೇಕು; ಮತ್ತೆ ಅದಕ್ಕಿಂತ ಮಿಗಿಲಾಗಿ ಕಾದುವ ಮನಸ್ಸು ಬೇಕು. ಹಾಗೆ ನೋಡಿದರೆ ಯುದ್ಧದಲ್ಲಿ ತೊಡಗುವುದಕ್ಕೆ ಮನಸ್ಸೇ ಮುಖ್ಯ ಕಾರಣ. ಹಾಗೆಯೇ ಅಂಗ, ಲಿಂಗ ಇವೆಲ್ಲಕ್ಕಿಂತ ಒಳಗಿನ ಆತ್ಮ, `ನಾನು’, ಅನ್ನುವುದೇ ಮುಖ್ಯ.

ನಾವು ಕಣ್ಣಿಗೆ ಕಾಣುವ ಸ್ಕೂಲವಾದದ್ದನ್ನು ಮಾತ್ರ ಗಮನಿಸಿ ಸೂಕ್ಷ್ಮವಾದದ್ದನ್ನು ಲೆಕ್ಕಿಸುವುದೇ ಇಲ್ಲ. ಕಾದುವಾಗ ಮತ್ತು ದೇವರನ್ನು ಅರಿಯುವಾಗ ಸ್ಥೂಲವಾಗಿ ಬೇರೆ ಬೇರೆಯಾಗಿ ಕಾಣುವ ಸಂಗತಿಗಳಿಗೆಲ್ಲ ಇರುವ ಬಿಡಿಸಲಾರದ ಸಂಬಂಧವೇ ಮುಖ್ಯ. ಹೀಗೆ ಸಂಬಂಧದ ಸ್ವರೂಪವನ್ನು ಅರಿಯುವುದೇ ಆಧ್ಯಾತ್ಮ ಎಂದು ಡಕ್ಕೆಯ ಬೊಮ್ಮಣ್ಣ ಹೇಳುತ್ತಿರುವಂತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾಂಡವವನ ದಹನ
Next post ವನಿತೆ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…