Home / ಲೇಖನ / ಇತರೆ / ವಚನ ವಿಚಾರ – ಸಂಬಂಧ

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ
ಕೈದೊ ಕೈಯೊ ಮನವೊ
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ
ಅಂಗವೊ ಲಿಂಗವೊ ಆತ್ಮನೊ
ಕಾಲಾಂತ ಭೀಮೇಶ್ವರಲಿಂಗವನರಿದುದು

[ಕೈದ-ಆಯುಧವನ್ನು]

ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ.

ಆಯುಧ ಹಿಡಿದು ಯುದ್ಧಮಾಡುವುದುಂಟಲ್ಲ, ಆಗ ಕಾದುತ್ತಿರುವುದು ಆಯುಧವೋ, ಆಯುಧ ಹಿಡಿದ ಕೈಯೋ, ಅಥವಾ ಮನಸ್ಸೋ? ದೇಹ ಮತ್ತು ದೇವರ ಸಂಬಂಧ ಅನ್ನುವುದುಂಟಲ್ಲ, ಆ ಸಂಬಂಧ ದೇಹದ್ದೋ, ದೇಹದೊಳಗಿನ ಮತ್ತು ದೇಹದ ಮೇಲಿರುವ ಲಿಂಗದ್ದೋ ಅಥವಾ ಆತ್ಮದ್ದೋ?

ಈ ವಚನ ಇರುವ ರೀತಿಯಲ್ಲೇ ವಚನಕಾರನ ನಿಲುವೂ ಸ್ಪಷ್ಟವಾಗಿಯೇ ಇದೆ. ಆಯುಧ ತನ್ನಷ್ಟಕ್ಕೇ ಕಾದಲಾರದು, ಹಿಡಿಯುವ ಕೈ ಬೇಕು; ಮತ್ತೆ ಅದಕ್ಕಿಂತ ಮಿಗಿಲಾಗಿ ಕಾದುವ ಮನಸ್ಸು ಬೇಕು. ಹಾಗೆ ನೋಡಿದರೆ ಯುದ್ಧದಲ್ಲಿ ತೊಡಗುವುದಕ್ಕೆ ಮನಸ್ಸೇ ಮುಖ್ಯ ಕಾರಣ. ಹಾಗೆಯೇ ಅಂಗ, ಲಿಂಗ ಇವೆಲ್ಲಕ್ಕಿಂತ ಒಳಗಿನ ಆತ್ಮ, `ನಾನು’, ಅನ್ನುವುದೇ ಮುಖ್ಯ.

ನಾವು ಕಣ್ಣಿಗೆ ಕಾಣುವ ಸ್ಕೂಲವಾದದ್ದನ್ನು ಮಾತ್ರ ಗಮನಿಸಿ ಸೂಕ್ಷ್ಮವಾದದ್ದನ್ನು ಲೆಕ್ಕಿಸುವುದೇ ಇಲ್ಲ. ಕಾದುವಾಗ ಮತ್ತು ದೇವರನ್ನು ಅರಿಯುವಾಗ ಸ್ಥೂಲವಾಗಿ ಬೇರೆ ಬೇರೆಯಾಗಿ ಕಾಣುವ ಸಂಗತಿಗಳಿಗೆಲ್ಲ ಇರುವ ಬಿಡಿಸಲಾರದ ಸಂಬಂಧವೇ ಮುಖ್ಯ. ಹೀಗೆ ಸಂಬಂಧದ ಸ್ವರೂಪವನ್ನು ಅರಿಯುವುದೇ ಆಧ್ಯಾತ್ಮ ಎಂದು ಡಕ್ಕೆಯ ಬೊಮ್ಮಣ್ಣ ಹೇಳುತ್ತಿರುವಂತಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...