ಯುದ್ಧ

ಯುದ್ಧ ಯುದ್ಧ ಯುದ್ಧ
ಎಲ್ಲೆಲ್ಲೂ ಯುದ್ಧ!
ದೇಶ ದೇಶಗಳ ಗಡಿಗಳಲ್ಲಿ,
ದ್ವೇಷದ ಉರಿಹತ್ತಿದಲ್ಲಿ,
ಮತಾಂಧತೆಯ ಮರುಳು ಮುತ್ತಿದಲ್ಲಿ
ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ
ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ.
ಉರುಳುವುದು ಹೆಣಗಳ ಸಾಲು ಸಾಲು.
ಭೂಮಿತಾಯಿಯ ಮಡಿಲೆಲ್ಲ ರಕ್ತದೋಕುಳಿ.

ಮನೆ ಮನದೊಳಗೂ ಕುರುಕ್ಷೇತ್ರ!
ಇಲ್ಲಿ ರಕ್ತದೋಕುಳಿಯಿಲ್ಲ
ಹರಿಯುತ್ತದೆ ಕಣ್ಣೀರ ಕೋಡಿ!
ಮಾಜುವುದಿಲ್ಲ ಕೆನ್ನೆಯ ಮೇಲಿನ ಕಣ್ಣೀರ ಗುರುತು
ತುಟಿಯ ಅಂಚಿನ ನೋವಿನ ಅವ್ಯಕ್ತ ಗೆರೆ.
ಇಲ್ಲಿ ಮೃತ್ಯು ಕುಣಿತವಿಲ್ಲ
ಹಣಗಳು ಉರುಳುವುದಿಲ್ಲ.
ಸಾಯುತ್ತವೆ ಮನಸ್ಸು ಮನಸ್ಸುಗಳು,
ಕಳಚಿಕೊಳ್ಳುತ್ತವೆ ಬೆಸೆದಿದ್ದ ಕೊಂಡಿಗಳು.

ಎಲ್ಲೆಲ್ಲೂ ನಡೆಯುತ್ತಲೇ ಇವೆ ಯುದ್ಧ
ಭಾವನೆಗಳ ಯುದ್ಧ, ಅಹಂಗಳ ಯುದ್ಧ
ಸಮಾನತೆಗಾಗಿ ಯುದ್ಧ, ಹಕ್ಕುಗಳಿಗಾಗಿ ಯುದ್ಧ
ಮನೆಮನೆಯಲ್ಲಿ ಮನಮನದಲ್ಲಿ ಯುದ್ಧ.
ಇಲ್ಲಿ ಸಮರ ವಿರಾಮವಿಲ್ಲ.
ಯಾರೂ ಶಾಂತಿಯ ಗೆರೆ ಎಳೆಯುವುದಿಲ್ಲ.
ನಮಗೆ ನಾವೇ ಶಾಂತಿದೂತರು
ಜೀವನ ಸಮರದಲಿ
ಗೀತೋಪದೇಶ ಮಾಡಬೇಕಾದವರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು
Next post ಬಿಡುಗಡೆ ಕ್ಷಣ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…