Home / ಕವನ / ಕವಿತೆ / ಯುದ್ಧ

ಯುದ್ಧ

ಯುದ್ಧ ಯುದ್ಧ ಯುದ್ಧ
ಎಲ್ಲೆಲ್ಲೂ ಯುದ್ಧ!
ದೇಶ ದೇಶಗಳ ಗಡಿಗಳಲ್ಲಿ,
ದ್ವೇಷದ ಉರಿಹತ್ತಿದಲ್ಲಿ,
ಮತಾಂಧತೆಯ ಮರುಳು ಮುತ್ತಿದಲ್ಲಿ
ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ
ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ.
ಉರುಳುವುದು ಹೆಣಗಳ ಸಾಲು ಸಾಲು.
ಭೂಮಿತಾಯಿಯ ಮಡಿಲೆಲ್ಲ ರಕ್ತದೋಕುಳಿ.

ಮನೆ ಮನದೊಳಗೂ ಕುರುಕ್ಷೇತ್ರ!
ಇಲ್ಲಿ ರಕ್ತದೋಕುಳಿಯಿಲ್ಲ
ಹರಿಯುತ್ತದೆ ಕಣ್ಣೀರ ಕೋಡಿ!
ಮಾಜುವುದಿಲ್ಲ ಕೆನ್ನೆಯ ಮೇಲಿನ ಕಣ್ಣೀರ ಗುರುತು
ತುಟಿಯ ಅಂಚಿನ ನೋವಿನ ಅವ್ಯಕ್ತ ಗೆರೆ.
ಇಲ್ಲಿ ಮೃತ್ಯು ಕುಣಿತವಿಲ್ಲ
ಹಣಗಳು ಉರುಳುವುದಿಲ್ಲ.
ಸಾಯುತ್ತವೆ ಮನಸ್ಸು ಮನಸ್ಸುಗಳು,
ಕಳಚಿಕೊಳ್ಳುತ್ತವೆ ಬೆಸೆದಿದ್ದ ಕೊಂಡಿಗಳು.

ಎಲ್ಲೆಲ್ಲೂ ನಡೆಯುತ್ತಲೇ ಇವೆ ಯುದ್ಧ
ಭಾವನೆಗಳ ಯುದ್ಧ, ಅಹಂಗಳ ಯುದ್ಧ
ಸಮಾನತೆಗಾಗಿ ಯುದ್ಧ, ಹಕ್ಕುಗಳಿಗಾಗಿ ಯುದ್ಧ
ಮನೆಮನೆಯಲ್ಲಿ ಮನಮನದಲ್ಲಿ ಯುದ್ಧ.
ಇಲ್ಲಿ ಸಮರ ವಿರಾಮವಿಲ್ಲ.
ಯಾರೂ ಶಾಂತಿಯ ಗೆರೆ ಎಳೆಯುವುದಿಲ್ಲ.
ನಮಗೆ ನಾವೇ ಶಾಂತಿದೂತರು
ಜೀವನ ಸಮರದಲಿ
ಗೀತೋಪದೇಶ ಮಾಡಬೇಕಾದವರು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...