ಯುದ್ಧ

ಯುದ್ಧ ಯುದ್ಧ ಯುದ್ಧ
ಎಲ್ಲೆಲ್ಲೂ ಯುದ್ಧ!
ದೇಶ ದೇಶಗಳ ಗಡಿಗಳಲ್ಲಿ,
ದ್ವೇಷದ ಉರಿಹತ್ತಿದಲ್ಲಿ,
ಮತಾಂಧತೆಯ ಮರುಳು ಮುತ್ತಿದಲ್ಲಿ
ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ
ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ.
ಉರುಳುವುದು ಹೆಣಗಳ ಸಾಲು ಸಾಲು.
ಭೂಮಿತಾಯಿಯ ಮಡಿಲೆಲ್ಲ ರಕ್ತದೋಕುಳಿ.

ಮನೆ ಮನದೊಳಗೂ ಕುರುಕ್ಷೇತ್ರ!
ಇಲ್ಲಿ ರಕ್ತದೋಕುಳಿಯಿಲ್ಲ
ಹರಿಯುತ್ತದೆ ಕಣ್ಣೀರ ಕೋಡಿ!
ಮಾಜುವುದಿಲ್ಲ ಕೆನ್ನೆಯ ಮೇಲಿನ ಕಣ್ಣೀರ ಗುರುತು
ತುಟಿಯ ಅಂಚಿನ ನೋವಿನ ಅವ್ಯಕ್ತ ಗೆರೆ.
ಇಲ್ಲಿ ಮೃತ್ಯು ಕುಣಿತವಿಲ್ಲ
ಹಣಗಳು ಉರುಳುವುದಿಲ್ಲ.
ಸಾಯುತ್ತವೆ ಮನಸ್ಸು ಮನಸ್ಸುಗಳು,
ಕಳಚಿಕೊಳ್ಳುತ್ತವೆ ಬೆಸೆದಿದ್ದ ಕೊಂಡಿಗಳು.

ಎಲ್ಲೆಲ್ಲೂ ನಡೆಯುತ್ತಲೇ ಇವೆ ಯುದ್ಧ
ಭಾವನೆಗಳ ಯುದ್ಧ, ಅಹಂಗಳ ಯುದ್ಧ
ಸಮಾನತೆಗಾಗಿ ಯುದ್ಧ, ಹಕ್ಕುಗಳಿಗಾಗಿ ಯುದ್ಧ
ಮನೆಮನೆಯಲ್ಲಿ ಮನಮನದಲ್ಲಿ ಯುದ್ಧ.
ಇಲ್ಲಿ ಸಮರ ವಿರಾಮವಿಲ್ಲ.
ಯಾರೂ ಶಾಂತಿಯ ಗೆರೆ ಎಳೆಯುವುದಿಲ್ಲ.
ನಮಗೆ ನಾವೇ ಶಾಂತಿದೂತರು
ಜೀವನ ಸಮರದಲಿ
ಗೀತೋಪದೇಶ ಮಾಡಬೇಕಾದವರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು
Next post ಬಿಡುಗಡೆ ಕ್ಷಣ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…